National Political News: ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಡಾ.ಮೋಹನ್ ಯಾದವ್ ಇಂದು ಪದಗ್ರಹಣ ಮಾಡಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿ, ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು. ರಾಜ್ಯಪಾಲರಾದ ಮಂಗೂಭಾಯ್ ಪಟೇಲ್ ಅವರು, ಪ್ರಮಾಣ ವಚನ ಬೋಧಿಸಿದ್ದು, ಉಪಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ, ಜಗದೀಶ್ ದಿಯೋರಾ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಬಾರಿ ಬಿಜೆಪಿ ಹೊಸ ಮುಖಗಳನ್ನು ಪರಿಚಯ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಛತ್ತೀಸ್ಘಡ್, ರಾಜಸ್ತಾನದಲ್ಲಿ ಹೇಗೆ ಹೊಸಬರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆಯೋ, ಅದೇ ರೀತಿ ಮಧ್ಯಪ್ರದೇಶದಲ್ಲಿ ಹಲವು ವರ್ಷಗಳಿಂದ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಟ್ಟು, ಡಾ.ಮೋಹನ್ ಯಾದವ್ ಅವರನ್ನು ಸಿಎಂ ಪಟ್ಟಕ್ಕೇರಿಸಿದೆ.
ನಿನ್ನೆ ತಮ್ಮ ವಿದಾಯ ಭಾಷಣದ ವೇಳೆ ಮಾತನಾಡಿದ್ದ ಶಿವರಾಜ್ ಸಿಂಗ್ ಚೌಹಾಣ್, 2005ರಲ್ಲಿ ನಾನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದೆ. ಇಷ್ಟು ನಾನು ಸಿಎಂ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ನನಗೆ ತೃಪ್ತಿ ಇದೆ. ಆದರೆ ನಾನು ಈಗ ಕೇಂದ್ರದ ಬಳಿ ಹೋಗಿ, ನನಗಾಗಿ ಏನನ್ನಾದರೂ ಕೇಳುವ ಬದಲು, ಸಾಯುವುದೇ ಮೇಲು. ಹಾಗಾಗಿ ನಾನು ಏನನ್ನೂ ಕೇಳಲು ಹೋಗುವುದಿಲ್ಲ. ಇಲ್ಲಿನ ಜನರೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದೆ. ನನ್ನ ಉಸಿರಿರುವವರೆಗೂ ಈ ಬಾಂಧವ್ಯ ಹೀಗೆ ಇರುತ್ತದೆ ಎಂದು ಹೇಳಿದ್ದಾರೆ.
ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ
ಇದೇ ದಿನ ಸಂಸತ್ ಮೇಲೆ ದಾಳಿ ನಡೆಸುುತ್ತೇನೆಂದು ಹೇಳಿದ್ದ ಖಲಿಸ್ತಾನಿ ಉಗ್ರ..
‘ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ’