Monday, June 23, 2025

Latest Posts

ಬಿ.ಸಿ.ಪಾಟೀಲ್ ಅಳಿಯನ ಸಾ*ವಿನ ಸೀಕ್ರೆಟ್- ಪ್ರತಾಪ್ ಕೋರ್ಟ್ ಮೊರೆ ಹೋಗಿದ್ದೇಕೆ?

- Advertisement -

ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತೇ ಇದೆ. ಇದು ಬಿ.ಸಿ.ಪಾಟೀಲ್ ಕುಟುಂಬಕ್ಕೆ ದೊಡ್ಡ ಬರಸಿಡಿಲು ಬಡಿದಂತಾಗಿದೆ. ನೆಚ್ಚಿನ ಮಗಳ ಪತಿ ಹಾಗೂ ಮನೆ ಮಗನಂತಿದ್ದ ಸೋದರ ಅಳಿಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಇಡೀ ಕುಟುಂಬವೆ ಕಂಗಾಲಾಗಿ ಹೋಗಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ಅಳಿಯ ಸಾವಿಗೆ ಶರಣಾಗಿದ್ದು ಯಾಕೆ ಎನ್ನುವ ಹತ್ತು ಹಲವು ಪ್ರಶ್ನೆಗಳು ಇದೀಗ ಮೂಡಿವೆ.

ಪ್ರತಾಪ್ ಕುಮಾರ್ ಬಿ.ಸಿ.ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಪತಿಯಾಗಿದ್ದಾರೆ. ಸಿನಿಮಾ ನಟ ಹಾಗೂ ರಾಜಕಾರಣಿ ಆಗಿದ್ದ ಬಿ.ಸಿ.ಪಾಟೀಲ್​ಗೆ ಇಬ್ಬರು ಹೆಣ್ಣು ಮಕ್ಕಳು. ಸೌಮ್ಯ ಪಾಟೀಲ್ ಹಿರಿಯ ಮಗಳು. ಸೃಷ್ಟಿ ಪಾಟೀಲ್ ಎರಡನೇ ಮಗಳು. ಪುತ್ರ ಇಲ್ಲದ ಕಾರಣಕ್ಕೆ ಪ್ರತಾಪ್ ಕುಮಾರ್​ ಅವರು ಬಿ.ಸಿ.ಪಾಟೀಲ್ ಅವರ ಮನೆ ಮಗನಂತಿದ್ದ. ಬಿ.ಸಿ.ಪಾಟೀಲ್ ಅವರ ಕೃಷಿ, ರಾಜಕೀಯ ಹೆಸರಂತೆ ಎಲ್ಲವನ್ನೂ ಪ್ರತಾಪ್ ನೋಡಿಕೊಳ್ಳುತ್ತಿದ್ರು.. ಹಾವೇರಿ ಜಿಲ್ಲೆಯ ಹಿರೇಕೆರೂರಿನ ಜನರಿಗೆ ಪ್ರತಾಪ್ ಚಿರಪರಿಚಿತ. ಜನರೊಂದಿಗೆ ಸಾಕಷ್ಟು ಅನ್ಯೋನ್ಯತೆಯಿಂದ ಇದ್ದರು. ಆದ್ರೆ, ಇಂತಹ ವ್ಯಕ್ತಿ ದಿಢೀರ್ ಆತ್ಮಹತ್ಯೆಗೆ ಶರಣಾಗ್ತಾನೆ ಎಂದ್ರೆ ನಿಜಕ್ಕೂ ನಂಬುದಕ್ಕೆ ಅಸಾಧ್ಯ..
ಅಳಿಯ ಆತ್ಮಹತ್ಯೆ ಕುರಿತು ಬಿ.ಸಿ.ಪಾಟೀಲ್ ಅವರು ಮಾತನಾಡಿದ್ದು, ಪ್ರತಾಪ್​ಗೆ ಮಕ್ಕಳಾಗಿಲ್ಲ ಎಂಬ ದೊಡ್ಡ ಕೊರಗು ಇತ್ತಂತೆ. ಇದರಿಂದ ಬೇಸತ್ತು ಹೋಗಿದ್ದ ಪ್ರತಾಪ್​, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಕೋರ್ಟ್​ ಮೊರೆ ಹೋಗಿದ್ರಂತೆ. ಕೆಲವೇ ದಿನಗಳಲ್ಲಿ ಕೋರ್ಟ್ ಅನುಮತಿಯೂ ಕೊಡುತ್ತಿತ್ತು. ಆದರೆ, ಅಷ್ಟರಲ್ಲೇ ಪ್ರತಾಪ್ ಬಾರದ ಲೋಕಕ್ಕೆ ಪ್ರಯಣ ಬೆಳೆಸಿದ್ದಾರೆ..

ದೇಶದಲ್ಲಿ ಹೆಚ್ಚಾಗುತ್ತಿದೆ ಮಕ್ಕಳು ಆಗಿಲ್ಲವೆಂಬ ಕೊರಗು: ಪ್ರಿಯ ವೀಕ್ಷಕರೇ.. ಮಕ್ಕಳು ಆಗುತ್ತಿಲ್ಲ ಕೊರಗು ಕೇವಲ ಪ್ರತಾಪ್ ಕುಮಾರ್​ರದ್ದು ಮಾತ್ರವಲ್ಲ. ಪ್ರಸ್ತುತ ದಿನಗಳಲ್ಲಿ ಲಕ್ಷಾಂತರ ಜನರಿಗೆ ಮಕ್ಕಳ್ತಾಲ್ಲ ಅನ್ನೋ ಕೊರಗು ಕಾಡುತ್ತಿಲ್ಲ. ಹಣ ಎಷ್ಟದ್ರೂ ಖರ್ಚಾಗಲೂ ಒಂದೂ ಮಗು ಆಗಲಿ ಅಂತ ದಂಪತಿಗಳು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ. ಇದ್ರಲ್ಲಿ ಶೇ.10ರಷ್ಟು ಮಂದಿ ಸಕ್ಸಸ್ ಕಂಡು, ಖುಷಿಯಿಂದಿದ್ದಾರೆ. ಆದರೆ, ಎಷ್ಟೇ ಹಣ ಖರ್ಚು ಮಾಡಿದ್ರೂ, ಎಷ್ಟೇ ದೇವರಿಗೆ ಹರಕೆ ಹೊತ್ತರೂ ಕೆಲವರಿಗೆ ಮಕ್ಕಳು ಆಗುತ್ತಿಲ್ಲ.
ಆಧುನಿಕ ಜೀವನ ಶೈಲಿಯಲ್ಲಿ ಮಹಿಳೆಯರು ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಸುತ್ತ ಮುತ್ತಲೂ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಆರೋಗ್ಯವಂತ ರಾಗಿರುತ್ತಿದ್ದರು. ಹಾಗಾಗಿ ಮಕ್ಕಳನ್ನು ಪಡೆಯಲು ಯಾವುದೇ ತೊಂದರೆ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ದೇಹದ ಆರೋಗ್ಯ ಮತ್ತು ದಿನನಿತ್ಯದ ಆಹಾರ ಸೇವನೆಯಿಂದಾಗಿ ಇಂದಿನ ಯುವ ಪೀಳಿಗೆ ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಐವಿಎಫ್​ ಗರ್ಭಧಾರಣೆ ಭಾರೀ ಬೇಡಿಕೆ: ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್‌ ವಿಟ್ರೊ ಫರ್ಟಿಲೈಸೇಷನ್‌ ಅಂದರೆ ಐವಿಎಫ್‌ ಮೂಲಕ ಗರ್ಭಧಾರಣೆ ಮಾಡಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಐಯುಐ ಮತ್ತು ಐವಿಎಫ್‌ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್‌ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‌ಗೆ ಸುಮಾರು 1.75 ರೂ. ವೆಚ್ಚ ಆಗಬಹುದು.

ಐವಿಎಫ್‌ ಮೂಲಕ ಮಕ್ಕಳನ್ನು ಮಾಡಿಕೊಂಡರೆ ಮುಂದೆ ತೊಂದರೆ ಆಗಲಿದೆಯೇ? ಎಂಬ ಭಾಚನೆಯೂ ಜನರನ್ನು ಕಾಡುತ್ತಿದೆ.ಐವಿಎಫ್ ಮೂಲಕ ಆದ ಮಕ್ಕಳೂ ಕೂಡ ಮಾಮೂಲಿ ಮಕ್ಕಳಂತೆ ಇರುತ್ತವೆ. ಅದರಲ್ಲಿ ಪತ್ನಿಯ ಅಂಡಾಣುವಿನಲ್ಲಿ ಪತಿಯ ವೀರಾರ‍ಯಣು ಸೇರಿಸಿ ಭ್ರೂಣ ಬೆಳೆಸುತ್ತೇವೆ. ಅಂಥ ವ್ಯತ್ಯಾಸವೇನೂ ಇಲ್ಲ. ಐವಿಎಫ್‌ ತಂತ್ರಜ್ಞಾನದ ಮೂಲಕ ಪಡೆಯುವ ಮಕ್ಕಳು ಮಾಮೂಲಿಯಂತೆ ಇರಲಿವೆ, ಅವರಿಗೆ ಭವಿಷ್ಯದಲ್ಲಿಯಾವುದೇ ಆರೋಗ್ಯ ಸಮಸ್ಯೆ ಆಗದು, ಅಡ್ಡ ಪರಿಣಾಮಗಳೇನೂ ಇರುವುದಿಲ್ಲ. ಆ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತಿರುತ್ತವೆ. ಯಾವುದೇ ನ್ಯೂನತೆ ಕಾಣುವುದಿಲ್ಲ. ಇದೇ ಕಾರಣಕ್ಕೆ ದೇಶದಲ್ಲಿ ಐವಿಎಫ್​ಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಐವಿಎಫ್​ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ.
ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್: ತಡವಾಗಿ ಮದುವೆ, ಜೀವನದಲ್ಲಿನ ಕಮಿಟ್ ಮೆಂಟ್, ಆರ್ಥಿಕತೆ ಹೊರೆ ಹಾಗೂ ದಂಪತಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಸಾಕಷ್ಟು ಜನ ದಂಪತಿಗಳು ಮಕ್ಕಳಾಗದ ಸಮಸ್ಯೆಯನ್ನ ಎದುರಿಸುತ್ತಿರುತ್ತಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ದುಬಾರಿ ಚಿಕಿತ್ಸೆ ವಿಧಾನವಾದ ಐವಿಎಫ್​ನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ದಂಪತಿಗಳು ಮಕ್ಕಳನ್ನ ಪಡೆಯಲು ಐವಿಎಫ್ ನಂತಹ ಚಿಕಿತ್ಸೆಯನ್ನ ನೀಡಲು ಆರೋಗ್ಯ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ. ಆರ್ಥಿಕ ಹೊರೆಯಿಂದಾಗಿ ಇಷ್ಟು ದಿನ ಎಷ್ಟೋ ದಂಪತಿಗಳಿಗೆ ಮಕ್ಕಳನ್ನ ಮಾಡಿಕೊಳ್ಳುವ ಆಸೆ ಇದ್ದರೂ ಸಹ ಚಿಕಿತ್ಸೆಗೆ ಲಕ್ಷಾಂತರ ಹಣವಿಲ್ಲದೇ ಮಕ್ಕಳನ್ನ ಪಡೆಯದೇ ಹಿಂದೇಟು ಹಾಕುತ್ತಿದ್ರು. ಆದರೆ, ಬಹಳ ಬೇಡಿಕೆ ಇರೋ IVF ಚಿಕಿತ್ಸೆಯನ್ನ ಸರ್ಕಾರ ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, ಯಾರು ಬೇಕಾದರೂ IVF ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಶುರುವಾಗಲಿದೆ.

vo: ಒಟ್ನಲ್ಲಿ ಪ್ರಪಂಚದಲ್ಲಿ ಮಕ್ಕಳು ಆಗದಿರೋ ಎಷ್ಟೋ ದಂಪತಿಗಳು ಜೀವನ ಮಾಡುತ್ತಿದ್ದಾರೆ. ಆದ್ರೆ, ಮಕ್ಕಳು ಆಗದೇ ಇರೋ ಕೊರಗಿನಿಂದ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರೋದು ನಿಜಕ್ಕೂ ದುರಂತವೇ ಸರಿ…

- Advertisement -

Latest Posts

Don't Miss