Tumakuru News: ತುಮಕೂರು: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಕೆದಾಟು ಯೋಚನೆ ಬಗ್ಗೆ ನಮ್ಮ ಪರ ತೀರ್ಪು ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಬೇಕಾಗುತ್ತೆ. ಆ ವಿಚಾರದ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದಿದ್ದಾರೆ.
ಕಬ್ಬು ಬೆಳೆಗೆ ಬೆಲೆ ತೀರ್ಮಾನ ಮಾಡುವಂತದ್ದು ಕೇಂದ್ರ ಸರ್ಕಾರ. 2025 -26ಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಟನ್ನಿಗೆ ಇಷ್ಟು ಬೆಲೆ ಅಂತ ತೀರ್ಮಾನ ಮಾಡಿದ್ದಾರೆ. ಕರ್ನಾಟಕದ ಮಟ್ಟಿಗೆ ಹೆಚ್ಚಿನ ಬೆಲೆ ಕೊಡಬೇಕಾಗುತ್ತೆ ಅಂತ ಕೇಂದ್ರದ ಮುಂದೆ ವಾದ ಇಡುವ ಸಾಧ್ಯತೆ ಇದೆ. ಎತ್ತಿನಹೊಳೆ, ಹೇಮಾವತಿ,ಕೃಷ್ಣ ಮೇಲ್ದಂಡೆ ಎತ್ತರ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಜಿಎಸ್ಟಿ ಕಟ್ಟೋದ್ರಲ್ಲಿ ಇಡೀ ದೇಶದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಜಿಎಸ್ಟಿ ಲಿ ಹೆಚ್ಚಿನ ಪಾಲು ನಮಗೆ ಬರ್ತಿಲ್ಲ. ಅದನ್ನು ಕೂಡ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ. ರಾಜ್ಯದ ಹಿತ ದೃಷ್ಟಿಯಿಂದ ಇವೆಲ್ಲ ಚರ್ಚೆ ಮಾಡುತ್ತಾರೆ ಎಂದು ಗೃಹಸಚಿವರು ಹೇಳಿದ್ದಾರೆ.
ತುಮಕೂರಿಗೆ ಮೆಟ್ರೋ ಡಿಪಿಆರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೆ ಡಿಪಿಆರ್ ಟೆಂಡರ್ ಕರೆದಿದ್ದಾರೆ. ಹೈದರಾಬಾದ್ ಮೂಲದ ಕಂಪನಿಗೆ ಕಾರ್ಯಸಾಧು ವರದಿ ತಯಾರಿಕೆಗೆ ಕೊಟ್ಟಿದ್ವಿ, ಅವರು ಕೊಟ್ಟರು. ನಂತರ ಸರ್ಕಾರ ಅದರ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡಿ ಮುಂದುವರೆಯ ಬಹುದು ಅಂತ ತೀರ್ಮಾನ ಮಾಡಿದೆ. ಈಗ ಡಿಪಿಆರ್ ಮಾಡಬೇಕು ಅಂತ ತೀರ್ಮಾನ ಮಾಡಿದ್ದಾರೆ. ಅದನ್ನು ಕೂಡ ಬಿಎಂಆರ್ಸಿಎಲ್ ಅವರೇ ಮಾಡಬೇಕು. ಅವರೇ ಟೆಂಡರ್ ಕರಿಬೇಕು ಅದಕ್ಕೆ ನಾಲ್ಕೈದು ತಿಂಗಳು ಬೇಕಾಗುತ್ತೆ ಅಂತ ಕೇಳಿದ್ದಾರೆ. ಈಗ ಟೆಂಡರ್ ಕರಿದಿದ್ದಾರೆ ಯಾರಿಗೆ ಸಿಗುತ್ತೆ ಅಂತ ಗೊತ್ತಿಲ್ಲ. ಅವರು ನಾಲ್ಕು ತಿಂಗಳಲ್ಲಿ ಮಾಡಿಕೊಡಬೇಕು ಅಂತ ಸೂಚನೆ ಕೊಟ್ಟಿದ್ದೇವೆ ಎಂದು ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಬೆಂಗಳೂರು ಮೂಲದ ಮಹಿಳೆಗೆ ಡಿಜಿಟಲ್ ಅರೆಸ್ಟ್ ಪ್ರಕರಣದ ಬಗ್ಗೆ ಮಾತನಾಡಿರುವ ಪರಮೇಶ್ವರ್, ಸೈಬರ್ ಕ್ರೈಂ ಇಡೀ ದೇಶದಲ್ಲಿ ಜಾಸ್ತಿಯಾಗಿದೆ. ಟೆಕ್ನಾಲಜಿ ಉಪಯೋಗಿಸಿಕೊಂಡು ಪ್ರಪಂಚಾದ್ಯಂತ ಅಪರಾಧಗಳು ನಡಿತಿವೆ. ಟೆಕ್ನಾಲಜಿ ಅಡ್ವಾಂಟೇಜ್ ಇದೆ, ಟೆಕ್ನಾಲಜಿ ಡಿಸ್ ಅಡ್ವಾಂಟೇಜ್ ಇದೆ. ನಮ್ಮ ದೇಶದಲ್ಲಿ ಸೈಬರ್ ಕ್ರೈಂ ಬಹಳ ಜಾಸ್ತಿ ನಡೀತಿದೆ. ಎಲ್ಲ ರಾಜ್ಯಗಳಲ್ಲೂ ನಡೀತಿದೆ. ರಾಜ್ಯದಲ್ಲಿ 25000 ಹೆಚ್ಚು ಪ್ರಕರಣಗಳು ಒಂದು ವರ್ಷದಲ್ಲಿ ದಾಖಲಾಗಿವೆ. ಅದನ್ನ ನಿಯಂತ್ರಣ ಮಾಡ್ಲಿಕ್ಕೆ ನಾವು ಬಹಳಷ್ಟು ಪ್ರಯತ್ನ ಮಾಡ್ತಿದ್ದೇವೆ.
ಅಕೌಂಟ್ ಫ್ರೀಜ್ ಮಾಡಿ ಹಣ ವಾಪಸ್ ಕೊಡಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯಿಂದ 31 ಕೋಟಿ ರೂಪಾಯಿಯನ್ನ ಒಂದು ವರ್ಷದಿಂದ ತೆಗ್ದಿದ್ದಾರೆ. ಅವರಿಗೆ ತೊಂದರೆ ಆಗುತ್ತೆ ಅಂತ ಅವರು ಹೇಳಿಕೊಂಡಿಲ್ಲ ಈಗ ಪೊಲೀಸರು ಕೇಸ್ ತೆಗೆದು ಕೊಂಡಿದ್ದಾರೆ, ವಿ ವಿಲ್ ಹಂಟ್ ಎಂದು ಗೃಹಸಚಿವರು ಹೇಳಿದ್ದಾರೆ.
ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣ ನಾಲ್ವರ ಬಿಡುಗಡೆ ವಿಚಾರದ ಬಗ್ಗೆ ಮತನಾಡಿರುವ ಜಿ.ಪರಮೇಶ್ವರ್ ಅವರು, ಕೇಂದ್ರದಲ್ಲಿ ವಿಧ ವಿಧವಾದ ಏಜೆನ್ಸಿಗಳಿವೆ. ಎನ್ ಐಎ, ಐಬಿ, ರಾ ಇದೆ. ಇವರೆಲ್ಲರು ಕೋ ಆರ್ಡಿನೇಟ್ ಯಿಂದ ಕಂಡಿಡಿತಾರೆ. ಕೆಲವೊಂದು ಸಂದರ್ಭದಲ್ಲಿ ಗುಮಾನಿ ಮೇಲೆ ಕೆಲವರನ್ನ ಹಿಡಿದುಕೊಂಡು ಬರ್ತಾರೆ. ಪ್ರೂಫ್ ಸಿಗದೇ ಇದ್ದಾಗ, ಬಿಟ್ ಕಳಿಸುತ್ತಾರೆ. ಆ ರೀತಿ ಆಗಿರಬಹುದು ಅಂತ ನಾನು ಭಾವಿಸಿದ್ದೇನೆ. ಈಗ ಬೇರೆಯವರು ಸಿಕ್ಕಿದ್ದಾರಲ್ಲ. ಯಾರ್ ಮಾಡಿದ್ದಾರೊ ಅವರನ್ನು ಪೆಸಿಫಿಕ್ ಆಗಿ ಹಿಡ್ಕೊಂಡಿದ್ದಾರೆ.
ಮುಂದೆ ಎಲ್ಲೆಲ್ಲಿ ಹೋಗುತ್ತೆ, ಲಿಂಕ್ ಎಲ್ಲೆಲ್ಲಿಗೆ ಬೆಳೆದಿದೆ, ಯಾರು ಇದರ ಹಿಂದೆ ಇದ್ದಾರೆ. ಇವರೆಲ್ಲ ವೈಟ್ ಕಲರ್ ಕ್ರಿಮಿನಲ್ಗಳು. ಬೇರೆ ಬೇರೆ ರಾಜ್ಯದಲ್ಲೂ ಇದನ್ನ ಮಾಡಬೇಕು ಅಂತ ಸಂಚುರೂಪಿಸಿದ್ರು ಅಂತ ಮಾಧ್ಯಮಗಳಲ್ಲಿ ನಾನು ನೋಡಿದೆ. ಅದು ಯಾರು ಅಂತ ಗೊತ್ತಾದ್ರೆ ಮೂಲ ಯಾರು ಅಂತ ಕಂಡುಹಿಡಿತ್ತಾರೆ ಎಂದು ಸಚಿವರು ಹೇಳಿದ್ದಾರೆ.
ಪೊಲೀಸ್ ನೇಮಕಾತಿಯಲ್ಲಿ ೩% ಕ್ರೀಡಾಪಟುಗಳಿಗೆ ಮೀಸಲು ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಈಗಾಗಲೇ 180 ಜನ ನೇಮಕಾತಿಯಾಗಿದೆ. ಕಾನ್ಸ್ಟೇಬಲ್ ಸಬ್ ಇನ್ಸ್ಪೆಕ್ಟರ್ ಈಗಾಗಲೇ ಆಗಿದ್ದಾರೆ. ಇದನ್ನು ನಮ್ಮ ಸರ್ಕಾರವೇ ಮಾಡಿದ್ದು. ಇದು ನಿರಂತರವಾಗಿರುತ್ತೆ ಎಂದಿದ್ಾದಾರೆ..
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವರು, ಮೊದಲನೆಯದಾಗಿ ಸಚಿವ ಸಂಪುಟ ಪುನರಚನೆ ಆಗಬೇಕು. ಖಾತೆಗಳು ಬದಲಾವಣೆ ಆಗ್ತವೆ ಅನ್ನೋ ಸಂದರ್ಭ ಬರಬೇಕು. ನನಗೇನಾದ್ರೂ ಪೊಲೀಸ್ ಇಲಾಖೆ ಮೇಲೆ ಕೋಪ ಇದ್ರೆ ಬೇರೆ ಖಾತೆ ಕೇಳಬೇಕು. ಇದ್ಯಾವುದು ನಡೆದಿಲ್ಲ, ಹಾಗಾಗಿ ಏನು ನಡೆಯಲ್ಲ ಎಂದು ಗೃಹಸಚಿವರು ಹೇಳಿದ್ದಾರೆ.
ಪೊಲೀಸ್ ಇಲಾಖೆ ಅಂತರ್ ಜಿಲ್ಲೆ ವರ್ಗಾವಣೆ ವಿಚಾರದ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದು, ಪತಿ ಪತ್ನಿಯರ ಪ್ರಕರಣದಲ್ಲಿ ನಿಯಮಗಳನ್ನು ಮಾಡಿದ್ದೇವೆ. ಆ ನಿಯಮದ ಅಡಿಯಲ್ಲಿ ವರ್ಗಾವಣೆ ಮಾಡಿಕೊಡ್ತಿವಿ. ಮಾನವೀಯತೆ ದೃಷ್ಟಿಯಿಂದ ಹೆಚ್ಚು ವರ್ಷ ಒಂದೇ ಜಿಲ್ಲೆಯಲ್ಲಿ ಇದ್ದರೆ ಅದಕ್ಕೂ ಕೆಲ ನಿಯಮಗಳಿವೆ. ಆ ನಿಯಮಗಳ ಅಡಿಯಲ್ಲಿ ಮಾಡಿಕೊಡ್ತಾರೆ.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದ ಪೊಲೀಸ್ ಸ್ಪರ್ಧಿಗಳಿಗೆ ವಿಶೇಷ ಭತ್ಯೆ ವಿಚಾರಕ್ಕೆ ಮಾತನಾಡಿದ ಅವರು, ಅಂತ ನಿಯಮಗಳನ್ನ ಮಾಡಿಲ್ಲ, ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡ್ತಿವಿ. ಅವರು ನ್ಯಾಷಿನಲ್, ಇಂಟರ್ ನ್ಯಾಷಿನಲ್ ಮಟ್ಟದಲ್ಲಿ ಹೋಗಿ ಮೆಡಲ್ ತರೊದೇ ದೊಡ್ಡವಿಚಾರ. ಮುಂದಿನ ದಿನಗಳಲ್ಲಿ ಪ್ರಮೋಷನ್ ಕೊಡುವಾಗ ಪರಿಗಣಿಸುತ್ತೇವೆ ಎಂದಿದ್ದಾರೆ.

