www.karnatakatv.net: ಪ್ರಧಾನಿ ನರೇಂದ್ರ ಮೋದಿ ಗ್ಲಾಸ್ಗೋದಲ್ಲಿ ನಡೆದ COP26 ಶೃಂಗಸಭೆಯಲ್ಲಿ ಜಾಗತಿಕ ಹವಾಮಾನದ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.
2070 ರ ವೇಳೆಗೆ ಭಾರತವು ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ. ತಾಪಮಾಣ ಮತ್ತು ಹವಾಮಾನದ ಬಗ್ಗೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹವಾಮಾನ ಬದಲಾವಣೆಯನ್ನು ತಗ್ಗಿಸಲು ಭಾರತದ ಪರವಾಗಿ ಮಾಡಿದ ಐದು ಪ್ರಮುಖ ಪ್ರತಿಜ್ಞೆಗಳಲ್ಲಿ ಇದು ಕೂಡಾ ಒಂದಾಗಿದೆ. ಹವಾಮಾನ ಬದಲಾವಣೆಯಿಂದ ಕೃಷಿ ವಲಯಕ್ಕೆ ಹಾನಿ ಆಗಿದ್ದು, ಪರಿಸರಕ್ಕೆ ಪೂರಕವಾಗಿರುವ ನಿಯಮ ಜಾರಿಗೆ ತರಬೇಕು ಹಾಗೇ ಹವಾಮಾನ ಬದಲಾವಣೆ ಬಗ್ಗೆ 5 ‘ಅಮೃತ ತತ್ವ’ವನ್ನು ಪ್ರಸ್ತುತಪಡಿಸಿದರು. ಭಾರತವು ಜಗತ್ತಿಗೆ ನೀಡಿದ ಕೊಡುಗೆಯಾಗಿದೆ ಹವಾಮಾನ ಬದಲಾವಣೆಗೆ ಸಂಬoಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ತುಂಬಾ ಶ್ರಮಿಸುತ್ತಿದೆ ಎಂದು ಪುನರುಚ್ಚರಿಸಿದರು.
ಮೊದಲನೆಯದಾಗಿ ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುತ್ತದೆ. 2:ಭಾರತವು 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿಯಿಂದ ತನ್ನ ಶೇಕಡಾ 50 ರಷ್ಟು ಶಕ್ತಿಯ ಅವಶ್ಯಕತೆಗಳನ್ನು ಪೂರೈಸುತ್ತದೆ. 3:ಭಾರತವು ಇಂದಿನಿAದ 2030 ರವರೆಗೆ ಒಟ್ಟು ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು ಒಂದು ಬಿಲಿಯನ್ ಟನ್ಗಳಷ್ಟು ಕಡಿಮೆ ಮಾಡುತ್ತದೆ. 4:2030 ರ ವೇಳೆಗೆ, ಭಾರತ ತನ್ನ ಆರ್ಥಿಕತೆಯ ಇಂಗಾಲದ ತೀವ್ರತೆಯನ್ನು ಶೇಕಡಾ 45 ಕ್ಕಿಂತ ಕಡಿಮೆಗೊಳಿಸಲಿದೆ. 5:ಭಾರತವು 2030 ರ ವೇಳೆಗೆ ತನ್ನ ಪಳೆಯುಳಿಕೆಯೇತರ ಶಕ್ತಿ ಸಾಮರ್ಥ್ಯವನ್ನು 500 ಜಿಡ್ಲೂ ಗೆ ತರಲಿದೆ. “ಹವಾಮಾನ ಬದಲಾವಣೆಯಲ್ಲಿ ಜೀವನಶೈಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಜಗತ್ತು ಇಂದು ಒಪ್ಪಿಕೊಳ್ಳುತ್ತದೆ. ಹೀಗಾಗಿ ನಾನು ನಿಮ್ಮೆಲ್ಲರ ಮುಂದೆ ಒಂದು ಪದದ ಚಲನೆಯನ್ನು ಪ್ರಸ್ತಾಪಿಸುತ್ತೇನೆ. ಈ ಪದ ಜೀವನ, ಅಂದರೆ ಪರಿಸರಕ್ಕಾಗಿ ಜೀವನಶೈಲಿ. ಇಂದು ನಾವೆಲ್ಲರೂ ಒಗ್ಗೂಡಿ ಮತ್ತು ಜೀವನವನ್ನು ಒಂದು ಆಂದೋಲನವಾಗಿ ಮುನ್ನಡೆಸಿಕೊಳ್ಳೋಣ. ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳೋಣ” ಎಂದು ಪ್ರಧಾನಿ ಹೇಳಿದರು.