- Advertisement -
Banglore News:
ಶಿವಮೊಗ್ಗದ ಸಾವರ್ಕರ್,ಟಿಪ್ಪು ವಿವಾದದ ಹಿಂದೆಯೇ ಇದೀಗ ತುಮಕೂರಿನಲ್ಲಿ ಗೋಡ್ಸೆ ಫೋಟೋ ವಿವಾದಕ್ಕೆ ಪೀಠಿಕೆ ಹಾಕಿದಂತಿದೆ. ತುಮುಕೂರಿನ ಮದುಗಿರಿಯ ದಂಡಿನ ಮಾರಮ್ಮ ನಗರದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಜೊತೆಯಲ್ಲಿ ಗೋಡ್ಸೆ ಫೋಟೋವನ್ನು ಹಾಕಿ ಬ್ಯಾನರ್ ಹಾಕಲಾಗಿದೆ. ಜೊತೆಗೆ ಈ ಬ್ಯಾನರ್ ನಲ್ಲಿ ಗಾಂಧೀಜಿಯ ಫೋಟೋವನ್ನು ಕೆಳಗಡೆ ಹಾಕಿ ಮೇಲೆ ನಾಥೂರಾಂ ಗೋಡ್ಸೆ ಫೋಟೋವನ್ನು ಹಾಕಿ ವಿವಾದ ಹುಟ್ಟಿಕೊಳ್ಳುವಂತೆ ಮಾಡಲಾಗಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಈ ಬ್ಯಾನರನ್ನು ತೆರವುಗೊಳಿಸಿ ಶಾಂತಿ ಕಾಪಾಡಿದ್ದಾರೆ.
- Advertisement -