Friday, October 18, 2024

Latest Posts

‘ನಾನೇನು ಜ್ಯೋತಿಷಿ ಅಲ್ಲಪ್ಪ,‌ ಪಾಪ ಕುಮಾರಸ್ವಾಮಿ ಅವರು ಹೇಳಿದ್ದಾರೆ..’

- Advertisement -

ಹಾಸನ : ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡ್ತೇವೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ. ನಾನೇನು ಜ್ಯೋತಿಷಿ ಅಲ್ಲಪ್ಪ,‌ ಪಾಪ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಒಳ್ಳೆಯದು, ಕೆಟ್ಟದ್ದು ಗೊತ್ತಲ್ಲ, ಅದಕ್ಕೆ ರೇವಣ್ಣನನ್ನು ಕೇಳಿ ಬಿಡುಗಡೆ ಮಾಡ್ತಿವಿ ಅಂತ ಹೇಳಿದ್ದಾರೆ. ಬೇರೆ ಏನು ವ್ಯತ್ಯಾಸ ಇಲ್ಲ, ಕುಮಾರಣ್ಣ ನಾವೆಲ್ಲ ಒಟ್ಟಾಗಿ ಸೇರಿ, ಪಕ್ಷದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಎಲ್ಲಾ ಸೇರಿ ಬಿಡುಗಡೆ ಮಾಡ್ತೀವಿ. ಅಲ್ಲದೇ, ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಈಗ ಬಿಡುಗಡೆ ಮಾಡಿ ಅಂತ ಹೇಳಲು ಆಗುತ್ತ..? ಮೊದಲನೇ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಏಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದು ರೇವಣ್ಣ ಹೇಳಿದ್ದಾರೆ.

‘ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ..?’

ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ರೇವಣ್ಣ, ಬೇಲೂರಿನಲ್ಲಿ ಭವಾನಿ ಮೇಡಂ ಕೆಲಸ‌ ಮಾಡುತ್ತಿದ್ದರು ಏನಾಯ್ತು..? ನಾವು ಯಾವ ರೀತಿ ಮಾಡಬೇಕು, ಯಾರನ್ನು ನಿಲ್ಲಿಸಬೇಕು, ಯಾರನ್ನು ಬಿಡಬೇಕು ಅನ್ನೋದು ನಮಗೆ ಗೊತ್ತಿದೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಇರ್ತಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಅನೌನ್ಸ್ ಮಾಡ್ತಿವಿ ಎಂದು ಹೇಳಿದ್ದಾರೆ.

‘ನಾನು ಸಿದ್ದರಾಮಯ್ಯ ಅವರು ಹೊಡೆದಾಡಲು ಆಗಲ್ಲ’

ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ,  ಶಿವಲಿಂಗೇಗೌಡರು ಕುಮಾರಸ್ವಾಮಿ ಅವರ ಬಳಿ ಬಂದು ಭೇಟಿ ಮಾಡಿ ನಾಲ್ಕು ಗಂಟೆಗಳ ಮಾತನಾಡಿದ್ದಾರೆ. ನಾನು ಯಾವುದೇ ಕಾರಣದಿಂದ ಪಕ್ಷ ಬಿಡಲ್ಲ, ಇಲ್ಲೇ ಇರ್ತಾನೆ ಎಂದು ಹದಿನೈದು ದಿನದ ಹಿಂದೆ ಕುಮಾರಸ್ವಾಮಿ ಬಳಿ ಹೇಳಿದ್ದಾರೆ. ನಿಂತರೆ ನಿಮ್ಮ ಪಕ್ಷದಲ್ಲೇ ನಿಲ್ತಿನಿ, ದೇವೇಗೌಡರು ಬದುಕಿರುವವರೆಗೂ ಜೆಡಿಎಸ್ ಬಿಡಲ್ಲ ಎಂದು ಶಿವಲಿಂಗೇಗೌಡರು ಹೇಳಿದ್ದಾರೆ. ನಾಲ್ಕು ಗಂಟೆ ಕಾಲ ಒನ್ ಟು ಒನ್ ಮಾಡಿದ್ದಾರೆ. ಅದರು ಮೇಲೆ ಅವರು ಏನ್ ನಿರ್ಣಯ ಮಾಡಿದ್ದಾರೆ ಅದು ಅವರಿಗೆ ಬಿಟ್ಟಿದ್ದು. ಅವರ ಬಗ್ಗೆ ನನಗೆ ನಂಬಿಕೆಯಿದೆ. ಅವರು ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿ ಮೇಲೆ ಸತ್ಯ ಮಾಡಿ ಬಂದವ್ರೆ. ಅದರಿಂದ ಅವರು ಸುಳ್ಳು ಹೇಳಲ್ಲ ಇಲ್ಲೇ ಇರ್ತಿನಿ ಅಂತ ಹೇಳಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ.

- Advertisement -

Latest Posts

Don't Miss