ಮನ್‌ ಕಿ ಬಾತ್‌ ನಲ್ಲಿ ಬಂದು ಪಾಠ ಮಾಡಲಿ! ಸಂತೋಷ್‌ ಲಾಡ್

ಎಸ್ಐಆರ್ ಅಡಿ ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತ ತೆಗೆದು ಹಾಕಲಾಯಿತು. ಈ ದೇಶದಲ್ಲಿ ಇರುವಂತ ಅವರಿಗೆ ಮತ ಹಾಕಲು ಅವಕಾಶ ಕೊಡಲಿಲ್ಲ, ಹೆಸರು ಸರಿ ಇರಲಿಲ್ಲ ಎಂದು ಮತ ಹಾಕಲು ಅವಕಾಶ ಕೊಡಲಿಲ್ಲ. ದೇಶದಲ್ಲಿ 13 ಕೋಟಿ ಮತದಾರರನ್ನು ಟಾರ್ಗೆಟ್ ಮಾಡಲಾಗಿದೆ. ಯುಪಿಯಲ್ಲಿ 3 ಕೋಟಿ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರ ಹೆಸರು ತೆಗೆದುಹಾಕಿದರು. ಮುಂದೆ ಕರ್ನಾಟಕದಲ್ಲಿ ಈ ಕೆಲಸ ಮಾಡುತ್ತಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ 70 ಲಕ್ಷ, ಬಿಹಾರದಲ್ಲಿ 45 ಲಕ್ಷ ಮತ ತೆಗೆದು ಹಾಕಿದರೆ, ಮಹಾರಾಷ್ಟ್ರದಲ್ಲಿ ಉಲ್ಟಾ ಅಂದರೆ 45 ಲಕ್ಷ ಮತದಾರರನ್ನು ಜಮಾ ಮಾಡಿದ್ದಾರೆ, ಹರಿಯಾಣದಲ್ಲೂ 25 ಲಕ್ಷ ಸೇರ್ಪಡೆ ಮಾಡಿದ್ದಾರೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳುವವರು ಯಾರು? ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ.

27 ಲಕ್ಷ ಮತ ಹಾಕಲು ಕೇಂದ್ರದವರು ಬಿಡಲಿಲ್ಲ, ಅವರು ಬದುಕಿದ್ದಾರಲ್ಲ, ಅವರ ಅರ್ಜಿ ಪರಿಶೀಲನೆ ಆದ ಮೇಲೆ ಏನು ಮಾಡಬೇಕು. ನೀಟ್ ಸೋರಿಕೆ ಬಗ್ಗೆ ಲೆಕ್ಕ ಇಲ್ಲ, ಈ ದೇಶದಲ್ಲಿ ಒಬ್ಬ ದೇವರಿದ್ದಾರೆ, ಆ ಹೆಸರಿಗೆ ಜೈ ಎನ್ನಬೇಕು. ನಮ್ಮ ದೇವರು ಬಂಗಾರ ಖರೀದಿ ಮಾಡಬೇಡಿ, ಡೀಸೆಲ್ ಮತ್ತು ಪೆಟ್ರೋಲ್ ಖರ್ಚು ಮಾಡಬೇಡಿ ಜಾಸ್ತಿ ವಾಹನದಲ್ಲಿ ಓಡಾಡಬೇಡಿ ಎಂದಿದ್ದಾರೆ. ಅವರು ಮಾತ್ರ ಓಡಾಡಬಹುದು, ಇವರು ನಾಲ್ಕು ದೇಶಕ್ಕೆ ಪ್ರವಾಸ ಹೋಗುತ್ತಿದ್ದಾರೆ. ಪೆಟ್ರೋಲ್ ವಾಹನ, ಡೀಸೆಲ್ ವಾಹನದಲ್ಲಿ, ಮತ್ತು ಹೆಲಿಕಾಪ್ಟರ್‌ನಲ್ಲಿ ಅವರು ಓಡಾಡಬಹುದು. ಕಳೆದ ಐದು ಚುನಾವಣೆಯಲ್ಲಿ ಇವರು ಇಡೀ ದೇಶದ ಗುಡಿ ಗುಂಡಾರದಲ್ಲಿ ಫೋಟೋ ಶೂಟ್ ನೋಡಿದ್ದೇವೆ. ಇದು ಮುಗಿದ ಮೇಲೆ ಇವರು ಎರಡು ತಿಂಗಳು ಎಲ್ಲೂ ಕಾಣಿಸಿಕೊಂಡಿಲ್ಲ, ಎಂದು ಮೋದಿ ಕುರಿತು ಲಾಡ್ ವ್ಯಂಗ್ಯವಾಡಿದರು.

ಚುನಾವಣೆ ಬಂದಾಗ ಮತ್ತೆ ಅದೇ, ಕಳೆದ 12 ವರ್ಷಗಳಿಂದ ಇದೇ ನಡೆದಿದೆ. ದೇಶದ ಜನರು ಅರ್ಥ ಮಾಡಿಕೊಳ್ಳಬೇಕು, ಇವರಿಂದ ದೇಶಕ್ಕೆ ಏನೂ ಆಗುವುದಿಲ್ಲ. ಮೋದಿ ಅವರು ಆನ್ ಲೈನ್ ಕ್ಲಾಸ್ ಬಗ್ಗೆ ಮಾತನಾಡಿದ್ದಾರೆ. ಅವರ ಅವಧಿಯಲ್ಲೇ ಒಂದು ಲಕ್ಷ ಶಾಲೆ ಮುಚ್ಚಿವೆ. ಇದು ನಾನು ಹೇಳಿದ್ದಲ್ಲ, ಅವರದ್ದೇ ಸರ್ಕಾರ ಹೇಳಿದ ಅಂಕಿ ಸಂಖ್ಯೆ. ಮೋದಿ ಅವರೇ ಆನ್ ಲೈನ್ ಶಾಲೆ ಬೇಡ, ಬಂಗಾರ ಖರೀದಿ ಬೇಡ, ಡೀಸೆಲ್, ಪೆಟ್ರೋಲ್ ಹೆಚ್ಚು ಬಳಕೆ ಬೇಡ ಎಂದಿದ್ದಾರೆ. ಹಾಗಿದ್ದರೆ ಎಲ್ಲ ಶಾಲೆ ಒಂದು ವರ್ಷ ಬಂದ್ ಮಾಡಿ ಬಿಡಿ. ನೀವೇ ಮನ್ ಕೀ ಬಾತ್‌ನಲ್ಲಿ ಬಂದು ದೇಶದ ಯುವಕರಿಗೆ ಪಾಠ ಮಾಡಿ. ವಾತಾವರಣ ಹೇಗಿರಬೇಕು, ಒಲಿಂಪಿಕ್ ಹೇಗೆ ಗೆಲ್ಲಬೇಕು, ಫುಟಬಾಲ್, ಕ್ರಿಕೆಟ್ ಹೇಗೆ ಆಡಬೇಕು ಎಂದು ಹೇಳಿ. ಶಾಲೆಗಳನ್ನೇ ಮುಚ್ಚಿ ಬಿಡ್ರಿ, ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವುದರಲ್ಲಿ ಅರ್ಥ ಇಲ್ಲ. ದೇಶದ ಪ್ರಧಾನಿ ಆನ್ ಲೈನ್ ಕ್ಲಾಸ್ ಬಗ್ಗೆ ಹೇಳುವುದು ಸರಿನಾ? ಇಡೀ ದೇಶದಲ್ಲಿ ಅದಕ್ಕೆ ಟ್ವೀಟ್ ಆರಂಭ ಆಗುತ್ತವೆ ನೋಡಿ ಎಂದರು.

ಹಿಂದೆ ಇಂದಿರಾ ಗಾಂಧಿ ಇದ್ದಾಗ ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಇತ್ತು. ಬಹಳ ಕಷ್ಟ ಸಮಯದಲ್ಲಿ ದೇಶ ಇತ್ತು, ಚೀನಾ ಕೂಡ ಹಾಗೆಯೇ ಇತ್ತು. ನೀವು ಈಗ ಲಾರ್ಜೆಸ್ಟ್ ಎಕಾನಮಿ ಪವರ್‌ಫುಲ್ ಎನ್ನುತ್ತಿದ್ದಾರೆ. ನೀವು ಪವರ್ ಫುಲ್ ಇದ್ದರೂ ದೇಶಕ್ಕೆ ಈ ಸ್ಥಿತಿ ಬಂದಿದ್ದು ಏಕೆ? ದೇಶದ ಸ್ಥಿತಿ ಸರಿ ಇಲ್ಲ, ಬಂಗಾರ ಖರೀದಿ ಯಾಕೆ ಬೇಡ ಎಂಬುದರ ಒಳಮರ್ಮದ ಸತ್ಯವನ್ನು ಇವರು ಒಪ್ಪಿಕೊಳ್ಳಬೇಕು. ನಾವು ಹಿಂದೆ ದೇಶದ ಪರಿಸ್ಥಿತಿ ಒಪ್ಪಿಕೊಂಡು ಹೇಳಿದ್ದೇವೆ, ಈಗ ಇವರು ಸತ್ಯ ಒಪ್ಪಿಕೊಂಡು ಹೇಳಲಿ. ಮಧ್ಯಮ ವರ್ಗದ ಜನರು ಹೆಚ್ಚು ಆಡಂಬರ ಮದುವೆ ಬೇಡ ಅಂತಾರೆ. ಇವರು ಅಂಬಾನಿ ಮದುವೆಯಲ್ಲಿ ಹೋಗಿ ಡ್ಯಾನ್ಸ್ ಮಾಡುತ್ತಾರೆ. ಬೇರೆಯವರನ್ನ ಕರೆ ತಂದು 20 ಕೋಟಿ ಕೊಟ್ಟು ಡ್ಯಾನ್ಸ್ ಮಾಡಿಸುತ್ತಾರೆ. ಮಧ್ಯಮ ವರ್ಗದವರು ಕಟ್ಟುವ ದುಡ್ಡಿನಲ್ಲಿ ಅಂಬಾನಿ 300 ಲಕ್ಷ ಕೋಟಿ ವ್ಯವಹಾರ ಮಾಡುತ್ತಿದ್ದಾನೆ, ಅದು ಯಾರ ದುಡ್ಡು? ಇವರು ಏನು ಸಂಶೋಧನೆ ಮಾಡಿ ದುಡ್ಡು ಮಾಡಿದ್ದಲ್ಲ ಎಂದರು.

ಇವರು ದೇಶದ ಸ್ಥಿತಿ ಬಗ್ಗೆ ಮಾತನಾಡುತ್ತಾರೆ. ಕಂಗನಾ ಮಾತನಾಡಿದ್ದನ್ನು ನಾವು ಕೇಳಬೇಕು. ಆರ್ಥಿಕ ಸ್ಥಿತಿ ದಿವಾಳಿ ಎದ್ದಿದೆ, ಇದನ್ನು ಅವರು ಹೇಳಬೇಕು. ಚಿನ್ನ ಖರೀದಿ ಮಾಡಿದರೆ ಏನು ಸಮಸ್ಯೆ ಆಗಲಿದೆ ಎಂದು ಹೇಳಬೇಕು. ಇದಕ್ಕೆ ನೆಹರು ಕಾರಣವಾ, ಪೆಟ್ರೋಲ್ ವಾಹನ ಓಡಿಸಬೇಡಿ ಎಂದು ನೆಹರು ಹೇಳಿದರಾ? ಎಂದು ಲಾಡ್ ಮೋದಿ ವಿರುದ್ದ ಕಿಡಿಕಾರಿದ್ದಾರೆ.

About The Author