ದೇವದುರ್ಗ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕು, ಡಾ.ನಂಜುಂಡಪ್ಪ ವರದಿಯನ್ವಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಹಿಂದುಳಿದ. ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದೆ. ಅಸ್ತಿತ್ವದಲ್ಲಿರುವ ದೇವದುರ್ಗ ತಾಲ್ಲೂಕವನ್ನು ವಿಭಜಿಸಿ, ಸಾರ್ವಜನಿಕರಿಗೆ ಅನಕೂಲವಾಗುವಂತಹ ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದ,ಕೇವಲ 7-8 ಸಾವಿರ ಜನಸಂಖ್ಯೆವುಳ್ಳ ಅರಕೇರಾ ಗ್ರಾಮ ಪಂಚಾಯತಿ ಹೊಸ ತಾಲ್ಲೂಕು ಕೇಂದ್ರವಾಗಿ ಮಾಡಿಕೊಂಡಿರುವ ಮಾಜಿ ಶಾಸಕ ಕೆ ಶಿವನಗೌಡ ನಾಯಕ ನಂಬಿದ ಜನಕ್ಕೆ ಅನ್ಯಾಯ ಮತ್ತು ದ್ರೋಹ ಮಾಡಿದ್ದಾರೆ.
ಭೌಗೋಳಿಕವಾಗಿ ನೋಡುವುದಾದರೆ ದೇವದುರ್ಗ ತಾಲ್ಲೂರು, ಉದ್ಬ, ಕಿ.ಮೀ. ಮತ್ತು ಆಗಲ: 44 ಕಿ.ಮೀ. ಅಂತರವಿದ್ದು, ಆದರೆ ಶಾಸಕ ಕೆ.ಶಿವನಗೌಡ ನಾಯಕ ಅವರು ತನ್ನ ಪತ್ರದ ಮುಖಾಂತರ, ದೇವದುರ್ಗ ತಾಲ್ಲೂಕು ಉದ್ದ -125 ಮೀ, ಮತ್ತು ಅಗ-8 ಕಿ.ಮೀ ಇದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ, ಇರುವುದೇ ಉದ್ದ 30 ಕಿ,ಮೀ, ಮತ್ತು ಅಗಲ 4 ಕಿ.ಮೀ, ದೇವದುರ್ಗ ದಿಂದ ಅರಕೇರಾ ಕೇವಲ 20 ಕಿ.ಮೀ ಹತ್ತಿರದಲ್ಲಿದೆ ಮತ್ತು ಸಿರವಾರ ತಾಲ್ಲೂಕಿನಿಂದ 12 ಕಿ.ಮೀ. ಅಂತರದಲ್ಲಿದೆ. ಅರಕೇರಾದಲ್ಲಿ ಸಾರ್ವಜನಿಕರಿಗೆ
ಅನಕೂಲವಾಗುವಂತಹ ಯಾವುದೇ ಮೂಲಭೂತ ಸೌಕರ್ಯ ಕೂಡ ಇಲ್ಲ. ಅರಕೇರಾ ಕುಡಿಯುವ ನೀರಿಗೂ ಕೂಡ ಬೇರೊಂದು ಹಳ್ಳಿಗಳನ್ನು ಅವಲ೦ಬಿರ, ಅದೇ ಗ್ರಾಮದಿಂದ ಶಾಸಕರಾಗಿ, ಸಚಿವರಾಗಿ ದೀರ್ಘಾವಧಿ: ರಾಜಕೀಯ ಹುದ್ದೆ ಅನುಭವಿಸಿದರೂ ಸಹ ಅರಕೇರಾದಲ್ಲಿ ಪೊಲೀಸ್ ರಾಗ ಮಂಜೂರು ಮಾಡಿಸಲಾಗಿಲ್ಲ. ಕುಟುಂಬ ರಾಜಕಾರಣದಿಂದ ಆಯ್ಕೆಯಾದ ರಾಜಕಾರಣಿಗಳು ಸ್ಥಳೀಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ.
ಪರಿಣಾಮಕಾರಿಯಾಗಿ, ಸಮರ್ಥವಾದ ಆಡಳಿತ ನೀಡುವ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆ ನೀಡುವ ಸರ್ಕಾರದ ಉದ್ದೇಶವಾಗಿದ್ದರೆ ಅರಕೇರಾ ನೂತನ ತಾಲೂಕನ್ನು ಕೂಡಲೇ ರದ್ದುಪಡಿಸಿ, ಕೌಗೋಳಿಕವಾಗಿ ಸೂಕ್ತ ವಿಸ್ತಾರವು ತಾಲ್ಲೂಕಿನ ಯಾವ ಹೋಬಳಿ ಕೇಂದ್ರವನ್ನು ಇನರ್ ರಚನೆ ಮಾಡಿದರೆ ಸೂಕ್ತ ಮತ್ತು ಹಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಗಳನ್ನು ಭೇಟಿ ಮಾಡಲು ಮತ್ತು ಗ್ರಾಮಗಳ ಜನರು ತಾಲ್ಲೂಕು ಮಟ್ಟದ ಕಛೇರಿಗಳಿಗೆ ತಲುಪಲು ಅನುಕೂಲವಾಗಿ ಬಹುದಾದ ಪ್ರದೇಶವನ್ನು ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ
ಅಸ್ತಿತ್ವದಲ್ಲಿರುವ ದೇವದುರ್ಗ ತಾಲ್ಲೂಕುವನ್ನು ವಿಭಜನೆ ಮಾಡಿ ಹೊಸದೊಂದು ತಾಲ್ಲೂಕು ಮಾಡುವ ಅವಶ್ಯಕತೆ ಇಲ್ಲಿ ಸದ್ಯ ಇರುವುದಿಲ್ಲ ಮತ್ತು ರಾಗಿರುವ ತಾಲ್ಲೂಕು ಕೂಡಿ ಈಗೀಗ ಅಭಿವೃದ್ಧಿ ಹೊಂದುವ ಹಂತದಲ್ಲಿ ಇದ್ದು ಮತ್ತೆ ತಾಲ್ಲೂಕುವನ್ನಾಗಿ ರಚನೆ ಮಾಡಿದರೆ ಮತ್ತು ಮೂವತ್ತು ವರ್ಷ ಹಿಂದುಳಿಯಲಿದೆ.
Yamuna River: ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಗೂಳಿಯ ಬೆಲೆ ಎಷ್ಟು ಕೋಟಿ ಗೊತ್ತಾ..?! ಅಚ್ಚರಿ ಆದ್ರೂ ಇದು ಸತ್ಯ..!
ಇಲ್ಲಿ ತೆಂಗಿನಕಾಯಿ ಕಟ್ಟಿದ್ರೆ, ನೀವಂದುಕೊಂಡ ಕೆಲಸ ಆಗೋದು ಗ್ಯಾರಂಟಿ..
Nandalike : ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ