ಹಾಸನ: ಇಂದು ಶುಕ್ರವಾರವಾದ ಕಾರಣ ಮಾಜಿ ಸಚವಿ ಹೆಚ್.ಡಿ.ರೇವಣ್ಣ ಹಾಸನಾಂಬೆಯ ದರ್ಶನ ಮಾಡಿದ್ದಾರೆ. ಇದಾದ ಬಳಿಕ ಮಾತನಾಡಿದ ರೇವಣ್ಣ, ಆ ತಾಯಿ ದಯೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆ, ಬೆಳೆ ಆಗಲಿ, ಎಷ್ಟು ಬೇಕೋ ಅಷ್ಟು ಮಳೆಯಾಗಲಿ . ಜಾಸ್ತಿ ಮಳೆಯಾಗಿ ಬೆಂಗಳೂರು ನಗರದ ಜನತೆಗೆ, ರೈತರಿಗೆ ತೊಂದರೆಯಾಗಿದೆ ಎಂದು ರೇವಣ್ಣ ಹೇಳಿದ್ದಾರೆ.
ಜೆಡಿಎಸ್ ಬಗ್ಗೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..
ಅಲ್ಲದೇ, ತಾಯಿಯ ದಯೆಯಿಂದ ಕೊರೊನ ಹೋಗಿ ಭಕ್ತರಿಗೆ ದೇವಿ ದರ್ಶನ ನೀಡುತ್ತಿದ್ದಾಳೆ. ಆ ತಾಯಿಯ ಆಶೀರ್ವಾದದಿಂದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಿ. ಎಲ್ಲಾ ಸಮಾಜದ ಜನರಿಗೆ ಆರೋಗ್ಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಲಿ. ಅದರ ಜೊತೆ ನಮ್ಮ ಗುರುಗಳ ದರ್ಶನ ಆಗಿದ್ದು ನಮ್ಮ ಪುಣ್ಯ. ಆ ತಾಯಿನೇ ಅವರನ್ನು ಕಳುಹಿಸಿಕೊಟ್ಟಳೇನೋ ಗೊತ್ತಿಲ್ಲ. ಆ ತಾಯಿ ದಯೆಯಿಂದ ಗುರುಗಳ ದರ್ಶನ ಆಗಿದೆ ಎಂದು ರೇವಣ್ಣ ಹೇಳಿದ್ದಾರೆ.
ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..
ಇದೇ ವೇಳೆ ರೇವಣ್ಣ, ಬ್ರಹ್ಮಾಂಡ ಗುರೂಜಿ ಫೋನ್ ನಂಬರ್ ಪಡೆದಿದ್ದು, ತಂದೆಯ ಆರೋಗ್ಯಾಭಿದ್ಧಿಗೆ ಯಾವ ಪೂಜೆ ಮಾಡಿಸಬೇಕೆಂದು ಕೇಳಿದ್ದಾರೆ. ಹೆಚ್ಡಿಡಿ ಆರೋಗ್ಯ ವೃದ್ದಿಗೆ ಪೂಜೆ- ಪ್ರಾರ್ಥನೆ ಬಗ್ಗೆ ರೇವಣ್ಣ ಚರ್ಚಿಸಿದ್ದಾರೆ. ಸುಮಾರು 5 ನಿಮಿಷಗಳ ಕಾಲ ಬ್ರಹ್ಮಾಂಡ ಗುರೂಜಿ ಮತ್ತು ಹೆಚ್ ಡಿ ರೇವಣ್ಣ ಪರಸ್ಪರ ಮಾತಾಡಿಕೊಂಡಿದ್ದಾರೆ. ಇದಾದ ಬಳಿಕ ಗುರುಗಳ ಆಶೀರ್ವಾದ ಪಡೆದಿದ್ದಾರೆ.