ಹಾಸನ: ಅರಕಲಗೂಡು ತಾಲ್ಲೂಕಿನ ಮುಸವತ್ತೂರು ಕೊಪ್ಪಲು ಗ್ರಾಮದಲ್ಲಿ ಮನೆ ಬಳಕೆಯ ಸಿಲಿಂಡರ್ ಸ್ಪೋಟವಾಗಿದೆ. ಈ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಒಂಬತ್ತು ದಿನದ ಹಸುಗೂಸು ಮತ್ತು ಬಾಣಂತಿ ಸಿನಿಮೀಯ ರೀತಿಯಲ್ಲಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮನೆಯ ಮಾಲೀಕ ಬಸವರಾಜು ಶೇಕಡಾ 60 ರಷ್ಟು ಸುಟ್ಟ ಗಾಯದೊಂದಿಗೆ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಇವರ ಸಹಾಯಕ್ಕಾಗಿ ಬಂದ ಪಕ್ಕದ ಮನೆಯ ಧನಲಕ್ಷ್ಮಿ ಕೂಡ ಗ್ಯಾಸ್ ಅವಘಡಕ್ಕೆ ಒಳಗಾಗಿದ್ದಾರೆ. ಅಪ್ಪಣಿಗೌಡ, ಲಕ್ಷ್ಮಿ , ಎಂಬುವರಿಗೂ ಗಾಯಗಳಾಗಿವೆ.
ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದಅಪ್ರಾಪ್ತ ಬಾಲಕಿ ಅನುಮಾನಾಸ್ಪದ ಸಾವು
ಏಮ್ಸ್ ಇ-ಹಾಸ್ಪಿಟಲ್ ಡೇಟಾ ಮರುಸ್ಥಾಪನೆ : 8ನೇ ದಿನವೂ ಏಮ್ಸ್ ಸರ್ವರ್ ಡೌನ್
ಬೆಂಗಳೂರಿನ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್, ಲೈಟರ್, ಸಿಗರೇಟ್, ನೀರಿನ ಬಾಟಲ್ ನಲ್ಲಿ ಮದ್ಯ ಪತ್ತೆ