Tuesday, June 24, 2025

Latest Posts

ವಿಶ್ವಗುರು ಅಂತಾರೆ, ಆದರೆ ತಾವೇ ಕರೆದ ಸಭೆಗೆ ಮೋದಿ ಬರೋದಿಲ್ಲ, ಇದು ಅಹಂಕಾರ: ಖರ್ಗೆ ಬೇಸರ

- Advertisement -

Political News: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಮೇಲೆ ಸಂಕಟ ಬಂದಿದೆ. ನಾವೆಲ್ಲ ಸೇರಬೇಕು. ಅದಕ್ಕೆ ಪರಿಹಾರ ಸೂಚಿಸಬೇಕು ಅಂದುಕ“ಂಡಿದ್ದೇವು. ಆದರೆ ಸಭೆ ಕರೆದಿದ್ದ ಮೋದಿನೇ ಬರಲಿಲ್ಲ ಎಂದು ಮಲ್ಲಿಕಾಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್ ಅಟ್ಯಾಕ್ ಆಗಿದ್ದ ಮೇಲೆ ಸರ್ವಪಕ್ಷ ಸಭೆ ಕರೆದಿದ್ದರು. ಆದರೆ ಆ ಸಭೆಗೆ ಪ್ರಧಾನಿ ಮೋದಿನೇ ಗೈರಾಗಿದ್ದರು. ಇದು ಏನು ಸೂಚಿಸುತ್ತದೆ. ಅಹಂಕಾರ ಎಂದು ಖರ್ಗೆ ಹೇಳಿದ್ದಾರೆ.

ನಾವು ನಮ್ಮ ಕೆಲಸಗಳನ್ನು ಬಿಟ್ಟು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲ ಮುಖಂಡರು ಸಭೆಗೆ ಬಂದಿದ್ದೇವೆ. ಮೋದಿಯವರೇ ಬರಲಿಲ್ಲ. ಅವರು ಎಲೆಕ್ಷನ್ ಭಾಷಣ ಮಾಡಿ ಹೋದರು. ಪ್ರಪಂಚದಲ್ಲಿ ಜನ ಸಾಯ್ತಾ ಇದ್‌ದಾರೆ. ಆದರೆ ನೀವು ವಿಶ್ವಗುರು ಅಂತಾ ಹೇಳುತ್ತ, ಬಿಹಾರ ಚುನಾವಣೆಯಲ್ಲಿ ಭಾಗಿಯಾಗಿದ್ದೀರಿ. ಅಸ್ಸಾಮ ಎಲೆಕ್ಷನ್ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ನಮ್ಮ ದೇಶದ ಜನರು ನಿಮಗೆ ಸಪೋರ್ಟ್ ಮಾಡಿದ್ದಾರೆ. ಸೈನಿಕರಿಗೆ ಬೆಂಬಲ ನೀಡಿದ್ದಾರೆ. ಆದರೆ ಮೋದಿಯವರಿಗೆ ಅದು ತಲೆಯಲ್ಲಿ ಇದ್ದ. ಅವರು ಸೇರಿ ನಾವೆಲ್ಲ ಬೆಂಬಲಿಸಿದರೆ ಅಲ್ಲವಾ, ನಮ್ಮ ದೇಶ ಶಕ್ತಿಶಾಲಿಯಾಗೋದು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಅಲ್ಲದೇ, ಇಸ್ರೇಲ್ ದಾಳಿಯನ್ನು ನಿಲ್ಲಿಸಬೇಕು. ಪ್ರಪಂಚದಲ್ಲಿ ಎಲ್ಲಿಯೇ ಆದರೂ ಯುದ್ಧ ನಿಲ್ಲಿಸುವುದು ಉತ್ತಮ. ಅಮೆರಿಕದಂಥ ದೇಶ ಪ್ರಪಂಚದಲ್ಲಿ ಶಾಂತಿ ಹೇಗೆ ಕಾಪಾಡಬೇಕು ಎಂದು ಯೋಚಿಸುವುದು ಉತ್ತಮ ಅಂತಾ ಖರ್ಗೆ ಹೇಳಿದ್ದಾರೆ.

- Advertisement -

Latest Posts

Don't Miss