Thursday, June 19, 2025

Latest Posts

Loksabha Election: ಚಿತ್ರದುರ್ಗ ಲೋಕಸಭಾ ಬಿಜೆಪಿ ಟಿಕೆಟ್ ಯಾರಿಗೆ.?

- Advertisement -

ಚಿತ್ರದುರ್ಗ : ಲೋಕಸಭಾ ಚುನಾವಣೆಗೆ ಇನ್ನೇನು 8 ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆ ಈಗಾಗ್ಲೇ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಅನ್ನೋ ಚರ್ಚೆ ಆಗ್ತಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ 25 ಸಂಸದರಿದ್ದಾರೆ. ಹಲವು ಬಿಜೆಪಿ ಸಂಸದರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಬಗ್ಗೆ ಈಗಾಗ್ಲೇ ಸಾಕಷ್ಟು ಸುದ್ದಿ, ಸದ್ದು ಮಾಡ್ತಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಕುತೂಹಲ ಕೂಡ ಕೋಟೆ ಜನರನ್ನ ಕಾಡ್ತಿದೆ. ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಈ ಬಾರಿ ದುರ್ಗದಿಂದ ಸ್ಪರ್ಧೆ ಮಾಡೋದು ಡೌಟು ಅನ್ನೋ ಚರ್ಚೆ ನಡೀತಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಅನ್ನೋ ಬೇಡಿಕೆ ಹೆಚ್ಚಾಗ ತೊಡಗಿದೆ. ಜೊತೆಗೆ ಯುವಕರಿಗೆ ಅವಕಾಶ ನೀಡಬೇಕು ಅಂತ ಬಿಜೆಪಿ ನಾಯಕರೇ ಒತ್ತಾಯವನ್ನ ಮಾಡ್ತಿದ್ದಾರೆ.

ಬೋವಿ ಸಮುದಾಯಕ್ಕೆ ಟಿಕೆಟ್.?

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ 2024ಕ್ಕೆ ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಡ ಹೇರಲಾಗ್ತಿದೆ. ಜಿಲ್ಲೆಯಲ್ಲಿ ಬೋವಿ ಸಮಾಜ ನಿರ್ಣಾಯಕ. ಜೊತೆಗೆ ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ಹಾಗೂ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿರೋದು ಕೇವಲ ಒಂದೇ ಕ್ಷೇತ್ರ. ಅದು ಹೊಳಲ್ಕೆರೆ ಮೀಸಲು ಕ್ಷೇತ್ರ. ಹೊಳಲ್ಕೆರೆಯಿಂದ ಬಿಜೆಪಿಯ ಶಾಸಕರಾಗಿ ಚಂದ್ರಪ್ಪ ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೋವಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.

ಎಂ.ಸಿ. ರಘು ಚಂದನ್ ಹೆಸರು ಮುನ್ನೆಲೆಗೆ

ಲೋಕಸಭಾ ಚುನಾವಣೆ ಸಮೀಪಿಸ್ತಿರೋ ಈ ಸಂದರ್ಭದಲ್ಲಿ ಚಿತ್ರದುರ್ಗದಿಂದ ಎಂ.ಸಿ. ರಘು ಚಂದನ್ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರ ಮಗ ರಘು ಚಂದನ್ ಗೆ ಲೋಕಸಭೆಗೆ ಟಿಕೆಟ್ ನೀಡುವಂತೆ ಒಂದು ವರ್ಗ ಒತ್ತಾಯ ಮಾಡ್ತಿದೆ. ವಿದ್ಯಾವಂತರೂ, ಯುವಕರೂ ಆಗಿರೋ ರಘು ಚಂದನ್ ಕೂಡ ಈಗ ಟಿಕೆಟ್ ರೇಸ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಹೊಳಲ್ಕೆರೆಯಲ್ಲಿ ತಮ್ಮ ತಂದೆ ಚಂದ್ರಪ್ಪ ಗೆಲುವಿಗೆ ರಘು ಚಂದನ್ ಶ್ರಮ ಕೂಡ ಇದೆ. ಎಲ್ಲಾ ಕಡೆ ಬಿಜೆಪಿ ಸೋತರೂ ಹೊಳಲ್ಕೆರೆಯಲ್ಲಿ ಗೆಲ್ಲೋದಕ್ಕೆ ಕಾರಣ ರಘು ಚಂದನ್ ಪಕ್ಷ ಸಂಘಟನೆ ಅಂತ ಸ್ಥಳೀಯ ಕಾರ್ಯಕರ್ತರು ಹೇಳ್ತಿದ್ದಾರೆ. ಹೀಗಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ರಘು ಚಂದನ್ ಗೆ ಟಿಕೆಟ್ ನೀಡಬೇಕು ಅನ್ನೋ ಕೂಗು ಜೋರಾಗ್ತಿದೆ.

ರಘು ಚಂದನ್ ಫುಲ್ ಆ್ಯಕ್ಟೀವ್

ವಿಧಾನಸಭಾ ಚುನಾವಣೆ ಆರಂಭದಿಂದಲೂ ರಘು ಚಂದನ್ ಪಕ್ಷದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ರು. ಕೇವಲ ಹೊಳಲ್ಕೆರೆಗೆ ಸೀಮಿತವಾದೆ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ತಮ್ಮನ್ನ ತೊಡಗಿಸಿಕೊಂಡಿದ್ರು. ಈಗ ಲೋಕಸಭಾ ಚುನಾವಣೆ ಸಮೀಪಿಸ್ತಿದ್ದು, ಪಕ್ಷದ ಗೆಲುವಿಗೆ ಶ್ರಮಿಸೋಕೆ ತಯಾರಿಯನ್ನ ಮಾಡ್ಕೊಳ್ತಿದ್ದಾರೆ.

ಕರ್ನಾಟಕ ಟಿವಿ

DK Shivakumar : ಬಿಜೆಪಿ ಮಾಡಿದರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೇ?: ಡಿಸಿಎಂ ಡಿ.ಕೆ. ಶಿವಕುಮಾರ್‌

DK Shivakumar : ಬಿಜೆಪಿ ಮಾಡಿದರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೇ?: ಡಿಸಿಎಂ ಡಿ.ಕೆ. ಶಿವಕುಮಾರ್‌

Elephant: ಕಾಡಾನೆ ದಾಳಿಯಿಂದ ಕಾಲು ಸ್ವಾದೀನ ಕಳೆದುಕೊಂಡ ಯುವಕ

- Advertisement -

Latest Posts

Don't Miss