Thursday, June 19, 2025

Latest Posts

ವೀಕೆಂಡ್ ಕರ್ಫ್ಯೂ: ದಕ್ಷಿಣ ಕನ್ನಡದಲ್ಲಿ ಈ ಕೆಲಸಗಳಿಗೆ ಮಾತ್ರ ಅವಕಾಶ..!

- Advertisement -

ರಾಜ್ಯದಲ್ಲಿ ಕೊರೊನಾ ಸೋಂಕು ಹಹೆಚ್ಚಾಗಿ ಹರಡುತ್ತಿದ್ದು, ವೀಕೆಂಡ್ ಕರ್ಫ್ಯೂವನ್ನ ಮುಂದುವರಿಯಲಿದೆ. ಇವತ್ತು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಮುಂದುವರಿಯಲಿದ್ದು, ಈ ವೇಳೆ ದಿನ ಬಳಕೆ ಅಂಗಡಿಗಳು, ಮೆಡಿಕಲ್ ಶಾಪ್, ಆಸ್ಪತ್ರೆ ಸೇರಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್ ಸಂಚಾರ ನಡೆಸಲಾಗಿದ್ದು, ಹರಕೆ ಸೇವೆಗಳಾದ ಯಕ್ಷಗಾನ, ಕೋಲ, ದೇವ- ದೈವಾರಾಧನೆಗೆ ಅವಕಾಶ ನೀಡಲಾಗಿದೆ. ಮದುವೆ ಮುಂಜಿ ಸಮಾರಂಭಗಳಿದ್ದಲ್ಲಿ, ಸೀಮಿತ ಜನರಿಗೆ ಮಾತ್ರ ಅವಕಾಶವಿದೆ. ಇನ್ನು ಪೂರ್ವ ನಿಗದಿತ ಕಾರ್ಯಕ್ರಮಗಳಿಗಷ್ಟೇ ಅವಕಾಶ ಮಾಡಿ ಕೊಡಲಾಗುತ್ತಿದ್ದು, ದೇವಸ್ಥಾನ, ಮಸೀದಿ, ಚರ್ಚಗಳಿಗೆ ಭಕ್ತರ ಪ್ರವೇಶ ನಿರ್ಭಂದಿಸಲಾಗಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕರ್ಫ್ಯೂ ವೇಳೆ ತುರ್ತು ಚಿಕಿತ್ಸೆ ಇದ್ದರೆ ಮಾತ್ರ ಓಡಾಡಲು ಅವಕಾಶವಿದೆ. ಆದ್ರೆ ಸುಮ್ಮ ಸುಮ್ಮನೆ ಹೊರಗೆ ಕಾಲಿಟ್ಟರೆ, ಪೊಲೀಸರ ಲಾಠಿ ಏಟು ತಪ್ಪಿದ್ದಲ್ಲ. ಅಲ್ಲದೇ, ಅಗತ್ಯ ಸಾಮಗ್ರಿ ಕೊಳ್ಳುವ ಸಲುವಾಗಿ ಪದೇ ಪದೇ ಓಡಾಡಿದ್ರೆ, ಅಂಥವರನ್ನ ಹಿಡಿದು ಕ್ರಿಮಿನಲ್ ಕೇಸ್ ಹಾಕಲಾಗತ್ತೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೆ ಓಡಾಡುವರ ವಾಹನವನ್ನೂ ಜಪ್ತಿ ಮಾಡಲಾಗತ್ತೆ.

ಇನ್ನು ಬಸ್‌ಗಳಲ್ಲಿ ಓಡಾಡುವರು, ಗುರುತಿನ ಚೀಟಿಯನ್ನು ತೋರಿಸಲೇಬೇಕು. ಕಂಡಕ್ಟರ್‌ಗಳು ಗುರುತಿನ ಚೀಟಿಯನ್ನು ಚೆಕ್ ಮಾಡಿದ ಬಳಿಕವೇ, ಬಸ್ ಹತ್ತಿಸಿಕೊಳ್ಳಬೇಕೆಂದು ಆದೇಶ ನೀಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ತಪಾಸಣೆ ನಡೆಸಲಿದ್ದಾರೆ. ಇನ್ನು ಅಗತ್ಯ ಕೆಲಸಕ್ಕಾಗಿ ಓಡಾಡುವವರು, ಮಾಸ್ಕ್ ಹಾಕಿಕೊಂಡೇ ಓಡಾಡಬೇಕು. ಮಾಸ್ಕ್ ಹಾಕದಿದ್ದಲ್ಲಿ, ಫೈನ್ ಕಟ್ಟಲೇಬೇಕಾಗುತ್ತದೆ.

- Advertisement -

Latest Posts

Don't Miss