ಹಾಸನ: ಆಂಧ್ರದ ಬಸ್ಗೆ ಕರ್ನಾಟಕದ ಬಸ್ ನೊಂದಣಿ ಅಳವಡಿಸಿಕೊಂಡು ಬಂದಿದ್ದ ವಾಹನವನ್ನು ಪರಿಶೀಲಿಸಿ ವಾಹನ ವಶಪಡಿಸಿಕೊಂಡ ಸಕಲೇಶಪುರ ಸಹಾಯಕ ಪ್ರಾದೇಶಿಕ ಮೋಟಾರ್ ವಾಹನ ನಿರೀಕ್ಷಕ ಪದ್ಮನಾಭನ್ ವಶಪಡಿಸಿಕೊಂಡರು.
ಬಳ್ಳಾರಿಯಿಂದ ಸುಮಾರು ೫೮ ಜನ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಬಸ್ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯ ವೀಕ್ಷಣೆ ಮಾಡಿ ಇನ್ನೇನು ಹೊರಡುತ್ತಿದ್ದ ಸಂದರ್ಭದಲ್ಲಿ, ಗಸ್ತಿನಲ್ಲಿ ಬಂದಿದ್ದ ಮೋಟಾರು ವಾಹನ ನಿರೀಕ್ಷಕರು ಆರೋಪಿಗಳನ್ನು ಹಿಡಿದಿದ್ದಾರೆ.
ಜಿಲ್ಲೆಯ 6 ಶಾಸಕರಿಗೂ ಸವಾಲು ಹಾಕಿದ ಸಂಸದೆ ಸುಮಲತಾ ಅಂಬರೀಶ್..
ವಾಹನದ ನಂಬರ್ ಪ್ಲೇಟ್ ಗಮನಿಸಿದ ನಿರೀಕ್ಷಕರು, ಅನುಮಾನಗೊಂಡು ವಾಹನ ತಡೆದು ಸಂಪೂರ್ಣ ದಾಖಲೆ ಪರಿಶೀಲಿಸಿದಾಗ, ನಂಬರ್ ಪ್ಲೇಟ್ ಅದಲು ಬದಲು ಮಾಡಿಕೊಂಡು, ಕರ್ನಾಟಕ ನೊಂದಣಿ ಇರುವ ಸ್ಟಿಕ್ಕರ್ಸ್ ಹಾಕಿದ್ದು ತಿಳಿದು ಬಂದಿದೆ. ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಪ್ರವಾಸಿಗರನ್ನು ಕರೆತಂದ ವಾಹನವನ್ನು ವಶಪಡಿಸಿಕೊಂಡಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಬೇರೆ ವಾಹನದ ವ್ಯವಸ್ಥೆ ಮಾಡಿ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದರು.