Film News:
ಗಣೇಶೋತ್ಸವ ಮುಗಿಯುತ್ತಾ ಬಂದ್ರು ಡಿ ಬಾಸ್ ಕ್ರಾಂತಿ ಹವಾ ಮಾತ್ರ ಮುಗಿಯುತ್ತಿಲ್ಲ. ಹೌದು ಚಿತ್ರದುರ್ಗದಲ್ಲಿ ಬಹಳ ಸಡಗರದಿಂದ ಗಣೇಶೊತ್ಸವ ಆಚರಿಸಲಾಯಿತು. ಕಿಕ್ಕಿರುದು ಜನ ಕೂಡಾ ಸೇರಿದ್ರು. ಮತ್ತೊಂದೆಡೆ ಗಣೇಶನ ವಿಗ್ರಹ ನೋಡಿ ಭಕ್ತಾಧಿಗಳು ಪುಣೀತರಾಗಿದ್ರು. ಇದೆಲ್ಲಾ ಗಣೇಶ ಹಬ್ಬದ ಭಕ್ತಿಭಾವದ ಸನ್ನಿವೇಶವಾಗಿದ್ರೆ ಮತ್ತೊಂದೆಡೆ ಅಭಿಮಾನದ ಕುಣಿತ ಜೋರಾಗಿಯೇ ಇತ್ತು. ದರ್ಶ ನ್ ಅಭಿನಯದ ಕ್ರಾಂತಿ ಸಿನಿಮಾದ ಪ್ರಚಾರವನ್ನು ಚಿತ್ರದುರ್ಗದ ಗಣೇಶೋತ್ಸವದಲ್ಲೂ ಹಮ್ಮಿಕೊಳ್ಳಲಾಗಿತ್ತು. ಕ್ರಾಂತಿ ಸಿನಿಮಾದ ಪೋಸ್ಟರ್ ಅಲ್ಲಲ್ಲಿ ಹಚ್ಚಲಾಗಿತ್ತು ಜೊತೆಗೆ ದರ್ಶನ್ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ದರ್ಶನ್ ಹಾಡು ಕೇಳುತ್ತಿದ್ದಂತೆ ಚಿತ್ರದುರ್ಗದ ಚೆಂದುಳ್ಳಿ ಚೆಲುವೆಯರು ಮೈಮರೆತು ಕುಣಿಯಲಾರಂಭಿಸಿದರು. ಹುಡುಗಿಯರ ಕುಣಿತಕ್ಕೆ ಜನ ಫುಲ್ ಫಿದಾ ಆದ್ರು.
ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..