Monday, April 14, 2025

Latest Posts

ರಾಜ್ಯ ಸರ್ಕಾರದಿಂದ ರೂಪಾ, ರೋಹಿಣಿಗೆ ಖಡಕ್ ವಾರ್ನಿಂಗ್..!

- Advertisement -

State news

ಬೆಂಗಳೂರು(ಫೆ.21): ಇದೀಗ ಸದ್ಯ ಸುದ್ದಿಯಲ್ಲಿರುವ ರೂಪಾ ಹಾಗೂ ರೋಹಿಣಿ  ಸಿಂಧೂರಿ ಮಾತಿನ ಜಗಳ ಎಫ್ ಐ ಆರ್ ತನಕ ಮುಂದುವರೆಯುವ ಹಂತಕ್ಕೆ ತಲುಪಿದೆ. ಇಬ್ಬರ ಮಾತಿನ ಮಧ್ಯೆ ಹಲವಾರು ಸಚಿವರು ಮಧ್ಯೆ ಎಂಟ್ರಿ ಕೊಟ್ಟು ಕಿರಿಕಾಡಿದ್ದಾರೆ, ಆದರೂ ಇಬ್ಬರ ವಾರ್ ಮುಗಿಯುವ ರೀತಿ ಕಾಣುತ್ತಿಲ್ಲ.

ರಾಜಕೀಯ ವಲಯದಲ್ಲಿ ಒಂದಿಷ್ಟು ಆರೋಪಗಳನ್ನು ಮಾಡುತ್ತಿರುವ ಇಬ್ಬರು ಟ್ವೀಟ್ ಮೂಲಕ ಜಡೆ ಜಗಳ ಆಡುತ್ತಿದ್ದಾರೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಫೈಟ್ ತಾರಕಕ್ಕೆ ಏರಿದ್ದು, ಇವರಿಬ್ಬರ ಜಗಳಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿ ನೋಟಿಸ್ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಸೇವಾ ನಿಯಮ ಉಲ್ಲಂಘಿಸುವಂತಿಲ್ಲ ಎಂದು ನೋಟಿಸ್ ನೀಡಲಾಗಿದೆ. ಇಬ್ಬರಿಗೂ ರಾಜ್ಯ ಸರ್ಕಾರದಿಂದ  ಎಚ್ಚರಿಕೆ ನೀಡಲಾಗಿದೆ. ಇನ್ನು, ರೋಹಿಣಿ ಸಿಂಧೂರಿ ಪತಿ ಸುಧೀಂದ್ರ ರೆಡ್ಡಿ ಅವರು ಬಾಗಲಕುಂಟೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೈಟ್ ಮಾಡಿದ್ದು, ಮಾನನಷ್ಟ ಮೊಕದ್ದಮೆಯ ದೂರು ದಾಖಲಿಸಿದ್ದಾರೆ.

- Advertisement -

Latest Posts

Don't Miss