Hassan news: ಸಾಕಿದ ಕೋಳಿಯನ್ನು ಬೀದಿ ನಾಯಿಯೊಂದು ತಿಂದು ಹಾಕಿದೆ ಎನ್ನುವ ಕಾರಣಕ್ಕೆ ಕೋಳಿಯ ಮಾಲಿಕ ನಾಯಿಯನ್ನು ದಾರುಣವಾಗಿ ಸಾಯಿಸಿದ ಘಟನೆ ಹಾಸನದ ಕೆಂಚಟ್ಟಹಳ್ಳಿಯಲ್ಲಿ ನಡೆದಿದೆ. ಕಾಲುಕಟ್ಟಿ ಡಿವೈಡರ್ ಗೆ ಬಡಿದಿದ್ದಾನೆ ನಂತರ ರಕ್ತಸಿಕ್ತ ನಾಯಿಯನ್ನು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ.
ಮನುಷ್ಯತ್ವ ಇಲ್ಲದ ,ಕಲ್ಲು ಮನಸ್ಸಿನ ವ್ಯಕ್ತಿ ಒಂದು ಪ್ರಾಣಿಯನ್ನುಇನ್ನೊಂದು ಪ್ರಾಣಿ ತಿಂದಿದ್ದಕ್ಕೆ ಮೃಗದ ರೀತಿ ವರ್ತಿಸಿ ಕೋಳಿತಿಂದಿರುವ ನಾಯಿಯ ಕಾಲನ್ನು ಕಟ್ಟಿ ರಸ್ತೆಯ ಪಕ್ಕದಲ್ಲಿರುವ ಡಿವೈಡರ್ ಗೆ ಬಡಿದು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ.
ಇನ್ನು ಈ ಘಟನೆ ನಡೆದದ್ದು ಹಾಸನ ಜಿಲ್ಲೆಯ ಹೊರವಲಯದ ಕೆಂಚಟ್ಟಹಳ್ಳಿ ಬಳಿಯಿರುವ ಖಾಸಗಿ ಶಾಲೆಯ ಹತ್ತಿರ ಕೋಳಿಯನ್ನು ತಿಂದಿರುವ ನಾಯಿಯನ್ನು ಕಾಲುಕಟ್ಟಿ ಡಿವೈಡರ್ ಗೆ ಬಡಿದಿದ್ದಾನೆ ನಂತರ ರಕ್ತಸಿಕ್ತ ನಾಯಿಯನ್ನು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ ಇದನ್ನು ಪ್ರಶ್ನೆ ಮಾಡಲು ಬಂದವರಿಗೆ ನಿಂದಿಸಿದ್ದಾನೆ. ಈ ಘಟನೆ ವಿರುದ್ದ ಪ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Air pollution: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಯಕಲ್ಪ: ಈಶ್ವರ ಖಂಡ್ರೆ
Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.