Hassan News: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದ ನಿವಾಸದಲ್ಲಿ ತಮ್ಮನ ಮದುವೆಯಲ್ಲಿ ಖುಷಿ ಖುಷಿಯಾಗಿ ಭಾಗಿಯಾಗಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯನ್ನು, ಸಂಭ್ರಮ ಮದುವೆ ಮನೆಗೆ ಬಂದು ಪೋಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಜಾಕ್ ಎಂಬುವವರು ನೀಡಿದ ದೂರಿನ ಮೇರೆಗೆ ಪುನೀತ್ರನ್ನು ಬಂಧಿಸಲಾಗಿದೆ. ಮುಸ್ಲಿಂ ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಈ ಬಂಧನವಾಗಿದೆ. ಇನ್ನು ಮದುವೆ ಸಂಭ್ರಮದ ಮಧ್ಯೆ ಮಗನ ಬಂಧನವಾಗಿದ್ದಕ್ಕೆ ಪುನೀತ್ ತಾಯಿ ಕಣ್ಣೀರು ಹಾಕಿದ್ದಾರೆ.
ಇನ್ನು ಬಂಧನದ ವೇಳೆ ಪುನೀತ್ ಕೆರೆಹಳ್ಳಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದು ರಾಜಕೀಯ ಪ್ರೇರಿತ ಬಂಧನವಾಗಿದ್ದು. ಕಾಂಗ್ರೆಸ್ ತನ್ನ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಅಬ್ದುಲ್ ರಜಾಕ್ ವಿರುದ್ಧ ನಾನೂ ದೂರು ನೀಡಿದ್ದೆ. ಆದರೆ ಆತನನ್ನು ಬಂಧಿಸದೇ, ನನ್ನನ್ನು ಬಂಧಿಸಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಮತ್ತು ನನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಪುನೀತ್ ಆರೋಪಿಸಿದ್ದಾರೆ.
Hindu activist Puneeth Kerehalli has been arrested based on false accusations.
After recently filing a complaint at Basavanagudi Police Station over threats to his life, he now questions why the complainant has become the accused.
He said that action is politically motivated. pic.twitter.com/hnvx9x3w54
— 🚩Mohan Gowda🇮🇳 (@Mohan_HJS) July 3, 2026




