- Advertisement -
Belagavi News: ಸವದತ್ತಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಸವದತ್ತಿಯಲ್ಲಿ ನವಿಲು ತೀರ್ಥ ಡ್ಯಾಮ್ನಿಂದ ನೀರು ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ಬಳಿ ಮಳೆ ಜೋರಾಗಿದ್ದು, ಮಲಪ್ರಭಾ ನದಿ ತುಂಬಿ ತುಳುಕುತ್ತಿದೆ. ಈ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಳ ಹಿನ್ನೆಲೆ ನವಿಲು ತೀರ್ಥ ಜಲಾಶಯ ಭರ್ತಿಯಾಗಿದೆ. ಹಾಗಾಗಿ 4ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಡ್ಯಾಮ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ. ಮಲಪ್ರಭಾ ನದಿಗೆ ಸದ್ಯ 07ಸಾವಿರಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಆಗಿದ್ದು, 2079.50 ಸಾಮರ್ಥ್ಯ ಹೊಂದಿರುವ ನವಿಲು ತೀರ್ಥ ಡ್ಯಾಮನಲ್ಲಿ 2077.30 ನೀರು ಸಂಗ್ರಹವಾಗಿದೆ.ಮಲಪ್ರಭಾ ನದಿ ತೀರ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
- Advertisement -