Wednesday, June 18, 2025

Latest Posts

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ..

- Advertisement -

Spiritual: ಇತ್ತೀಚಿನ ದಿನಗಳಲ್ಲಿ ಸಾವು ಹೇಗೆ ಬರುತ್ತದೆ ಅಂತಾ ಹೇಳೋಕ್ಕೆ ಸಾಧ್ಯವೇ ಇಲ್ಲ. ಕೂತಲ್ಲೇ, ನಿಂತಲ್ಲೇ, ನಗುನಗುತ್ತಲೇ, ಊಟ ಮಾಡುತ್ತಲೇ, ಮಾತನಾಡುತ್ತಲೇ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಿಂದೆಲ್ಲಾ ವೃದ್ಧರು ಹೀಗೆ ರೋಗ ಬಂದು ಸಾಯುತ್ತಿದ್ದರು. ಆದರೆ ಈಗ ವೃದ್ಧರು, ಯುವಕರು, ಮಕ್ಕಳು ಎಲ್ಲರೂ ಸಡನ್ ಆಗಿ ಸಾಯುವ ಸ್ಥಿತಿ ತಲುಪಿದ್ದಾರೆ. ಹಾಗಾದರೆ ಅಕಾಲಿಕ ಮರಣಕ್ಕೆ ಕಾರಣವೇನು ಎಂದು ತಿಳಿಯೋಣ ಬನ್ನಿ..

ಧಾರ್ಮಿಕ ನಂಬಿಕೆಯ ಪ್ರಕಾರ ಅಕಾಲಿಕ ಮರಣ ನಾವು ಮಾಡುವ ಕೆಲ ತಪ್ಪಿನಿಂದ ಬರುತ್ತದೆ. ಅಗೌರವ ತೋರುವುದು, ಅಕ್ರಮ ಸಂಬಂಧ ಇರಿಸಿಕ“ಳ್ಳುವುದು, ಅಹಂಕಾರ, ಧರ್ಮವಿರೋಧಿ ಕಾರ್ಯ ಹೀಗೆ ಇಂಥ ಕರ್ಮಗಳಿಂದಾಗಿಯೇ ಅಕಾಲಿಕ ಮರಣ ಸಂಬವಿಸುತ್ತದೆ ಎನ್ನಲಾಗಿದೆ.

ಅಗೌರವ: ಹಿರಿಯರ ಬಗ್ಗೆ, ಗುರುಗಳ ಬಗ್ಗೆ ಗೌರವ ತೋರದಿರುವುದು ಕೂಡ ಅಕಾಲಿಕ ಮರಣಕ್ಕೆ ಕಾರಣವಾಗಿದೆ. ನಾನು, ನನ್ನದು, ನಾನೇ ಎನ್ನುವ ಅಹಂನಿಂದ ಮನುಷ್ಯ ತನ್ನಿಷ್ಟದಂತೆ ಬದುಕುತ್ತಿದ್ದು, ಗುರು, ಹಿರಿಯರ ಮಾತಿಗೆ ಬೆಲೆ ನೀಡುತ್ತಿಲ್ಲ. ಹೀಗೆ ಮನುಷ್ಯನಲ್ಲಿರುವ ಅಹಂಕಾರವೇ ಅವನನ್ನು ಸುಡುತ್ತಿದೆ.

ಧಾರ್ಮಿಕ ನಂಬಿಕೆ ಇಲ್ಲದಿರುವುದು: ಧರ್ಮ ಪಾಲನೆ ಮಾಡುವುದು, ದೇವರಲ್ಲಿ ನಂಬಿಕೆ ಇಡುವುದು, ಸದ್ಭಕ್ತಿ, ಸದ್ಭಾವನೆಯಿಂದ ಇರುವುದು, ಸನ್ನಡತೆ ತೋರುವುದು ಇದೆಲ್ಲ ಜೀವನದಲ್ಲಿ ಇರಬೇಕಾದ ಪ್ರಮುಖ ಅಂಶಗಳು. ಇದನ್ನೆಲ್ಲ ಅಳವಡಿಸಿಕ“ಳ್ಳದೇ, ದುಷ್ಚಟ, ದುರ್ನಡತೆ ಹ“ಂದಿರುವ ಮನುಷ್ಯನಿಗೆ ಬಹುಬೇಗ ಮರಣ ಸಂಭವಿಸುತ್ತದೆ.

ಅಕ್ರಮ ಸಂಬಂಧ: ಅಕ್ರಮ ಸಂಬಂಧದಿಂದ ಹಲವರು ತಮ್ಮ ಜೀವ, ಜೀವನವನ್ನು ಹಾಳು ಮಾಡಿಕ“ಂಡಿರುವ ಎಷ್ಟೋ ಉದಾಹರಣೆಗಳಿದೆ. ಅಕ್ರಮ ಸಂಬಂಧದಿಂದ ತಾವು ಮೃತರಾಗುವುದಲ್ಲದೇ, ಪತ್ನಿ ಮಕ್ಕಳನ್ನು ಅನಾಥ ಮಾಡಲಾಗುತ್ತಿದೆ.

ಬೇಡದ ವಸ್ತುಗಳ ಬಳಕೆ: ಹಿಂದಿನ ಕಾಲದಲ್ಲಿ ಬೆಳ್ಳಿ, ಹಿತ್ತಾಳೆ, ಮಣ್ಣಿನ ಪಾತ್ರೆ, ವಸ್ತುಗಳನ್ನು ಬಳಸುತ್ತಿದ್ದರು. ಆದರೆ ಈಗ ಎಲ್ಲವೂ ಪ್ಲಾಸ್ಟಿಕ್ ಮಯ. ಗ್ಲಾಸ್, ಪ್ಲೇಟ್, ಬಾಕ್ಸ್, ಸ್ಪೂನ್ ಎಲ್ಲವೂ ಪ್ಲಾಸ್ಟಿಕ್ ಮಯ. ಇದನ್ನೆಲ್ಲ ಬಳಸಿ ಬಳಸಿ, ನಮ್ಮ ದೇಹಕ್ಕೆ ಪ್ಲಾಸ್ಟಿಕ್ ಸೇರಿ ಹಲವು ರೋಗಗಳು ಬರುತ್ತಿದೆ. ಅಲ್ಲದೇ, ಇಂದಿನ ಕಾಲದಲ್ಲಿ ನಾವು ಬಳಸುವ ದಿನಸಿ, ತರಕಾರಿ, ಹಣ್ಣು, ಹಾಲು ಯಾವುದೂ ಪರಿಶುದ್ಧವಾಗಿಲ್ಲ. ಎಲ್ಲದರಲ್ಲೂ ಕಲಬೆರಕೆ ಇದೆ. ಇಂಥ ಆಹಾರ ಸೇವನೆಯಿಂದಲೇ ಜೀವನ ಕ್ಷಿಣಿಸುತ್ತ ಬರುತ್ತಿದೆ. ಅಕಾಲಿಕ ಮರಣ ಸಂಭವಿಸುತ್ತಿದೆ.

- Advertisement -

Latest Posts

Don't Miss