Hassan News: ಮಾಜಿ ಪ್ರಧಾನಿಗಳಾದ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ತಮ್ಮ 85 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಇಂದು ಹರದನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಮಾವಿನ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನರವೇರಿದ್ದು, ಹಲವು ಗಣ್ಯರು ಅಂತಿಮನಮನದಲ್ಲಿ ಭಾಗಿಯಾಗಿದ್ದರು. ಸಕಲ ಸರ್ಕಾರಿ ಗೌರವದ ಜತೆ ಚೆನ್ನಮ್ಮನವರ ಅಂತ್ಯಕ್ರಿಯೆ ನೆರವೇರಿತು.
ಮೂರು ಸುತ್ತು ಕುಶಾಲುತೋಪು ಸಿಡಿಸಿ, ರಾಷ್ಟ್ರಗೀತೆ ಹಾಡಿ, ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ 2 ನಿಮಿಷ ಮೌನಾಚರಣೆ ಸಲ್ಲಿಸಿ, ಸಿಎಂ ಡಿ.ಕೆ.ಶಿವಕುಮಾರ್ ದೇವೇಗೌಡರ ಕಾಲಿಗೆ ನಮಸ್ಕರಿಸಿ, ರಾಷ್ಟ್ರಧ್ವಜ ನೀಡಿದರು.
ಬಳಿಕ ದೇಹ ಶುದ್ಧ ಮಾಡಿಸಿ, ಅಂತಿಮ ವಿಧಿ ವಿಧಾನ ನೆರವೇರಿಸಿದರು. ಹಿರಿಯ ಮಗ ಮತ್ತು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪು್ತ್ರ ರೇವಣ್ಣ ತಾಯಿಯ ಹಣೆಗೆ ಮುತ್ತಿರಿಸಿ, ಅಪ್ಪಿಕ“ಂಡರು. ಬಳಿಕ ಒಕ್ಕಲಿಕ ಸಂಪ್ರದಾಯದಂತೆ ಅಂತಿಮಸಂಸ್ಕಾರ ನೆರವೇರಿಸಲಾಯಿತು.
ಈ ವೇಳೆ ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿ.ವೈ.ವಿಜಯೇಂದ್ರ, ಬಿ.ವೈ, ರಾಘವೇಂದ್ರ, ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ರಂಭಾಪುರಿ ಶ್ರೀಗಳು ಉಪಸ್ಥಿತರಿದ್ದರು.
ಅಮ್ಮನ ಅಂತಿಮಯಾತ್ರೆ 🙏https://t.co/gv1dTgqSBt#ಚನ್ನಮ್ಮದೇವೇಗೌಡರು
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) July 20, 2026




