Lucknow: ನಾವು ಆನ್ಲೈನ್ನಲ್ಲಿ ಏನನ್ನಾದರೂ ಆರ್ಡರ್ ಹಾಕಿದಾಗ, ನಾವು ಅದಕ್ಕಾಗಿ ದುಡ್ಡು ನೀಡಿದ್ದರೂ ಕೂಡ ಅದು ನಮ್ಮ ಕೈಗೆ ಸಿಗದಿದ್ದಾಗ, ನಾಾವು ಯಾವ ಕಂಪನಿಯಿಂದ ಆರ್ಡರ್ ಹಾಕಿದ್ದೆವೋ, ಅದೇ ಕಂಪನಿಗೆ ಕಾಲ್ ಮಾಡಿ, ವಿವರಣೆ ಕೇಳುತ್ತೇವೆ. ಅಥವಾ ಹಣ ವಾಪಸ್ ಕೇಳುತ್ತೇವೆ.
ಆದರೆ ಓರ್ವ ಯುವಕ ಯ್ಯೂಟ್ಯೂಬ್ ವೀಡಿಯೋ ನೋಡಿ, ಎಮ್ಮೆ ಆರ್ಡರ್ ಹಾಕಿದ್ದಾನೆ. ಉತ್ತರಪ್ರದೇಶದ ರಾಯ್ ಬರೇಲಿಯ ರೈತನಾಗಿರುವ ಸುನೀಲ್ ಕುಮಾರ್ ಎಮ್ಮೆ ಹುಡುಕಾಟದಲ್ಲಿದ್ದು, ಕಿಸಾನ್ ಭೈಯ್ಯಾ ಡೈರಿ ಅನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಬಂದ ಉತ್ತಮ ತಳಿಯ ಎಮ್ಮೆ ನೋಡಿ ಇಂಪ್ರೆಸ್ ಆಗಿದ್ದಾನೆ. ಈ ಎಣ್ಣೆ ದಿನಕ್ಕೆ 18 ಲೀಟರ್ ಹಾಲು ನೀಡುತ್ತದೆ. ಅತ್ಯುತ್ತಮ ತಳಿಯ ಎಮ್ಮೆ ಇದಾಗಿದೆ ಎಂದು ಕಲರ್ ಕಲರ್ ಆಗಿ ಕಾಗೆ ಹಾರಿಸಿದ್ದಾರೆ.
ಇದನ್ನು ನಂಬಿದ ಸುನೀಲ್, ಅಲ್ಲಿ ನಮೂದಿಸಿದ್ದ ಫೋನ್ ನಂಬರ್ ಕಂಡು ಆ ನಂಬರ್ಗೆ ಕಾಲ್ ಮಾಡಿ, ನನಗೆ ಈ ಎಮ್ಮೆ ಬೇಕು ಎಂದು ಹೇಳಿದ್ದಾನೆ. ಅವರು ಎಮ್ಮೆಯನ್ನು ಮನೆಗೆ ತಲುಪಿಸುವುದಾಗಿ ಹೇಳಿದ್ದು, ಎಮ್ಮೆ ಬೆಲೆ 55 ಸಾವಿರ ರೂಪಾಯಿ ಆಗುತ್ತದೆ ಎಂದಿದ್ದಾರೆ. ಅಲ್ಲದೇ 10 ಸಾವಿರ ಅಡ್ವಾನ್ಸ್ ಕೊಡಬೇಕು ಎಂದಿದ್ದಾರೆ. ಎಮ್ಮೆ ಕಂಡು ಇಂಪ್ರೆಸ್ ಆಗಿದ್ದ ಸುನೀಲ್, ತಕ್ಷಣ ಅವರು ಹೇಳಿದಂತೆ, ಅಕೌಂಟ್ಗೆ 10 ಸಾವಿರ ಟ್ರಾನ್ಸಫರ್ ಮಾಡಿದ್ದಾನೆ.
ಆದರೆ ಹೇಳಿದ ದಿನ ಎಮ್ಮೆ ಬರಲಿಲ್ಲವೆಂದು ಮತ್ತೆ ಕಾಲ್ ಮಾಡಿ ಸುನೀಲ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆಗಲೂ ಆ ಜನರು 25 ಸಾವಿರ ಅಕೌಂಟ್ಗೆ ಹಾಕಿದ್ರೆ, ಎಮ್ಮೆಯನ್ನು ಇಂದೇ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಆಗ ಎಚ್ಚೆತ್ತುಕೊಂಡ ಸುನೀಲ್, ದುಡ್ಡು ಹಾಕದೇ, ಸುಮ್ಮನಾಗಿದ್ದಾನೆ. ಮತ್ತೆ ಕಾಲ್ ಮಾಡಿದಾಗ, ಇವನ ನಂಬರ್ನ್ನು ಹಣ ಪಡೆದ ಕಳ್ಳರು ಬ್ಲಾಕ್ ಮಾಡಿದ್ದಾರೆ.
ತಿರುಪತಿಯಲ್ಲಿ ಭಿಕ್ಷುನಂತೆ ತಿರುಗಿದ ಈ ಖ್ಯಾತ ನಟ ಯಾರೆಂದು ಗೊತ್ತೇ..?
ಬಿಗ್ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ