ಕೋಲಾರ: ಇಂದು ಕೋಲಾರದಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕೆ ಬರಲಿದ್ದು, ಕೋಲಾರದ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ ಕಾರ್ಯಕ್ರಮ ಜರುಗಲಿದೆ.. ಈ ಕಾರ್ಯಕ್ರಮಕ್ಕೆ ೨.೫ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರುರಿಂದ ಚಿತ್ತೂರ ಕಡೆ ಹೋಗಲು ಹಾಗೂ ಚಿತ್ತೂರು ಮುಳಬಾಗಿಲು ನಿಂದ ಬೆಂಗಳೂರು ಕಡೆ ಹೋಗುವ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಚಿತ್ತೂರು ಕಡೆ ಹೋಗುವವರು ಬೆಳ್ಳಾವಿಯ ಸರ್ವೀಸ್ ರಸ್ತೆ ಉಪಯೋಗಿಸಿ ವೇಮಗಲ್ ಮೂಲಕ ಕೋಲಾರ ನಗರದ ಮೂಲ ತೆರಳುವಂತೆ ಸೂಚಿಸಲಾಗಿದ್ದು, ಮುಳಬಾಗಿಲು ಚಿತ್ತೂರು ಕಡೆಯಿಂದ ಬೆಂಗಳೂರು ತಲಪುವವರು, ವಕ್ಕಲೇರಿ ಶಿವಾರಪಟ್ಟಣ ಮೂಲಕ ಬೆಂಗಳೂರು ಈ ರಸ್ತೆ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ೨೦೦೦ ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದ್ದು, ಸುಮಾರು 200 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು, ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾ ಜಿಲ್ಲೆಗಳಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಆಗಮಿಸಲಿದ್ದಾರೆ..
ಇನ್ನು ವೇದಿಕೆ ಕಾರ್ಯಕ್ರಮದ ಸಮೀಪವೆ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು, ಹೆಲಿಪ್ಯಾಡ್ ಗಾಗಿ ೫ ಎಕರೆ ಜಮೀನು ಬಳಕೆ ಮಾಡಲಾಗಿದೆ. ಕಾರ್ಯಕ್ರಮಕ್ಕೆಆಗಮಿ ಸುವವರಿಗೆ ಪ್ರತ್ಯೇ ಕ ಪಾರ್ಕಿಂಗ್ ವ್ಯವಸ್ಥೆ. ಮಾಡಲಾಗಿದ್ದು, ರಾಜ್ಯದ ಹಲವು ಘಟಾನುಘಟಿ ನಾಯಕರು ಮೋದಿಗೆ ಸಾಥ್ ನೀಡಲಿದ್ದಾರೆ..
‘ಸ್ಟ್ರ್ಯಾಟಜಿ ಏನಿಲ್ಲ, ನಮ್ಮದೆಲ್ಲ ಸ್ಟ್ರೇಟ್ ಫಾರ್ವರ್ಡ್, ನಮ್ಮದೇನಿದ್ರೂ ಅಭಿವೃದ್ಧಿಯ ಮಂತ್ರ’