Tuesday, July 22, 2025

Latest Posts

ಬಿಜೆಪಿ ಸೇರ್ತಾರಾ ಭಾಸ್ಕರ್ ರಾವ್..?! ಕುತೂಹಲ ಮೂಡಿಸಿದ ಭೇಟಿ..!

- Advertisement -

Political News:

Feb:28: ಎಎಪಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಭಾಸ್ಕರ್ ರಾವ್  ಮಂಗಳವಾರ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಅಶೋಕ್ ಭೇಟಿಗೂ ಮುನ್ನ ಬಿಜೆಪಿಯ ರಾಜ್ಯ ಕಚೇರಿಗೂ ಭಾಸ್ಕರ ರಾವ್ ಭೇಟಿ ನೀಡಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ನರ‍್ಮಲ್ ಕುಮಾರ್ ಸುರಾನಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರನ್ನೂ ಕೂಡಾ ಭಾಸ್ಕರ್ ರಾವ್ ಭೇಟಿಯಾಗಿದ್ದಾರೆ. ಸದ್ಯ ಬಿಜೆಪಿಯ ಭದ್ರಕೋಟೆಯಾಗಿರುವ ಬಸವನಗುಡಿ ಕ್ಷೇತ್ರದಿಂದ ಎಎಪಿಯಿಂದ ಕಣಕ್ಕಿಳಿಯಲು ಭಾಸ್ಕರ್ ರಾವ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಕ್ಷೇತ್ರ ಪ್ರವಾಸವೂ ಆರಂಭವಾಗಿದೆ. ಆದರೆ ಇದೆಲ್ಲದರ ನಡುವೆ ಅವರು ಬಿಜೆಪಿ ಮುಖಂಡರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

“ನಾನು ಮುಖ್ಯಮಂತ್ರಿ ಆಗೋದನ್ನಯಾರಿಂದಲೂ ತಡೆಯಲು ಸಾಧ್ಯವಿಲ್ಲ”: ಹೆಚ್.ಡಿ.ಕೆ

“ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ..!” : ಮಾಜಿ ಸಚಿವ ಈಶ್ವರಪ್ಪ

ರೇಣುಕಾಚಾರ್ಯ ವಿರುದ್ಧ ಕಣಕ್ಕಿಳಿಯೋ ಎದುರಾಳಿ ಯಾರು..!?

- Advertisement -

Latest Posts

Don't Miss