Friday, June 20, 2025

Latest Posts

‘ನಿನ್ನೆಯೇ ಹಲವರಿಗೆ ಶಾಕ್ ಹೊಡೆದಿದೆ, ವಿಷಯ ತಿಳಿದರೂ ಅಧಿಕಾರಿಗಳು ಸ್ಥಳಕ್ಕೆ ಬರದೇ ನಿರ್ಲಕ್ಷಿಸಿದ್ದಾರೆ’

- Advertisement -

Hassan Political News: ಹಾಸನ: ಹಾಸನದಲ್ಲಿ ಹಾಸನಾಂಬೆ ದರ್ಶನದ ವೇಳೆ ಶಾಕ್ ಹೊಡೆದು ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ಆ ಸ್ಥಳದಲ್ಲಿ ನೂಕುನುಗ್ಗಲಾಗಿದ್ದು, ಸ್ಥಳಕ್ಕೆ ಪ್ರಜ್ವಲ್ ರೇವಣ್ಣ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರಿಂದ ಮಾಹಿತಿ ಪಡೆದ ಸಂಸದ ಪ್ರಜ್ವಲ್ ರೇವಣ್ಣ ಮುಂದೆ ಭಕ್ತಾದಿಗಳು ಸಮಸ್ಯೆಗಳ ಸರಮಾಲೆ ಇಟ್ಟಿದ್ದಾರೆ. ಅಲ್ಲದೇ, ಕಂದಾಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾರೆ. ಭಕ್ತರ ಸಮಸ್ಯೆ ಕೇಳಿ, ಪ್ರಜ್ವಲ್ ರೇವಣ್ಣ ಜಿಲ್ಲಾಡಳಿತದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಈ ಬಗ್ಗೆ ತನಿಖೆಯಾಗಲೇಬೇಕು. ಮೂರು ದಿನಗಳಿಂದ ಏನು ಮಳೆ ಬಂತು, ಗಾಳಿ ಮಳೆ, ಅದರಿಂದ ಸ್ವಲ್ಪ ಶಾರ್ಟ್ ಸರ್ಕ್ಯೂಟ್ ಆಗಿದೆ ಅಂತ ಕೆಳ್ಪಟ್ಟೆ. ಇನ್ನೊಂದು ಶಾಕಿಂಗ್ ಸುದ್ದಿ ಅಂದ್ರೆ, ನಿನ್ನೆನೂ ಕೆಲವರಿಗೆ ಶಾಕ್ ಹೊಡೆದಿತ್ತು. ಆದರೆ ಅದು ಸುದ್ದಿಯಾಗಿರಲಿಲ್ಲ. ಈ ಬಗ್ಗೆ ಯಾರೂ ಕೂಡ ಗಮನ ಹರಿಸಿರಲಿಲ್ಲ. ಹಾಗಾಗಿ ಎಡಿಸಿ ಮತ್ತು ಡಿಸಿ ಅವರ ಬಳಿಯೂ ಮಾತನಾಡಿದ್ದೇನೆ. ಯಾಕೆ ನಿನ್ನೆಯೇ ಈ ಘಟನೆ ನಡೆದಿದ್ದರೂ ಕೂಡ, ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ವೀಕ್ಷಣೆ ಮಾಡಿ, ಸಮಸ್ಯೆ ಬಗೆಹರಿಸಲಿಲ್ಲವೆಂದು ತನಿಖೆಯಾಗಬೇಕು. ಇದಕ್ಕಾಗಿ ನೋಟೀಸ್ ಜಾರಿ ಮಾಡುವಂತೆ ಹೇಳಿದ್ದೇನೆ ಎಂದಿದ್ದಾರೆ.

ಆರ್.ಡಿ ಪಾಟೀಲ್ ಗೆ ರಕ್ಷಣೆ ನೀಡಿದ ಆರೋಪದ ಮೇಲೆ ಇನ್ನಿಬ್ಬರ ಬಂಧನ

ಹಾಸನಾಂಬೆ ದರ್ಶನದ ವೇಳೆ ಅವಘಡ: ಆಸ್ಪತ್ರೆಗೆ ಬಂದು, ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಗುಂಡೂರಾವ್..

ಹಾಸನಾಂಬೆಯ ದರ್ಶನದ ವೇಳೆ ಶಾಕ್ ಹೊಡೆದು ಯುವತಿಯ ಸ್ಥಿತಿ ಗಂಭೀರ: ಹಲವರು ಆಸ್ಪತ್ರೆಗೆ ದಾಖಲು

- Advertisement -

Latest Posts

Don't Miss