Thursday, June 19, 2025

Latest Posts

Anganavadi: ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಚ್ಚುವ ಆತಂಕವಾಗಿದೆ

- Advertisement -

ನಾಯಕನಹಟ್ಟಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಕಳೆದ 8 ವರ್ಷಗಳಿಂದ ಶೂನ್ಯದಿಂದ ಆರು ವರ್ಷ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಲಾಲನೆ – ಪಾಲನೆ ಕೇಂದ್ರಗಳನ್ನು ಶಾಲಾ ಪೂರ್ವ ಶಿಕ್ಷಣ ಮಾಡಲಾಗುತ್ತಿದೆ. ಆದರೆ ಅಂಗನವಾಡಿ  ಕೇಂದ್ರಗಳು  ಇರುವ ಕಡೆ ಶಿಶು ಪಾಲನ ಕೇಂದ್ರಗಳು, ಶಾಲಾ ಪೂರ್ವ ತರಗತಿಗಳನ್ನು ನಡೆಸಲು ಮುಂದಾಗಿರುವುದು  ಖಂಡನೀಯ ಎಂದು ಎ ಐ ಟಿ ಯು ಸಿ ಸಂಘಟನೆಯ ರಾಜ್ಯ ಸಂಚಾಲಕರಾದ ಸಿ ವೈ ಶಿವರುದ್ರಪ್ಪನವರು ಹೇಳಿದರು.

ಚಳ್ಳಕೆರೆಯ ಕಂಬಳಿ ಮಾರುಕಟ್ಟೆ ಭವನದಲ್ಲಿ ಅಂಗನವಾಡಿ ಶಿಕ್ಷಕಿಯರ ಸಭೆಯನ್ನು ಉದ್ದೇಶಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶಿಶು ಪಾಲನ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿ ಇರುವುದರಿಂದ ಹಂತ ಹಂತವಾಗಿ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ ಕೇಂದ್ರಗಳನ್ನು ಮುಚ್ಚುವ ಆತಂಕವಾಗಿದೆ ಎ ಐ ಟಿ ಯು ಸಿ ಸಂಘಟನೆಯ ರಾಜ್ಯ ಸಂಚಾಲಕರಾದ ಸಿವೈ ಶಿವರುದ್ರಪ್ಪನವರು ತಿಳಿಸಿದರು.

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿಯಾದ ಶ್ರೀಮತಿ ಪ್ರಿಯಾಂಕ ಗಾಂಧಿಯವರು ಬೆಳಗಾವಿಯ ಖಾನಾಪುರದಲ್ಲಿ ಅಂಗನವಾಡಿ ಸಂಘಟನೆಯ ನಾಯಕರೊಂದಿಗೆ ಸಮಾಲೋಚಿಸಿ ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ ಗೌರವ ಧನವನ್ನು 15000 /ಮತ್ತು 10,000 / ರೂಪಾಯಿಗಳವರೆಗೂ ಹೆಚ್ಚಿಸುವ ಮತ್ತು ನಿವೃತ್ತರಿಗೆ ಇಡು ಗಂಟು ಮೂರು ಲಕ್ಷ ನೀಡುವ ಬರವಸೆ ಇದುವರೆಗೂ ಈಡೇರಿಸಿಲ್ಲ. ಈ ಭರವಸೆಯನ್ನ ಆರನೇ ಗ್ಯಾರಂಟಿಯಾಗಿ ಘೋಷಿಸಿ ಭರವಸೆಯನ್ನು ಈಡೇರಿಸಬೇಕು ಎಂದು ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ ರಾಜ್ಯ ಸಂಘಟನೆಯ ಮುಖಂಡರಾದ ಎಸ್ ಸಿ ಕುಮಾರ್ ರವರು ಒತ್ತಾಯಿಸಿದರು.

ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ಸಹಕಿಯರಿಗೆ ಗ್ರಾಜಿಯಟ್ ಪಡೆಯಲು ಅರ್ಹರು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲಾ  ನಿವೃತ್ತ ರಿಗೆ ಅನ್ವಯವಾಗುವಂತೆ ಜಾರಿಗೊಳಿಸಲು ಕ್ರಮ ವಹಿಸಬೇಕು ಎಂದು ಸಿಪಿಐ ಮುಖಂಡರಾದ ಜಾಫರ್ ಷರೀಫ್ ರವರು ಆಗ್ರಹ ಪಡಿಸಿದರು.

ಹಿರಿಯೂರು ತಾಲೂಕಿನ ಅಂಗನವಾಡಿ ಶಿಕ್ಷಕಿ ಯರ ಅಧ್ಯಕ್ಷರಾದ ನಿರ್ಮಲ, ಮೊಳಕಾಲ್ಮೂರು ತಾಲೂಕು ಅಂಗನವಾಡಿ ಶಿಕ್ಷಕಿಯರ ಅಧ್ಯಕ್ಷರಾದ ಲಕ್ಷ್ಮಿ ದೇವಿ. ಮುಖಂಡರಾದ ವಿಮಾಲಾಕ್ಷಿ. ಎಂ ಪದ್ಮಕ್ಕ. ಸಿ ಪದ್ಮಮ್ಮ . ಜೆ ಸಿ ಸರ್ವಜಮ್ಮ. ಒಬಮ್ಮ. ವೀಣಾ. ಮುಭಿನಾ ಬಾನು. ಇತರರು ಮಾತನಾಡಿದರು.

ಎ ಐ ಯು ಟಿ ಸಿ ತಾಲೂಕು ಅಧ್ಯಕ್ಷರಾದ ಪಿ ತಿಪ್ಪೇರುದ್ರಪ್ಪ. ಅಧ್ಯಕ್ಷತೆ ವಹಿಸಿದ್ದರು. ನೂತನ ವಾಗಿ ಅಂಗನವಾಡಿ ಶಿಕ್ಷಕಿಯರ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ ಪದ್ಮಕ್ಕ. ಉಪಾಧ್ಯಕ್ಷರಾಗಿ ಜೆ ಸಿ ಸರೋಜಾ. ವೀಣಾ. ವಿಜಯಮ್ಮ . ಪಿ ಪದ್ಮಮ್ಮ. ಕಾರ್ಯದರ್ಶಿಗಳಾಗಿ ವಿಮಲಾಕ್ಷಿ, ಲೀಲಾ, ಓಬಮ್ಮ,. ಮತ್ತು ಸಮಿತಿಯ ಸದಸ್ಯರನ್ನು ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು

ಉಚ್ಚಾಟನೆ : ಅಂಗನವಾಡಿ ಶಿಕ್ಷಕಿಯರ ಹಾಗೂ ಸಹಾಯಕಿಯರ ಸಂಘಟನೆಯ ವಿರೋಧ ಚಟುವಟಿಕೆ ಕೈಗೊಂಡಿದ್ದರಿಂದ ಆರ್ ವೇದಾವತಿ ಯವರನ್ನು ಎ ಐ ಯು ಟಿ ಸಿ ಸಂಘಟನೆಯಿಂದ ಹುಚ್ಚಾಟನೆ ಮಾಡಲಾಯಿತು.

Road cross; ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಅಪರಿಚಿತ ಜೀವಾಂತ್ಯ..!

Earth Quake: ದೆಹಲಿಯಲ್ಲಿ ಭೂಕಂಪ; ಆತಂಕದಲ್ಲಿ ಜನ..!

ಒಂಬತ್ತು ಗ್ರಾಮಗಳ ಬಗ್ಗೆ ತಪ್ಪು ಮಾಹಿತಿ ರವಾನೆ: ಊರು ಬಿಡುವ ಆತಂಕದಲ್ಲಿ ಜನರು..!

- Advertisement -

Latest Posts

Don't Miss