ವರ್ಷದ ಮೊದಲ ಹಬ್ಬವೆಂದರೆ ಸಂಕ್ರಾಂತಿ. ನಮ್ಮ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ. ಅಲ್ಲದೇ ಬೇರೆ ಬೇರೆ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಹಾಗಾದ್ರೆ ಸಂಕ್ರಾಂತಿ ಹಬ್ಬದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಸಮೃದ್ಧಿಯ ಸಂಕೇತವಾಗಿರುವ ಸಂಕ್ರಾಂತಿ ಹಬ್ಬದ ದಿನ ರೈತರು ಪೈರು ತೆಗೆಯುತ್ತಾರೆ. ಆ ಪೈರಿಗೆ ಪೂಜೆ ಸಲ್ಲಿಸಿ, ಮನೆಯಲ್ಲಿ ಸಿಹಿ ತಿಂಡಿ ಮಾಡಿ ತಿಂದು ಸಂಭ್ರಮಿಸುತ್ತಾರೆ. ಇನ್ನು ಉತ್ತರಕರ್ನಾಟಕದ ಕೆಲವೆಡೆ ಮನೆಯಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಕಾಳಿನ ಪಲ್ಯ, ಸಿಹಿ ತಿಂಡಿ ಇತ್ಯಾದಿ ಊಟಗಳನ್ನ ತಯಾರು ಮಾಡಿ ನದಿಯ ಬಳಿ ಆ ಊಟಗಳನ್ನ ತೆಗೆದುಕೊಂಡು ಹೋಗಿ, ನದಿಗೆ ಪೂಜೆ ಮಾಡಿ, ಆ ಊಟವನ್ನ ನೈವೇದ್ಯ ಮಾಡಿ, ಕುಟುಂಬ ಸಮೇತರಾಗಿ ನದಿ ದಡದಲ್ಲೇ ಊಟ ಮಾಡಿ ಬರುತ್ತಾರೆ.
ಸಂಕ್ರಾಂತಿ ಸಮಯದಲ್ಲಿ ಸೂರ್ಯ ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತದೆ. ಆಗ ದಕ್ಷಿಣಾಯಣ ಮುಗಿದು ಉತ್ತರಾಯಣ ಶುರುವಾಗುತ್ತದೆ. ಹಲವರ ನಂಬಿಕೆಯ ಪ್ರಕಾರ ಉತ್ತರಾಯಣ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುತ್ತಾರೆ. ಭೀಷ್ಮರು ಕೂಡ ಮಹಾಭಾರತ ಯುದ್ಧದಲ್ಲಿ ಸೋತಾಗ, ಉತ್ತರಾಯಣದ ತನಕ ಶರ ಶಯ್ಯದಲ್ಲಿ ಮಲಗಿ, ಉತ್ತರಾಯಣ ಶುರುವಾದ ಬಳಿಕ ಸಾವನ್ನಪ್ಪುತ್ತಾರೆ.
ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬ ಅಂದ್ರೆ ಎಳ್ಳು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿರುತ್ತದೆ. ಎಳ್ಳು, ಬೆಲ್ಲ, ಹುರಿಗಡಲೆ, ಶೇಂಗಾಬೀಜ, ಒಣಕೊಬ್ಬರಿ ಮಿಶ್ರಣ ಮಾಡಿ, ಸಂಕ್ರಾಂತಿ ಸಿಹಿ ಎಳ್ಳು-ಬೆಲ್ಲ ತಯಾರಿಸಲಾಗುತ್ತದೆ.
ಸಂಕ್ರಾಂತಿಯಂದು ಎಳ್ಳು ಬೆಲ್ಲ ಸವಿಯಲು ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದ ಸಮಯವಾಗಿರುವುದರಿಂದ ದೇಹಕ್ಕೆ ಉಷ್ಣತೆಯ ಅವಶ್ಯಕತೆ ಇರುತ್ತದೆ. ಎಳ್ಳು -ಬೆಲ್ಲ ತಿನ್ನುವುದರಿಂದ ದೇಹದಲ್ಲಿ ಸಮ ಪ್ರಮಾಣದಲ್ಲಿ ಉಷ್ಣತೆ ಇರುತ್ತದೆಯಲ್ಲದೇ, ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನಲಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಪೊಂಗಲ್ ತಯಾರಿಸಿ, ದೇವರಿಗೆ ನೈವೇದ್ಯ ಮಾಡಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ