ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ, ಕೋಲಾರದಲ್ಲಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸೋದಿಲ್ಲ. ಅದರ ಬಗ್ಗೆ ಚರ್ಚೆ ವ್ಯರ್ಥ. ಅವರಿಗೆ ಈಗಾಗಲೇ ಪಕ್ಷದ ಹೈಕಮಾಂಡ್ ವರುಣಾದಲ್ಲಿ ನಿಲ್ಲುವಂತೆ ಟಿಕೇಟ್ ಘೋಷಣೆ ಮಾಡಿದ್ದಾರೆ. ಅವರು ಅವರ ಮನೆಯವರನ್ನ ಕೇಳಿ ಚುನಾವಣೆಯಲ್ಲಿ ನಿಲ್ಲುತ್ತೇನೆ ಎನ್ನುವುದು ದುರಂತ . ಸಮೀಕ್ಷೆ ಆಧರಿಸಿ ಚುನಾವಣೆ ಸ್ಪರ್ದಿಸುತ್ತೇನೆ ಎನ್ನುವುದು ಮತ್ತೊಂದು ದುರಂತ. ಸಮೀಕ್ಷೆ ಆಧರಿಸಿ ನಿಲ್ಲುವ ಮಟ್ಟಕ್ಕೆ ಇಳಿದಿದ್ದು ಅವರ ವ್ಯಕ್ತಿತ್ವಕ್ಕೆ ಗೌರವ ತರೋದಿಲ್ಲ ಎಂದಿದ್ದಾರೆ.
ಅಲ್ಲದೇ, ರಾಜ್ಯದಲ್ಲಿ ೫ ವರ್ಷ ಮುಖ್ಯಮಂತ್ರಿಯಾಗಿದ್ದವರು. ವಿರೋಧ ಪಕ್ಷದ ನಾಯಕರಾಗಿದ್ದವರು ವಿವಿಧ ಭಾಗ್ಯಗಳನ್ನ ಕೊಟ್ಟವರು. ಸಮೀಕ್ಷೆ ಆಧರಿಸಿ ಚುನಾವಣೆಗೆ ನಿಲ್ತೇನೆ ಅನ್ನೋದು ಅವರ ದುರ್ಬಲ ಮನಸ್ಥಿತಿ. ಸಿದ್ದರಾಮಯ್ಯ ಅಂತಹ ನಾಯಕರು ಒಂದು ಸ್ಟೇಟಸ್ ಇಟ್ಟುಕೊಂಡವರು. ಒಂದು ಮಾತು ಹೇಳಿದ ಮೇಲೆ ನಿತ್ಕೋಳ್ಳಬೇಕು ಎಂದಿದ್ದಾರೆ.
ಕೋಲಾರದಿಂದ ವೈ.ಎ. ನಾರಾಯಣಸ್ವಾಮಿ ಸ್ಪರ್ಧಿಸುವಂತೆ ಚರ್ಚೆ ಕುರಿತಂತೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸೋದಿಲ್ಲ. ಬೆಂಗಳೂರಿನ ಹೆಬ್ವಾಳ ಕ್ಷೇತ್ರದಲ್ಲಿ ಟಿಕೇಟ್ ಕೇಳಿದ್ದೇನೆ . ಪಕ್ಷದ ವರಿಷ್ಟರು ಟಿಕೇಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವೆಂದ್ರೆ ಪಕ್ಷದ ಸಂಘಟನೆ ಮಾಡುತ್ತೇನೆ ಎಂದು ಕೋಲಾರದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದ್ದಾರೆ.
‘ರಾತ್ರಿ ಇಬ್ಬರೂ ಮಾತಾಡ್ಕೋತಾರೆ, ಬೆಳಿಗ್ಗೆ ಒಬ್ಬರಿಗೊಬ್ಬರು ಬೈಕೋತಾರೆ, ಅಡ್ಜಸ್ಟಮೆಂಟ್ ರಾಜಕೀಯ’