Thursday, June 19, 2025

Latest Posts

Bribe borrowing- ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆದು ಅರ್ಜಿ ಸಲ್ಲಿಕ್ಕೆ…..ದಾಳಿ ಮಾಡಿದ ಅಧಿಕಾರಿಗಳು ಆಪರೇಟರ್ ಎಸ್ಕೇಪ್…

- Advertisement -

ಹುಬ್ಬಳ್ಳಿ: ಗೃಹಲಕ್ಷ್ಮೀ ಯೋಜನೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತೈಬಾ ಸೇವಾ ಕೇಂದ್ರದ ಬಾಗಿಲು ಮುಚ್ಚಿಸಿದ ಘಟನೆ ಹುಬ್ಬಳ್ಳಿಯ ಆಯೋದ್ಯಾನಗರದಲ್ಲಿರುವ ಚೈತನ್ಯ ನಗರದಲ್ಲಿ ನಡೆದಿದೆ.

ಸೇವಾಸಿಂಧು ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶಿಲ್ದಾರ ಕೆ ಆರ್ ಪಾಟೀಲ್ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸುವ ವೇಳೆ ಸೇವಾಸಿಂಧು ಆಪರೇಟರ್ ಕೇಂದ್ರಕ್ಕೆ ಬೀಗ ಹಾಕಿ ಅಲ್ಲಿಂದ ಕಾಲು ಕೀತ್ತಿದ್ದಾನೆ.
ಕೇಂದ್ರದಲ್ಲಿ ಗೃಹಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಜನರಿಂದ 150 ರೂಪಾಯಿ ಹಣ ಪಡೆಯುತ್ತಿದ್ದ ಆರೋಪ ಕೇಳ ಬಂದಿತ್ತು, ಅಲ್ಲದೇ ಸದರಿ ಸೇವಾಕೇಂದ್ರಕ್ಕೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಹಾಕಲು ಅನುಮತಿ ನೀಡಿಲ್ಲ ಎಂಬುದು ತಿಳಿದುಬಂದಿದೆ.

ಹುಬ್ಬಳ್ಳಿಯ ನವನಗರದಲ್ಲಿ ಕೇಂದ್ರವೊಂದಕ್ಕೆ ನೀಡಲಾಗಿದ್ದ ಯೂಸರ್ ಐಡಿ, ಪಾಸ್ ವರ್ಡ್ ಬಳಸಿ ಸದರಿ ಕೇಂದ್ರದಲ್ಲಿ ಅನಧಿಕೃತವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲಾಗುತ್ತಿರುವುದು ಪತ್ತೆಯಾಗಿದೆ.

ಈ ಕುರಿತಂತೆ ಸ್ಥಳಕ್ಕೆ ಬೇಟಿ ನೀಡಿದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.

Dogs plauge:ಬೀದಿನಾಯಿ ಕಡಿತದಿಂದ ಇಬ್ಬರು ಮಕ್ಕಳಿಗೆ ಗಾಯ

KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.

- Advertisement -

Latest Posts

Don't Miss