ಹುಬ್ಬಳ್ಳಿ: ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದ ಎಂ.ಎಲ್.ಸಿ ಹೆಚ್ ವಿಶ್ವನಾಥ್ ಮತ್ತು ಮಾಜಿ ಸಚಿವ ಹೆಚ್.ಎಮ್ ರೇವಣ್ಣ ಕುರುಬ ಸಮುದಾಯದ ಸಭೆ ನಡೆಸುವ ಕುರಿತು ಮಾತನಾಡಿದರು.
ಎಚ್.ಎಮ್ ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಟ್ಟು ದೇಶದಲ್ಲಿ ಕುರುಬ ಜನಾಂಗದವರು 12 ಕೋಟಿ ಜನಸಂಖ್ಯೆ ಇದ್ದು ಈಗಾಗಲೆ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಕಾರ್ಯಕ್ರಮ ಹಾಗೂ ದೆಹಲಿ,ಹರಿಯಾಣ, ರಾಜಸ್ತಾನದಲ್ಲಿ ರಾಷ್ಟ್ರೀಯ ಸಮಾವೇಶ ಮತ್ತು ಐದನೇ ಸಮಾವೇಶವನ್ನು ತೆಲಾಂಗಣದಲ್ಲಿ ಮಾಡಿ ನಮ್ಮ ಸಮಾಜದವರನ್ನು ಒಟ್ಟು ಗೂಡಿಸುವ ಕೆಲಸ ಮಾಡಿದ್ದೇವೆ. ಇನ್ನು ಈ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ದುರುದ್ದೇಶದಿಂದ ಅಲ್ಲ ಪಕ್ಷಾತಿತವಾಗಿ ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಬೆಳಗಾವಿಯಲ್ಲಿ ಅಕ್ಟೋಬರ್ 2 ರಂದು ಅಖಿಲ ಭಾರತ ಶೆಫರ್ಡ್ ಮುಖಂಡರ ಕಾರ್ಯಕಾರಿಣಿ ಸಭೆಯನ್ನು ಕೈಗೊಂಡುದ್ದು ಈ ಕಾರ್ಯಕ್ರಮಕ್ಕೆ ಹರಿಯಾಣದ ಗವರ್ನರ್, ರಾಜಸ್ತಾನ, ಉತ್ತರ ಪ್ರದೇಶದಿಂದ ಜನ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳಿದರು. ಇಡೀ ಭಾರತದಲ್ಲಿ ಏಕೈಕ ಕುರುಬ ಮುಖ್ಯಮಂತ್ರಿ ಎಂದರೆ ಸನ್ಮಾನ್ಯ ಸಿದ್ದರಾಮಯ್ಯನವರು ಒಬ್ಬರೇ ಇನ್ನು ಬೆಳಗಾವಿಯಲ್ಲಿ ನಡೆಯುವ ಮುಂದಿನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರ ಆಡಳಿತವನ್ನು ಮೆಚ್ಚಿ ನಾವು ಕರೆದಿರುವ ಪ್ರತಿಯೊಬ್ಬರು ಬರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಇನ್ನು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಖಿಲ ಭಾರತ ಸನ್ಮಾನ ಮಾಡಲಿದ್ದೇವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ನಮಗೆ ಬಹಳ ಸಂತೋಷವಾಗಿದೆ. ಇಡಿ ರಾಷ್ಟ್ರದಲ್ಲಿ ಸಿದ್ದರಾಮಯ್ಯನವರಿಗೆ ಮನ್ನಣೆ ಸಿಕ್ಕಿದೆ. ನಮ್ಮ ಸಮುದಾಯದವರು ದಲಿತ ಅಲ್ಪ ಸಂಖ್ಯಾತರಿಗಿಂತಲೂ ನಾವು ರಾಜಕೀಯವಾಗಿ ಹಿಂದೆ ಇದ್ದೇವೆ ದೊಡ್ಡ ಸಮಾವೇಶ ಮಾಡೋ ಮೂಲಕ ನಾವು ಸಮಾಜ ಒಗ್ಗೂಡಿಸೋ ಕೆಲಸ ಮಾಡ್ತೀವಿ ಎಂದು ಹೆಚ್ ಎಮ್ ರೇವಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Sankalpa Shetter: ಬಕೆಟ್ ಹಿಡಿದು ಟಿಕೆಟ್ ಗಿಟ್ಟಿಸಿಕೊಂಡವರು ಯಾರು ಅನ್ನೋದು ಗೊತ್ತಿದೆ..!
National Highway: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ..!