Banglore News:
ನಿರಂತರವಾಗಿ ಸುರಿಯುತ್ತಿರುವ ರಕ್ಕಸ ಮಳೆಗೆ ರಾಜ್ಯದ ಜನತೆ ಜೀವನವೇ ಅಸ್ತವ್ಯಸ್ತವಾಗಿದೆ. ಅಪಾರ ಹಾನಿ ನಷ್ಟಗಳಿಂದ ಜನರು ಕಂಗಾಲಾಗಿದ್ದಾರೆ. ಜೊತೆಗೆ ಇದೀಗ ರಾಜಧಾನಿಯಲ್ಲಿ ವೃದ್ಧರೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಂತ ಇವರು ಪ್ರವಾಹದಲ್ಲಿ ಸಿಲುಕಿ ಸಾವನನ್ನಪ್ಪಿಲ್ಲ ಹಣಕಾಸಿನ ತೊಂದರೆಯಿಂದಲೂ ಸಾವನ್ನಪ್ಪಿಲ್ಲ . ಎಲ್ಲಾ ಇದ್ರು ವೃದ್ಧರನ್ನು ಉಳಿಸಿಕೊಳ್ಳಲಾಗಿಲ್ಲ ಎಂಬುವುದಾಗಿ ಅಳಲನ್ನು ತೋಡಿಕೊಂಡಿದ್ದಾರೆ ಮನೆಯವರು. ಅವರ ಸಾವಿನ ಕಥೆ ಕೇಳಿದ್ರೆ ನಿಜಕ್ಕೂ ಕರುಳು ಹಿಂಡಿ ಬರುತ್ತೆ.
ಬೆಂಗಳೂರಿನಲ್ಲಾದ ಮಹಾ ಮಳೆಗೆ ರೈನ್ ಬೋ ಲೇ ಔಟ್ ಸಂಪೂರ್ಣವಾಗಿ ,ನೀರಿನಿಂದ ಆವೃತವಾಗಿದೆ. ಜನರಿಗೆ ಹೊರ ಬರುವುದೂ ಕಷ್ಠವಾಗಿದೆ. ಇದೇ ಲೇಔಟ್ ನಲ್ಲಿ ಶ್ರೀನಿವಾಸ್ ಕುಟುಂಬ ವಾಸವಾಗಿತ್ತು. ಬೆಳಗ್ಗೆ ಎಂದಿನಂತೆ ಟೀ ಕುಡಿದು ಮನೆಯವರೊಂದಿಗೆ ಮಾತನಾಡುತ್ತಿದ್ದ ವೇಳೆ ಅಸ್ತವ್ಯಸ್ತರಾ ದ ಶ್ರೀನಿವಾಸ್ ರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಕೂಡಾ ಬರಲಾಗದಷ್ಟು ನೀರು ತುಂಬಿಕೊಂಡಿತ್ತು ಟ್ರಾಕ್ಟರ್ ಕೂಡಾ ಹೋಗಲಾಗದ ಪರಿಸ್ಥಿತಿ ಎದುರಾದ ಕಾರಣ ಮನೆಯವರ ಮುಂದೆಯೇ 87 ವರ್ಷದ ಶ್ರೀನಿವಾಸ್ ರವರು ಪ್ರಾಣವನ್ನೇ ಬಿಟ್ಟಿದ್ದಾರೆ. ಎಲ್ಲಾ ಇದ್ರು ಮಳೆಯಿಂದಾಗಿ ಶ್ರೀನಿವಾಸ್ ರವರನ್ನು ಉಳಿಸಿಕೊಳ್ಳಲಾಗಿಲ್ಲ ಎಂಬುವುದಾಗಿ ಮನೆಯವರು ಅಳಲನ್ನು ತೋಡಿಕೊಂಡಿದ್ದಾರೆ.
ಕಾಸರಗೋಡು: ಮಳೆಗೆ ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನ ಜಲಾವೃತ
ಮಳೆರಾಯನ ರೌಧ್ರ ನರ್ತನಕ್ಕೆ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿತ