Bengaluru: ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ ಇಡಲು ಅವಕಾಶ ನೀಡಿದ್ದು, ಇದಕ್ಕೆ ಖುದ್ದು ಬಿಜೆಪಿಗರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಎಂ.ಪಿ.ರೇಣುಕಾಚಾಾರ್ಯ ಈ ಬ್ಗಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಮೂಲ್ ಜತೆ ಒಳ ಒಪ್ಪಂದ ಮಾಡಿಕ“ಂಡಿದ್ದು, ಇದು ಕನ್ನಡಿಗರು ಮತ್ತು ಕರ್ನಾಟಕಕ್ಕೆ ಮಾಡಿದ ಅವಮಾನ. ನಂದಿನಿ ಮಳಿಗೆಗೆ ಪ್ರಥಮ ಅವಕಾಶ ನೀಡಬೇಕು. ನಂದಿನಿ ಬ್ರ್ಯಾಂಡ್ಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆ ರಾಜ್ಯದಲ್ಲೂ ಅವಕಾಶವಿದೆ. ಆದರೆ ಕಾಂಗ್ರೆಸ್ ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹರಿಹಾಯ್ದಿದ್ದಾರೆ.
ಹಳ್ಳಿ ಕಡೆಗಳಲ್ಲಿ ಕೃಷಿ ಹೇಗೆ ರೈತನ ಅವಿಭಾಜ್ಯ ಅಂಗದಂತೆ ಇದೆಯೋ, ಅದೇ ರೀತಿ ಹೈನುಗಾರಿಕೆ ಕೂಡ, ಉತ್ತಮ ಉದ್ಯಮವಾಗಿದೆ. ಆದರೆ ನಂದಿನಿ ಬ್ರ್ಯಾಂಡ್ ಬದಲಾಗಿ, ಬೇರೆ ರಾಜ್ಯದ ಮಳಿಗೆ ಹಾಕಲು ಅವಕಾಶ ಮಾಡಿಕೋಡಲಾಗಿದೆ, ಇದು ಕನ್ನಡಿಗರಿಗೆ ಅಪಮಾನ ಮತ್ತು ನಮ್ಮ ರೈತನ ಹೊಟ್ಟೆ ಮೇಲೆ ಬರೆ ಎಳೆದ ಹಾಗೆ. ಇದನ್ನು ಸರ್ಕಾರ ಅರ್ಥ ಮಾಡಿಕ“ಳ್ಳಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಸಿ.ಟಿ.ರವಿ, ನಂದಿನಿ ಮಳಿಗೆ ಹಾಕಲು ಅವಕಾಶ ನೀಡಬೇಕು. ಇದಕ್ಕೆ ನಿರಾಕರಿಸಿದರೆ, ತಪ್ಪಾಗುತ್ತದೆ. ನಮ್ಮ ನಂದಿನಿ, ಮುಂಬೈ, ದೆಹಲಿ, ಉತ್ತರಪ್ರದೇಶ ಸೇರಿ ಹಲವು ಬೇರೆ ಬೇರೆ ರಾಜ್ಯಗಳಲ್ಲಿ ತನ್ನ ಮಳಿಗೆಗಳನ್ನು ತೆರೆದಿದೆ. ಹೀಗೆ ಕರ್ನಾಟಕದ ನಮ್ಮ ಮೆಟ್ರೋದಲ್ಲಿ ಮಳಿಗೆ ತೆರೆಯಲು ಅವಕಾಶ ಮಾಡಿ ಕ“ಡಲಿ. ಬೇಕಾದರೂ ಅಮೂಲ್ ಮತ್ತು ನಂದಿನಿ ಮಧ್ಯೆ ಸ್ಪರ್ಧೆ ನಡೆಯಲಿ. ಬರೀ ಮೆಟ್ರೋದಲ್ಲಷ್ಟೇ ಅಲ್ಲದೇ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಂದಿನಿ ಮಳಿಗೆ ತೆರೆಯುವ ಸಾಮರ್ಥ್ಯ ಹ“ಂದಲಿ ಎಂದು ನಾನು ಆಶಿಸುತ್ತೇನೆ ಎಂದಿದ್ದಾರೆ.