ನನ್ನ 40 ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ: ಕಾಂಗ್ರೆಸ್ ಕಾರ್ಯಕರ್ತರ ನಡೆಗೆ ಸಚಿವರ ಬೇಸರ

Hassan Political news: ಹಾಸನ: 2024ರ ಲೋಕಸಭಾ ಚುನಾವಣೆಗಾಗಿ ಹಾಸನದಲ್ಲಿ ಕಾಂಗ್ರೆಸ್ ಸಭೆ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ಏರ್ಪಟ್ಟಿದ್ದು, ವೇದಿಕೆ ಮೇಲೆ ಕಾರ್ಯಕರ್ತರ ವರ್ತನೆಗೆ  ಕೃಷಿ ಸಚಿವ ಚೆಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.  ನೀವು ಈ ರೀತಿ ಗಲಾಟೆ ಮಾಡಿದ್ರೆ ನಾನು ಹೊರಟು ಹೋಗ್ತಿನಿ. ನನ್ನ 40 ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ ಎಂದು ಹೇಳಿದರು.

ಇನ್ನು ಈ ಜಗಳ ನಡೆಯೋಕ್ಕೆ ಕಾರಣವೇನು ಅಂತಾ ಹೇಳಿದರೆ, ಹಾಸನ ಹೊರವಲಯದ ಕಲ್ಯಾಣ ಮಂಟಪವೊಂದರಲ್ಲಿ, ಕಾಂಗ್ರೆಸ್ ಸಭೆ ನಡೆಯುತ್ತಿತ್ತು. ಈ ವೇಳೆ ಮುಖಂಡ ಹೆಚ್ ಕೆ ಮಹೇಶ್ ಅವ್ರಿಗೆ ವೇದಿಕೆ ಮೇಲೆ ಆಸನ ಸಿಕ್ಕಿಲ್ಲ ಎಂಬ ಕಾರಣಕ್ಕೆ, ಅವರ ಬೆಂಬಲಿಗರು ಗದ್ದಲ ಶುರು ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ,  ನೀವು ಈ ರೀತಿ ಮಾಡಿದ್ರೆ ಕಷ್ಟ. ಎಲ್ಲವನ್ನ ಸರಿ ಮಾಡೋಣ.  ಸಣ್ಣ ಪುಟ್ಟ ವ್ಯತ್ಯಾಸಗಳನ್ನ ಸರಿ ಮಾಡಿಕೊಂಡು ಹೋರಾಡೋಣ ಎಂದು ಹೇಳುವ ಮೂಲಕ, ಎಲ್ಲ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.

‘ಯಾರೋ ಗಿರಾಕಿ ಲಂಚ ಪಡೆದಿರುವ ಆರೋಪಿ ಯಾರೆಂದು ಬಹಿರಂಗ ಪಡಿಸಲಿ’

‘ಶುಭ ಅಷ್ಟಮಿ ದಿನ, ನನಗೆ ಅಷ್ಟೈಶ್ವರ್ಯ ಒಲಿದ ಸಂಭ್ರಮ!’

ಚೆಂದದ ನರ್ಸ್ಗಳು ಅಜ್ಜ ಅಂತಾರೆ: ಕಾಂಗ್ರೆಸ್ ಶಾಸಕ ಬೇಸರ

About The Author