Hubli News: ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ಅವರು ವಾರದಲ್ಲಿ ಮೂರು ಬಾರಿ ಪ್ರಧಾನಿ ನರೇಂದ್ರ ಮೋದಿ, ಎರಡು ಬಾರಿ ಪ್ರಲ್ಹಾದ್ ಜೋಶಿಗೆ ಬೈಯಬೇಕೆಂದು ಕಾಂಗ್ರೆಸ್ ಪಕ್ಷ ಟಾರ್ಗೆಟ್ ಆಗಿ ಅವರಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ನಗರದಲ್ಲಿಂದು ಲೋಕಸಭಾ ಚುನಾವಣೆ ನಿಮಿತ್ತವಾಗಿ ಪಕ್ಷದ ಅಧಿಕೃತ ಕಾರ್ಯಾಲಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ ಲಾಡ್ ಟೀಕೆ ಮಾಡಬೇಕೆಂಬ ವಿಷಯವನ್ನು ಕಾಂಗ್ರೆಸ್ ನಾಯಕರೇ ನಮಗೆ ಹೇಳಿದ್ದಾರೆ. ಸಂತೋಷ ಲಾಡ್ ನೀಡುವ ಹೇಳಿಕೆಯಲ್ಲಿ ಗಂಭೀರತೆ ಇದೆಯೇ ಎಂದು ಪ್ರಶ್ನೆ ಮಾಡಿದರು.
ವಲ್ಲಭಬಾಯಿ ಪಟೇಲ್ ಗುಜರಾತ್ ಮಣ್ಣಿನ ಮಗ, ಅಂತಹ ನಾಯಕರಿಗೆ ಗೌರವ ಕೊಡುವ ಕೆಲಸ ಬಿಜೆಪಿಯಿಂದ ಆಗಿದೆ ಎಂದರು. ಇಂದು ರಾಜ್ಯ ಸರ್ಕಾರ ಒಂದು ಲಕ್ಷ 90 ಸಾವಿರ ಕೋಟಿ ಸಾಲ ಮಾಡಿದೆ. ಸರ್ಕಾರ ಇವತ್ತು ಅಧೋಗತಿಗೆ ಹೋಗಿದೆ. ದೇವಸ್ತಾನದ ಹುಂಡಿಗೆ ಕನ್ನ ಹಾಕುವ ಪಾಪದ ಕೆಲಸ ಸರ್ಕಾರ ಮಾಡಿದೆ. ದೇವಸ್ಥಾನದ ಹಣವನ್ನು ಸರ್ಕಾರ ನಿಂತು ಲೂಟಿ ಹೊಡೆಯುತ್ತಿದೆ ಎಂದು ಕಿಡಿಕಾರಿದರು.
ಹಿಂದೂಗಳ ಭಾವನೆಗೆ ಕಾಂಗ್ರೆಸ್ ದಕ್ಕೆ ತಂದಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯಾದ್ಯಂತ ಈ ವಿಷಯವಾಗಿ ಹೋರಾಟ ಮಾಡಲಾಗುವುದು. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಮಾದರಿಯ ಹೋರಾಟ ಮಾಡಲಾಗುವುದು ಎಂದರು.
ಜಗದೀಶ್ ಶೆಟ್ಟರ್ ಕಾರ್ಯಾಲಯಕ್ಕೆ ಹಾಜರಾಗದ ವಿಷಯವಾಗಿ ಮಾತನಾಡಿ, ಇಂದು ಜಗದೀಶ್ ಶೆಟ್ಟರ್ ಊರಲ್ಲಿ ಇಲ್ಲ, ಹಾಗಾಗಿ ಕಾರ್ಯಾಲಯ ಉದ್ಘಾಟನೆಗೆ ಬಂದಿಲ್ಲ, ಶೆಟ್ಟರ್ ಜತೆಗೆ ಇರೋ ಕಾರ್ಯಕರ್ತರನ್ನು ವಾಪಾಸ್ ತೆಗೆದುಕೊಳ್ಳಲು ತಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ನಾವೆಲ್ಲರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ. ಫೆ.26 ರ ಬಳಿಕ ಜಗದೀಶ್ ಶೆಟ್ಟರ್ ನಮ್ಮೊಂದಿಗೆ ಇರಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಸತ್ಯಪಾಲ್ ಮಲಿಕ್ ನಿವಾಸದ ಮೇಲೆ ಸಿಬಿಐ ರೇಡ್: ಇದು ಬಿಜೆಪಿಗರ ಕುಟಿಲ ಕಾರಸ್ತಾನವೆಂದ ಸಿಎಂ ಸಿದ್ದರಾಮಯ್ಯ
ಈ ದೇವರನ್ನು ನಂಬಿದ್ದಕ್ಕೆ ನನ್ನ ಪತಿ ಚುನಾವಣೆಯಲ್ಲಿ ಗೆದ್ದಿದ್ದರು: ಭವಾನಿ ರೇವಣ್ಣ
ನಾನು ಕಾಣಿಸಿಕೊಳ್ಳದ್ದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದರು: ಭವಾನಿ ರೇವಣ್ಣ




