Thursday, June 19, 2025

Latest Posts

Sanathana Dharma ಪ್ರಕಾಶ್ ರಾಜ್ ಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ; ಪ್ರಹ್ಲಾದ್ ಜೋಶಿ

- Advertisement -

ಹುಬ್ಬಳ್ಳಿ:ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಟ ಪ್ರಕಾಶ ರಾಜ್ ಅವರ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಕಾಶ್ ರಾಜ್ ಅವರು ಯಾವಾಗಲೂ ಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ  ಅವರದ್ದು ಅತೃಪ್ತ ಆತ್ಮ ಎಂದು ತಿರುಗೇಟು ನೀಡಿದ್ದಾರೆ.  

ಇನ್ನು ಸನಾತನ ಧರ್ಮದ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು ಒಬ್ಬ ಜಂಟಲ್ ಮ್ಯಾನ್ ಅಂದುಕೊಂಡುದ್ದೆವು ಅವರು ತಮ್ಮ ಪಕ್ಷದ ಮತಬ್ಯಾಂಕ್ ರಾಜಕಾರಣಕ್ಕಾಗಿ ಏನೇನೋ ಮಾತಾನಾಡುತ್ತಿದ್ದಾರೆ ಹಿಂದೂ ಸನಾತನ ಧರ್ಮ ಅನ್ನುವುದು ನಿತ್ಯ ನೂತನ ಪ್ರತಿಯೊಬ್ಬರಿಗೂ ಅದು ಚಿರಪರಿಚಿತ ಇನ್ನು ಸನಾತನ ಧರ್ಮ ಹೊಸದಾಗಿ ಹುಟ್ಟಿಕೊಂಡಿರುವ ಧರ್ಮವಲ್ಲ ಅದು ಬಹಳ ಪುರಾತನ ಕಾಲದ್ದು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ ಎಂದು  ಪರಮೇಶ್ವರ್ ವಿರುದ್ದ ಕಿಡಿಕಾರಿದರು.

ಹುಬ್ಬಳ್ಳಿಯ ರಾಣೆ ಚಿನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸುವ ಕುರಿತು ವಿವಾದದ ವಿಚಾರವಾಗಿ ಮಾತನಾಡಿದ ಜೋಷಿಯವರು ಈ ಮೈದಾನ ಒಂದು ಸಮುದಾಯಕ್ಕೆ ಸೇರಿದ್ದಲ್ಲ, ಮೈದಾನ ಪಾಲಿಕೆಯ ಆಸ್ತಿ, ಆ ಮೈದಾನದಲ್ಲಿ ಪಾಲಿಕೆ ಗಣೇಶ ಕೂರಿಸಲು ಅನುಮತಿ ನೀಡಬೇಕು. ಕಳೆದ ವರ್ಷ ನ್ಯಾಯಾಲಯದ ಆದೇಶದ ಮೇರೆಗೆ  ಅನುಮತಿ  ನೀಡಲಾಗಿತ್ತು.ಆದರೆ ಈ ವರ್ಷ ಮತ್ತೆ ಅದೇ ತಕರಾರು ಇದೇ ವಿಚಾರವಾಗಿ ಬಿಜೆಪಿ ಕಾರ್ಯ ಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಯಾವ ಸರ್ಕಾರವೂ ಶಾಶ್ವತವಲ್ಲ ಪೊಲೀಸರು ಬಿಜೆಪಿ ಕಾರ್ಯ ಕರ್ತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ರಾಜಕಾರಣಿಗಳ ಮಾತು ಕೇಳಿ ಕೇಸ್ ಹಾಕಬಾರದು.

ಬಿಜೆಪಿ ಸದಾ ಹೋರಾಟದಂದಲೆ ಮೇಲೆ ಬಂದ ಪಕ್ಷ, ಕಾರ್ಯಕರ್ತರ ಮೇಲೆ ದೌರ್ಜನ್ಯ ನಿಲ್ಲಿಸದಿದ್ದರೆ ಪೊಲೀಸರ ವಿರುದ್ದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!

Auto: ಒಂದೇ ದಿನದಲ್ಲಿ ಆಟೋ ರಿಕ್ಷಾ ಕಳ್ಳರನ್ನು ಬಂಧಿಸಿದ ಪೊಲೀಸರು..!

Police: ಕಳ್ಳತನ ಮಾಡಿ ಮನೆಯಿಂದ ಬಾಹರ್; ಠಾಣೆಯಲ್ಲಿ ಅಂದರ್..!

- Advertisement -

Latest Posts

Don't Miss