ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ಇನ್ನೇನು ಸಾಲು ಸಾಲು ಹಬ್ಬಗಳು ಬರುತ್ತಿದೆ. ಕೊರೊನಾದಿಂದಾಗಿ ಯಾರ ಮನೆಯಲ್ಲೂ ಒಲೆ ಉರಿಯಲಿಲ್ಲ ಎಂದಾಗಬಾರದು. ಹಾಗಾಗಿ ಪ್ರತಿ ಬಡಕುಟುಂಬಕ್ಕೆ ಪ್ರತಿ ತಿಂಗಳು ನವೆಂಬರ್ ತನಕ 5 ಕೆಜಿ ಅಕ್ಕಿ, ಬೇಳೆ ಮತ್ತು ಗೋಧಿ ನೀಡುತ್ತೇವೆಂದು ಘೋಷಿಸಿದರು.

ಈ ವೇಳೆ ಭಾಷಣದಲ್ಲಿ ನಾಗಪಂಚಮಿ, ಗಣೇಶ್ ಚತುರ್ಥಿ, ಓನಮ್, ಕಾಟಿ ಬೀಹು, ದಸರಾ, ದೀಪಾವಳಿ ಬರುತ್ತದೆ ಎಂದು ಮೋದಿ ಹೇಳಿದರು. ಆದ್ರೆ ಮೋದಿಯವರು ಬಕ್ರೀದ್ ಬರುವುದನ್ನು ಮರೆತಿದ್ದಾರೆ ಎಂದು ಅಸಾವುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡುವುದರ ಮೂಲಕ ಈ ಬಗ್ಗೆ ಮಾತನಾಡಿರುವ ಅಸಾವುದ್ದೀನ್, ಚೀನಾ ಬಗ್ಗೆ ಮಾತನಾಡುವುದನ್ನು ಬಿಟ್ಟು ಚನಾ(ಕಡಲೆ) ಬಗ್ಗೆ ಪ್ರಧಾನಿ ಮಾತನಾಡಿದ್ರು. ಮುಂಬರುವ ಹಬ್ಬಗಳ ಬಗ್ಗೆ ಮಾತನಾಡುವಾಗ ಬಕ್ರೀದ್ ಹಬ್ಬವನ್ನ ಪ್ರಧಾನಿ ನೆನೆಯಲಿಲ್ಲ. ಇರಲಿ ಅವರಿಗೆ ಮುಂಚಿತವಾಗಿ ಬಕ್ರೀದ್ ಹಬ್ಬದ ಶುಭಾಶಯಗಳು ಎಂದಿದ್ದಾರೆ.
