‘ಕಾಂಗ್ರೆಸ್ ಪಕ್ಷ ಹಿಂದೆಯೂ ಶ್ರಮಿಕರ ಜೊತೆ ನಿಂತಿತ್ತು, ಮುಂದೆಯೂ ನಿಲ್ಲಲಿದೆ. ‘

ಇಂದು ಕಾರ್ಮಿಕರ ದಿನವಾಗಿದ್ದು, ಕಾಂಗ್ರೆಸ್ ಪಕ್ಷ, ಜನರಿಗೆ ಹೊಸ ಭರವಸೆ ನೀಡಿದೆ. ಅದರಲ್ಲೂ ಮಹಿಳೆಯರ ಅಭಿವೃದ್ಧಿಗಾಗಿ ತಾವು ಹಲವು ಸೌಕರ್ಯಗಳನ್ನು ಕಲ್ಪಿಸಿಕೊಂಡುವುದಾಗಿ ಹೇಳಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷ ಹಿಂದೆಯೂ ಶ್ರಮಿಕರ ಜೊತೆ ನಿಂತಿತ್ತು, ಮುಂದೆಯೂ ನಿಲ್ಲಲಿದೆ ಎಂದು ಹೇಳಿದ್ದಾರೆ.

ಇಂದು ಕಾರ್ಮಿಕ ದಿನ, ತಮ್ಮ ಕುಟುಂಬದ ಭವಿಷ್ಯಕ್ಕಾಗಿ ದುಡಿಯುತ್ತಿರುವ ನಾಡಿನ ಎಲ್ಲಾ ತಾಯಂದಿರು, ಅಕ್ಕ – ತಂಗಿಯರ ಪರಿಶ್ರಮವನ್ನು ಗುರುತಿಸಿ, ಅವರ ಕೈಗಳಿಗೆ ಬಲತುಂಬುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಾ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟದ ಅಡುಗೆ ಕಾರ್ಯಕರ್ತೆಯರ ಗೌರವಧನವನ್ನು ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚಳ ಮಾಡಿದ್ದೆವು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇನ್ನಷ್ಟು ಹೆಚ್ಚಿಸುವ ಭರವಸೆ ನೀಡಿದ್ದೇವೆ. ನುಡಿದಂತೆ ನಡೆದ ಇತಿಹಾಸ ನಮ್ಮದು, ಅದಕ್ಕೆ ಈಗಲೂ ಬದ್ಧರಿದ್ದೇವೆ. ಕಾಂಗ್ರೆಸ್ ಪಕ್ಷ ಹಿಂದೆಯೂ ಶ್ರಮಿಕರ ಜೊತೆ ನಿಂತಿತ್ತು, ಮುಂದೆಯೂ ನಿಲ್ಲಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಸಮೀರ್ ಹಸನ್ ಸಾಬ್‌ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು.’

ಸಿರಿಯಲ್ ನಟಿಯರೊಂದಿಗೆ ಸಚ್ಚಿದಾನಂದ ಅಬ್ಬರದ ಪ್ರಚಾರ..

ಬಿಜೆಪಿ ಪ್ರಣಾಲಿಕೆ ರಿಲೀಸ್, ಪ್ರತಿದಿನ ನಂದಿನಿ ಹಾಲು ವಿತರಣೆಗೆ ನಿರ್ಧಾರ..

About The Author