ಮಹಾ ಮಳೆಗೆ ರಾಜ್ಯ ತತ್ತರ: ಜನಪ್ರತಿನಿಧಿಗಳ ಮೇಲೆ ರಮ್ಯ ಕಿಡಿ

Tweet News:

ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ . ಸದ್ಯ ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನಪ್ರತಿನಿಧಿಗಳ ಮೇಲೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ. MLA- MPಗಳ ವಿರುದ್ಧ ಮೋಹಕತಾರೆ ಆಕ್ರೋಶ ಹೊರ ಹಾಕಿದ್ದು, ಅವರ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಅನ್ನು ಟಾರ್ಗೆಟ್ ಮಾಡಿದ್ದಾರೆ ಮೋಹಕ ತಾರೆ.

” ಕರ್ನಾಟಕದಲ್ಲಿ ಎಷ್ಟು ಮಂದಿ ಎಂಎಲ್‌ಎ ಹಾಗೂ ಎಂಪಿಗಳು ರಿಯಲ್‌ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿದೆಯೇ? 28 ಮಂದಿ ಎಂಎಲ್‌ಎಗಳಲ್ಲಿ 26 ಮಂದಿ ಬಳಿ ರಿಯಲ್‌ ಎಸ್ಟೇಟ್ ಬ್ಯುಸಿನೆಸ್‌ ಇದೆ ಎಂದು ಯಾರೋ ಹೇಳಿದ್ರು.” ಅಂತ ರಮ್ಯಾ ಟ್ವೀಟ್ ಮಾಡಿ   ಕಿಡಿ  ಕಾರಿದ್ದಾರೆ.

About The Author