Saturday, October 19, 2024

Latest Posts

ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ ಸಿದ್ದರಾಮಯ್ಯ ತಿರುಕನ ತರಹ ಊರೂರು ಅಲೆಯುತ್ತಿರಲಿಲ್ಲ–ಆರ್ ಅಶೋಕ್

- Advertisement -

ಕೋಲಾರ :

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ದೆ ವಿಚಾರ ಕೋಲಾರದ ಶ್ರೀನಿವಾಸಪುರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದು ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ ಸಿದ್ದರಾಮಯ್ಯ ತಿರುಕನ ತರಹ ಊರೂರು ಅಲೆಯುತ್ತಿರಲಿಲ್ಲ ಕ್ಷೇತ್ರಕ್ಕಾಗಿ ಬಿಕ್ಷಾಂದೇಹಿ ಎಂದು ಕೇಳಿಕೊಳ್ಳುತ್ತಿರಲಿಲ್ಲ, ಮೈಸೂರು ಆಯ್ತು ಬಾದಾಮಿ ಆಯ್ತು ಈಗ ಕೋಲಾರಕ್ಕೆ ಬಂದಿದ್ದಾರೆಈ ಬಾರಿ ಕೋಲಾರದಲ್ಲಿ ಸೋತರೆ ಮತ್ತೆ ಎಲ್ಲಿ ಹೋಗ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯ ವಾಡಿದ್ದಾರೆ .

ಶ್ರೀನಿವಾಸಪುರದ ವಿಜಯ ಸಂಕಲ್ಪ ಯಾತ್ರೆ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ಕೋಲಾರದಲ್ಲಿ ಡೂಪ್ಲಿಕೇಟ್ ಮನೆ ಮಾಡುತ್ತಿದ್ದಾರೆ, ಸುಮ್ನೆ ಹೆಸರಿಗಷ್ಟೆ ಬರೆದುಕೊಳ್ಳಿ ಬೇಕಾದರೆ ಮನೆ ಎಂದು ಬೋರ್ಡ್ ಇರುತ್ತೆ ಅವರು ಇರೋದಿಲ್ಲ ಸಿದ್ದರಾಮಯ್ಯ ಕೋಲಾರದ ಕಡೆ ತಿರುಗಿಯೂ ನೋಡೋಲ್ಲ ಅವರಿಗೆ ಬಿಸಿಲು ಕಂಡರೆ ಆಗೋಲ್ಲ ಎಂದು ವ್ಯಂಗ್ಯವಾಡಿದ್ದು, ಕಾಂಗ್ರೇಸ್ ಗೆ ದೇಶದಲ್ಲೇ ಉಳಿಗಾಲವಿಲ್ಲ ರಾಜ್ಯದಲ್ಲಿಯೂ ಇರೋದಿಲ್ಲ ಕಾಂಗ್ರೆಸ್ ನ ಮೊದಲ ಅಕ್ಷರ ‘ಸಿ ‘ ಎಂದರೆ ಕರಪ್ಷನ್ ಕಾಂಗ್ರೇಸ್ ಎಂದು ಅರ್ಥ. ಹೆಂಡ ಮತ್ತು ಹಣ ಮೊದಲು ಹಂಚಿದವರೇ ಕಾಂಗ್ರೇಸ್ ನವರು ಸೋನಿಯಾ ಗಾಂಧೀ ರಾಹುಲ್ ಗಾಂಧೀ ಅವರ ಮೇಲೆ ಸಾಕಷ್ಟು ಹಗರಣಗಳು ಇವೆ ಇವತ್ತಿಗೂ ಅವರು ಬೇಲ್ ಮೇಲೆ ಹೊರಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ

ಪೈಟರ್ ರವಿ ಮೋದಿ ಅವರಿಗೆ ಸ್ವಾಗತ ಕೋರಿದ ಪ್ರಕರಣ ಕುರಿತು ಮಾತನಾಡಿ ಅವನು ಸ್ವಾಗತ ಪಟ್ಟಿಯಲ್ಲಿ ಹೇಗೆ ಬಂದ ಎಂದು ವಿಚಾರಣೆ ಮಾಡಲಾಗುತ್ತಿದೆ ಕಮಿಟಿ ಉಸ್ತುವಾರಿ ಶೋಭಾ ಕರಂದ್ಲಾಜೆ ರವರಿಂದ ಪರಿಶೀಲನೆ ನಡೆಸಲಾಗುತ್ತಿದೆ ಯಾರು ಅವರ ಹೆಸರನ್ನ ಸೇರಿಸಿದ್ದಾರೋ, ಅವರ ಮೇಲೆ ಪಾರ್ಟಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಈ ರಾಜ್ಯದಲ್ಲಿ ಗೂಂಡಾ ಗಿರಿ ಪಾರ್ಟಿ ಇದೆ ಎಂದರೆ ಅದು ಕಾಂಗ್ರೇಸ್ ಪಾರ್ಟಿ ಗೂಂಡಾ ಸಂಸ್ಕೃತಿಯನ್ನ ದೇವರಾಜ್ ಅರಸು ಹಿಂದೆಯಿಂದಲೂ ತಂದಿದ್ದಾರೆ.
ಬಿಜೆಪಿಯಲ್ಲಿ ಆ ಸಂಸ್ಕೃತಿ ಇಲ್ಲ ಎಂದಿದ್ದಾರೆ .

ಸೋಮಣ್ಣ ಪಕ್ಷ ಬಿಡುವ ವಿಚಾರವಾಗಿ ಮಾತನಾಡಿ ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ನಾನು ಅವರೊಂದಿಗೆ ಮಾತನಾಡಿದ್ದೇನೆ, ಬಿಜೆಪಿಯಲ್ಲಿಯೇ ಇರ್ತಾರೆ ಮಗನ ಟಿಕೇಟ್ ವಿಚಾರ ಮಾತನಾಡಿದ್ದಾರೆ ಆದರೆ ಪಾರ್ಟಿ ಬಿಡುವ ವಿಚಾರ ಮಾತನಾಡಿಲ್ಲ ಕೆಲವು ಡಿಮ್ಯಾಂಡ್ ಇವೆ ಪಕ್ಷ ಪರಿಶೀಲನೆ ಮಾಡುತ್ತೆ ಎಂದು ತಿಳಿಸಿದ್ದಾರೆ.

ಕಳೆದ ೭೫ ವರ್ಷದಲ್ಲಿ ಶ್ರೀನಿವಾಸಪುರದಲ್ಲಿ ಬೆರೆ ಯಾರು ಗೆದ್ದಿಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನೋದನ್ನ ನೋಡಿಲ್ಲ ಒಂದು ಬಾರಿ ಬಿಜೆಪಿ ಗೆ ಅವಕಾಶ ಕೊಡಿ ೨೦೨೪ ರೊಳಗೆ ಮೋದಿಯವರು ಎಲ್ಲಾ ಮನೆಗೆ ಟ್ಯಾಪ್ ವಾಟರ್ ಕೊಡ್ತೀನಿ ಅಂದಿದ್ದಾರೆ ನಮ್ಮ ಸರ್ಕಾರ ೪೩೬ ಕೋಟಿ ಹಣವನ್ನ ಕೋಲಾರ ಜಿಲ್ಲೆಗೆ ಕೊಟ್ಟಿದ್ದೀವಿ ಆದರೆ ಕಾಂಗ್ರೇಸ್ ನವರು ಗ್ಯಾರೆಂಟಿ ಅಂತ ಬೋರ್ಡ್ ಹಾಕ್ತಾರಲ್ಲ ನಾಳೆ ಯಾರು ಇರ್ತಾರೆ ಅನ್ನೋ ಗ್ಯಾರೆಂಟಿ ಇಲ್ಲ ಜೆಡಿಎಸ್ ಕಾಂಗ್ರೇಸ್ ಮತ್ತೆ ಈ ಕ್ಷೇತ್ರದಲ್ಲಿ ಆಯ್ಕೆ ಆದ್ರೆ ಶ್ರೀನಿವಾಸಪುರದಲ್ಲಿ ಅಭಿವೃದ್ದಿ ಯಾಗೋದಿಲ್ಲ ನರೇಂದ್ರ ಮೋದಿಯವರು ಇರೋವರೆಗೂ ರಾಜ್ಯದಲ್ಲಿ ಜೆ ಡಿ ಎಸ್ ,ಕಾಂಗ್ರೇಸ್ ಸರ್ಕಾರ ಬರೋದಿಲ್ಲ .

೫ ವರ್ಷ ಸಿದ್ದರಾಮಯ್ಯ ಸರ್ಕಾರ ಇತ್ತುಆಗ ಎರಡು ಸಾವಿರ ಕೊಟ್ಟಿಲ್ಲ , ಡಿಕೆಶಿವಕುಮಾರ್ ಅವರೆ ನೀವೆ ಪವರ್ ಮಿನಿಸ್ಟರ್ ಹಾಗಿದ್ದ್ರಿಆಗ ಯಾಕೆ ೨೦೦ ಯೂನಿಟ್ ವಿದ್ಯುತ್ ಕೊಡಲಿಲ್ಲ ಅಧಿಕಾರ ಇದ್ದಾಗ ೨೦೦೦ ನೂ ಇಲ್ಲ, ೨೦೦ ಯೂನಿಟ್ ವಿದ್ಯುತ್ ಇಲ್ಲ ೧೦ ಕೆಜಿ ಅಕ್ಕಿ ಇಲ್ಲ, ಕಾಂಗ್ರೇಸ್ ನವರು ಟೋಪಿ ಹಾಕೋದ್ರಲ್ಲಿ ಎಕ್ಸ್ಪರ್ಟ್ ಬಂದಿದೆಲ್ಲಾ ಹಣವನ್ನ ಲೂಟಿ ಹೊಡೆದಿದ್ರು ಎಂದು ಕಾಂಗ್ರೆಸ್ ವಿರುದ್ದ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬೈಟ್ : ಆರ್ ಅಶೋಕ್ – ಕಂದಾಯ ಸಚಿವರು .

- Advertisement -

Latest Posts

Don't Miss