ಹಾಸನ: ಹಾಸನಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ಹಾಸನಾಂಬೆಯ ದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಶ್ರೀರಾಮುಲು, ನಾನು ಇಲ್ಲಿ ರಾಜಕೀಯ ಮಾತನಾಡಲ್ಲ. ಏಕೆಂದರೆ ಒಂದು ಕಡೆ ದೀಪಾವಳಿ ಆಗ್ತಿದೆ, ಇನ್ನೊಂದು ಕಡೆ ಹಾಸನಾಂಬೆ ದೇವಿ ಆಶೀರ್ವಾದ ಪಡೆದಿದ್ದೇನೆ. ಈ ಮಣ್ಣಿನ ಮಗ, ದೇಶದ ಮಾಜಿಪ್ರಧಾನಿ ದೇವೇಗೌಡರ ಆರೋಗ್ಯ ಚಲೋ ಆಗಬೇಕು. ಅವರು ಈ ರಾಜ್ಯಕ್ಕೋಸ್ಕರ, ದೇಶಕ್ಕೋಸ್ಕರ ಬಹಳಷ್ಟು ದಣಿದಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ. ರಾಜ್ಯದ ಜನರಿಗೆ, ಬಡವರಿಗೆ ಒಳ್ಳೆಯದಾಗಲಿ, ರೈತರಿಗೆ ಒಳ್ಳೆಯ ಮಳೆ, ಬೆಳೆ ಆಗಲಿ. ಇವತ್ತು ಎಲ್ಲವೂ ಸಮೃದ್ದಿಯಾಗಿ, ಸುಭೀಕ್ಷವಾಗಿರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಅಲ್ಲದೇ, ಕೆಎಸ್ಆರ್ಟಿಸಿ ಎಲ್ಲಾ ನಿಗಮಗಳನ್ನು ಒಂದು ಮಾಡುವುದು ಸದ್ಯಕ್ಕಿಲ್ಲ. ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆಯುವ ವಿಷಯ ಚರ್ಚೆ ವಿಚಾರ. ನಮ್ಮ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವ ಜನಾಂಗಕ್ಕೂ ಕೂಡ ಕಡಿಮೆ ಮಾಡಲ್ಲ. ಈಗ ಯಾವ ರೀತಿ ಮೀಸಲಾತಿ ಇದೆ ಯಥಾಸ್ಥಿತಿ ಇರುತ್ತದೆ. ಇದರಲ್ಲಿ ಗೊಂದಲ ಆಗುವುದು ಬೇಡ. ನಮ್ಮ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಜಾಸ್ತಿ ಮಾಡಬೇಕಿತ್ತು, ಜಾಸ್ತಿ ಮಾಡಿದ್ದೀವಿ ಎಂದು ಹೇಳಿದ್ದಾರೆ.
‘ತಾಯಿಯ ಆಶೀರ್ವಾದಿಂದ ಇವತ್ತು ಸರ್ಕಾರ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಜಾಸ್ತಿ ಮಾಡಿದೆ’