www.karnatakjatv.net : ಬೆಳಗಾವಿ : ಸಂಕೇಶ್ವರದ ಓರ್ವ ಮಹಿಳೆ ಹಾಗೂ ರಾಯಬಾಗ ತಾಲೂಕಿನ ಓರ್ವ ಯುವಕ ಹೀಗೆ ಅನ್ಯ ಕೋಮಿನ ಇಬ್ಬರು ಸೇರಿಕೊಂಡು ತಿರುಗಾಡುತ್ತಿರುವದನ್ನು ಬಂಡವಾಳವಾಗಿಸಿಕೊoಡ ಖದೀಮರು ಸಿನಿಮೆಯ ರೀತಿಯಲ್ಲಿ ಅವರ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸಗಿರಿ ನಡೆಸಿರುವ ಪ್ರಕರಣವೊಂದು ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಅವರ ಬಳಿ ಇದ್ದ ಸಾವಿರಾರು ರೂ. ನಗದು, ಎಟಿಎಮ್ ಕಾರ್ಡ ದೋಚಿ ಕೀಡಿಗೇಡಿಗಳು ಫರಾರಿಯಾಗಿದ್ದು, ಅದರಲ್ಲಿ ಮೂವರನ್ನು ನಗರದ ಮಾಳಮಾರುತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 14 ರಂದು ರಾಯಬಾಗ ತಾಲೂಕಿನ ಹಿಂದು ಯುವಕ ಹಾಗೂ ಸಂಕೇಶ್ವರ ಮೂಲದ ಓರ್ವ ಮಹಿಳೆ ಇಬ್ಬರು ಬೆಳಗಾವಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ದಲ್ಲಿ ಇಬ್ಬರು ಇಳಿದು ಆಟೋ ರೀಕ್ಷಾಗಾಗಿ ಹುಡುಕಾಟ ನಡಿಸಿದ್ದರು. ಬಳಿಕ ಓರ್ವ ಆಟೋ ಚಾಲಕನ ಬಳಿ ಯಾವುದಾದರೂ ಉದ್ಯಾನ ವನಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿ ಅಟೋ ಹತ್ತಿದ್ದಾರೆ.
ಆದರೆ ಆಟೋ ಹತ್ತಿದ ಹಿಂದು ಯುವಕ, ಮುಸ್ಲಿಂ ಮಹಿಳೆಯನ್ನ ಉದ್ಯಾನ ವನದ ಬದಲಾಗಿ ಅಮನ್ ನಗರದ ನಿರ್ಜನ ಪ್ರದೇಶದ ಹೊಲದಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡುವ ಮೂಲಕ ಕೀಡಿಗೇಡಿಗಳು ಸಿನಿಮಿಯ ರೀತಿಯಲ್ಲಿ ನೈತಿಕ ಪೊಲೀಸಗಿರಿ ನಡೆಸಿದ್ದಾರೆ.
ಮುಸ್ಲಿಂ ಆಗಿ ಹಿಂದು ಯುವಕನ ಜೊತೆಗೆ ಓಡಾಡುತ್ತಿದ್ದಿಯಾ ಎಂದು ಥಳಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು ಹಣ, ಮತ್ತು ಆಧಾರ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಕೀಡಿಗೇಡಿಗಳು ಪರಾರಿಯಾಗಿದ್ದಾರೆ. ತಕ್ಷಣವೇ ಹಲ್ಲೆಗೊಳಗಾದ ಮಹಿಳೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ 20 ಜನರ ಗುಂಪಿನಿAದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ದೂರಲಾಗಿದೆ. ನಬೆಳಗಾವಿ ನಗರದ ಆಟೋ ಚಾಲಕ ದಾವತ್ ಕತೀಬ್, ಅಯುಬ್, ಯುಸೂಫ್ ಪಠಾಣ ಈ ಪ್ರಕರಣ ದಲ್ಲಿ ಬಂಧಿತರಾಗಿದ್ದಾರೆ. ಇನ್ನೂಳಿದ ಆರೋಪಿಗಳ ಪತ್ತೆಗೆ ಮಾಳಮಾರುತಿ ಪೊಲೀಸರು ಬಲೆ ಬಿಸಿದ್ದಾರೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ