Telangana: ತೆಲಂಗಾಣ ಸಿಎಂ, ರೇವಂತ ರೆಡ್ಡಿ ಭಾಷಣ ಮಾಡುವ ವೇಳೆ, ಜಿಮ್ಗೆ ಹೋಗಿ, ಹಣ ಮತ್ತು ಸಮಯ ವ್ಯರ್ಥ ಮಾಡುವ ಬದಲು, ಜೋಳದ ರೊಟ್ಟಿಊಟ ತಿನ್ನಿ, ನಿಮ್ಮ ಬಟ್ಟೆ ನೀವೇ ವಾಶ್ ಮಾಡಿ, ಸಿಕ್ಸ್ ಪ್ಯಾಕ್ ಬರತ್ತೋ ಇಲ್ವೋ ನೋಡಿ ಎಂದು ಟಿಪ್ಸ್ ನೀಡಿದ್ದಾರೆ.
ಯುವಪೀಳಿಗೆಯವರು ಜಿಮ್ಗೆ ಹೋಗಿ ಹಣ ಖರ್ಚು ಮಾಡುವ ಬದಲು, ಸ್ಟಿರಾಯ್ಡ್ಗಳು ಅಥವಾ ಸಪ್ಲಿಮೆಂಟ್ ಅವಲಂಬಿಸುವ ಬದಲು, ಜೋಳದ ರೊಟ್ಟಿಊಟದಂಥ ಸಾಂಪ್ರದಾಯಿಕ ಊಟ ತಿಂದು, ನಿಮ್ಮ ದೈನಂದಿನ ಕೆಲಸಗಳನ್ನು ನೀವೇ ಮಾಡಿಕ“ಂಡರೆ, ಸಿಕ್ಸ್ ಪ್ಯಾಕ್ ಬರುತ್ತದೆ ಎಂದಿದ್ದಾರೆ.
ಸಾಂಪ್ರದಾಾಯಿಕ ಆಹಾರಗಳನ್ನು ಜನರು ಮರೆಯುತ್ತಿದ್ದಾರೆ. ಮಾಡರ್ನ್ ಶೈಲಿಯ ಜೀವನಕ್ಕೆ ಹೊಂದಿಕ“ಳ್ಳಲು ಹವಣಿಸುತ್ತಿದ್ದಾರೆ. ಆದರೆ ನಾವು ಮನೆಯಲ್ಲೇ ಮಾಡುವ ಆರೋಗ್ಯಕರ ಆಹಾರ ಸೇವನೆ ಮಾಡಿ, ಬಟ್ಟೆ ವಾಶ್ ಮಾಡುವಂಥ ಕೆಲಸ ಮಾಡಿದರೆ, ಅದರಿಂದಲೇ ನಾವು ಫಿಟ್ ಆಗಿರಬಹುದು. ಇವೆಲ್ಲವೂ ವ್ಯಾಯಾಮದ ರೀತಿಯೇ ಕೆಲಸ ಮಾಡುತ್ತದೆ ಎಂದು ರೇವಂತ್ ರೆಡ್ಡಿ ಸಲಹೆ ನೀಡಿದ್ದಾರೆ.