ಧಾರವಾಡ: ವಿದ್ಯಾಕಾಶಿ ಇಂದಿನಿಂದ 4ದಿನಗಳ ಕಾಲ ಕೃಷಿ ಜಾತ್ರೆಗೆ ಸಾಕ್ಷಿಯಾಗಲಿದೆ..ಧಾರವಾಡದ ಕೃಷಿ ವಿವಿಯಲ್ಲಿ ಆರಂಭವಾಗಿರುವ ಕೃಷಿ ಮೇಳ ಉತ್ತರ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ರೈತರಿಗೆ ಅನುಕೂಲವಾಗಲಿದೆ.
ಇಂದಿನಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ರಿಬ್ಬನ್ ತೆರೆಯುವ ಮೂಲಕ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇವರಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ ಸಾಥ್ ನೀಡಿದರು.ಅಲ್ಲಿಂದ ನೇರವಾಗಿ ಒಳಗಡೆ ಬಂದ ಸಿಎಂ ಸಿದ್ದರಾಮಯ್ಯ, ಬೋನ್ಸಾಯ್ ಸಸಿ, ವಿವಿಧ ಸಸ್ಯ ತಳಿ, ವಿವಿಧ ಹೂವುಗಳನ್ನು ವೀಕ್ಷಿಸಿದರು. ಕಲ್ಲಂಗಡಿ ಹಣ್ಣಿನಲ್ಲಿ ರಚಿಸಲಾದ ಕಲಾಕೃತಿಗಳನ್ನು ಸಿದ್ದರಾಮಯ್ಯ ತದೇಕಚಿತ್ತದಿಂದ ವೀಕ್ಷಿಸಿ ಖುಷಿಪಟ್ಟರು. ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ, ಅಲ್ಲಿಂದ ನೇರವಾಗಿ ಕೃಷಿ ಮೇಳದ ಮುಖ್ಯ ವೇದಿಕೆಯತ್ತ ತೆರಳಿದರು. ರೈತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ವಿಶೇಷವಾಗಿ ಹಲವು ಮಾಹಿತಿಗಳನ್ನು ಹಂಚಿಕೊಂಡರು
ಓದುವ ವಯಸ್ಸಿನಲ್ಲೇ ಕೃಷಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ಸಿಎಂ ಅದರ ಬಗ್ಗೆ ಹೆಚ್ಚಾಗಿ ಒಲವು ಈಗಲೂ ಇದೆ ಅಂತ ಹೇಳಿದ್ರು.ಇನ್ನೂ ರೈತರಲ್ಲಿ ಹೊಸ ಹೊಸ ಬಗೆಯ ಕೃಷಿಯ ಬಗ್ಗೆ ಕೃಷಿ ವಿವಿ ಯ ಪಾತ್ರ ತುಂಬಾ ಮುಖ್ಯವಾಗಿದ್ದು, ಅದನ್ನ ಉಳಿಸಿಕೊಂಡು ವಿವಿ ಗಳು ಹೋಗಬೇಕು ಅಂತ ಸಿಎಂ ಸೂಚಿಸಿದರು..ಇನ್ನೂ ಸದ್ಯ ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಶೀಘ್ರದಲ್ಲೇ ಬರ ಘೋಷಣೆ ಮಾಡುವುದಾಗಿ ಸಿಎಂ ರಾಜ್ಯದ ರೈತರಿಗೆ ಭರವಸೆ ನೀಡಿದ್ದರು..ಅಲ್ಲದೆ ಕೇಂದ್ರ ಸರ್ಕಾರದ ಬಗ್ಗೆ ಲೇವಡಿ ಮಾಡಿದ ಸಿದ್ದು, ಮಹದಾಯಿ ವಿಚಾರ ಸೇರಿದಂತೆ ಬರಗಾಲ ಘೋಷಣೆ ಬಗ್ಗೆ ಪತ್ರಗಳನ್ನ ಬರೆದರೂ ಸಹ ಕೇಂದ್ರದಿಂದ ಉತ್ತರ ಮಾತ್ರ ಬರುತ್ತಿಲ್ಲ ಅಂತ ಕೇಂದ್ರ ಸರ್ಕಾರದ ವಿರುದ್ಧ ಹರಹಾಯ್ದರು..ಅಲ್ಲದೆ ವಿಶೇಷವಾಗಿ ಈ ಹಿಂದೆ ಕೃಷಿ ಭಾಗ್ಯ ಘೋಷಣೆ ಮಾಡಿದ್ದ ನಮ್ಮ ಸರ್ಕಾರ ಬಿಜೆಪಿ ಬಂದ ತಕ್ಷಣವೇ ಅದನ್ನ ರದ್ದುಗೊಳಿಸಿತ್ತು..ಇದೀಗ ಮತ್ತೆ ಕೃಷಿ ಭಾಗ್ಯ ಯೋಜನೆಯನ್ನ ಶೀಘ್ರದಲ್ಲೇ ಆರಂಭಿಸುತ್ತೇವೆ ಅಂತ ಸಿಎಂ ಘೋಷಿಸಿದರು..
ಇನ್ನು ಸಿಎಂ ಗೆ ಸಾಥ್ ನೀಡಿದ ಸಚಿವ ಚೆಲುವರಾಯಸ್ವಾಮಿ ಭಾಷಣದ ವೇಳೆ ಮಂಡ್ಯದಿಂದ ಮೊದಲ ಬಾರಿಗೆ ಓರ್ವ ಕೃಷಿ ಸಚಿವನಾಗಿದ್ದು ಖುಷಿ ತಂದಿದೆ..ಕೃಷಿಗೆ ಅಗತ್ಯವಿರುವ ಕೆಲಸಗಳನ್ನ ಮಾಡುವುದಾಗಿ ಭರವಸೆ ನೀಡಿದರು..ಬರಗಾಲ ಎದುರಾಗಿದೆ ಈ ಹಿನ್ನೆಲೆ ಇನ್ನೂ ಒಂದು ವಾರದಲ್ಲಿ ಆ ಬಗ್ಗೆ ಸಿಎಂ ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ ಹೇಳಿದ್ರು..
ಒಟ್ಟಾರೆ ಧಾರವಾಡದಲ್ಲಿ ಆರಂಭವಾಗಿರುವ ಕೃಷಿ ಜಾತ್ರೆ ಇನ್ನೂ ಮೂರು ದಿನಗಳ ನಡೆಯಲಿದೆ..ವಿಶೇಷವಾಗಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ತಳಿಗಳ ಪ್ರದರ್ಶನ ಹಾಗೂ ರೈತರಿಗೆ ಬೇಕಾದ ಎಲ್ಲ ಸಲಕರಣೆಗಳ ಪ್ರದರ್ಶನ ನಡೆಯಲಿದ್ದು ರಾಜ್ಯದ ರೈತರು ಇನ್ನೂ ಮೂರು ದಿನಗಳ ಈ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ.
Drought: ನಮ್ಮ ಪತ್ರಕ್ಕೆ ಪ್ರಧಾನಿ ಉತ್ತರ ಕೊಡದಿದ್ದರೆ ಬರಗಾಲ ಘೋಷಣೆ: ಸಿಎಂ