- Advertisement -
ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಲೋಟಗಳನ್ನು ಮಾರಟ ಹಾಗೂ ಬಳಸುತ್ತಿದ್ದ ಮಾಂಸದಂಗಡಿ, ಬೇಕರಿ ಹಾಗೂ ಹೋಟೆಲ್ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದರು.
ಟಿ.ಬಿ. ವೃತ್ತದಲ್ಲಿರುವ ಮಂಜುನಾಥ ಹೋಟೆಲ್ , ಎಸ್ಎನ್ಎಸ್ ಬೇಕರಿ, ಅನ್ನಪೂರ್ಣೇಶ್ವರಿ ಹೋಟೆಲ್ ಗಳ ಮೇಲೆ ದಾಳಿ ಮಾಡಿದ ಪೌರಾಯುಕ್ತ ಶಿವಶಂಕರ್ ನೇತೃತ್ವದ ಅಧಿಕಾರಿಗಳ ತಂಡ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿತು . ಆರೂವರೆ ಕೆ.ಜಿ. ತೂಕದ ಪ್ಲಾಸ್ಟಿಕ್ ಸಾಮಗ್ರಿ ಜಪ್ತಿ ಮಾಡಿ , 3,500 ದಂಡ ವಿಧಿಸಲಾಯಿತು . ದಾಳಿಯಲ್ಲಿ ಪೌರಾಯುಕ್ತ ಶಿವಶಂಕರ್ , ಪರಿಸರ ಇಲಾಖೆ ಎಇಇ ಈರಣ್ಣ , ಆರೋಗ್ಯ ನಿರೀಕ್ಷಕಿ ರೂಪ , ಪ್ರದೀಪ್ ಮತ್ತಿತರರು ಇದ್ದರು .
ದೊಡ್ಡಬಳ್ಳಾಪುರ ನಗರದ ನಾರಾಯಣಪ್ಪ ಬಡಾವಣೆ ಅಂಗಡಿಗಳ ಮೇಲೆ ದಾಳಿ ಮಾಡಿದ್ದು ನಗರಸಭೆ ಅಧಿಕಾರಿಗಳು
ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ
- Advertisement -

