Friday, September 20, 2024

Latest Posts

Darshan ; ದರ್ಶನ್ ಮತ್ತೊಂದು ಫೋಟೋ! : ದಾಸನ ಪಾಲಿಗೆ ಜೈಲಲ್ಲ.. ಅರಮನೆ!

- Advertisement -

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್, ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಎಲ್ಲರೂ ಸಾಮಾನ್ಯ ಖೈದಿನಗಳಂತೆ ಇರಬೇಕು. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಆ್ಯಂಡ್, ಜೈಲಿನಲ್ಲಿ ಮನೆಯ ರೀತಿಯಲ್ಲೇ ದರ್ಬಾರ್ ನಡೆಸ್ತಿದ್ದಾರೆ.

ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ನೀಡುತ್ತಿರುವ ಮತ್ತೊಂದು ಫೋಟೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಬೆಡ್ ಮೇಲೆ ಕುಳಿತುಕೊಂಡಿರುವ ಫೋಟೋ ಇದಾಗಿದ್ದು, ಮತ್ತೊಬ್ಬ ಖೈದಿ ಜೊತೆ ಹರಟೆ ಹೊಡೆಯುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಒಂದು ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡು, ಇನ್ನೊಂದು ಕೈಲಿಯಲ್ಲಿ ಸಿಗರೇಟ್ ಸೇದುತ್ತಾ ನಗುನಗುತ್ತಲೇ ಮಾತನಾಡುತ್ತಿದ್ದಾರೆ. ಈ ಮೂಲಕ ಪರಪ್ಪನ ಅಗ್ರಹಾರ ಜೈಲಿ ಖೈದಿಗಳಿಗೆ ಅರಮನೆಯೋ ಅಥವಾ ಜೈಲೋ ಅನ್ನೋ ಅನುಮಾನ ಮೂಡಿದೆ.

ಇನ್ನೂ ಭಾನುವಾರ ಜೈಲಿನ ಗಾರ್ಡನ್​ನಲ್ಲಿ ಕುಳಿತು ರೌಡಿಗಳೊಂದಿಗೆ ದರ್ಶನ್ ಹರಟೆ ಹೊಡೆಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋದಲ್ಲಿ ವಿಗ್ ತೆಗೆದಿರುವ ದರ್ಶನ್, ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಕುಳಿತಿದ್ರು. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಮತ್ತು ದರ್ಶನ್ ಮ್ಯಾನೇಜರ್ ನಾಗರಾಜ್ ಜೊತೆ ದರ್ಶನ್ ರೌಂಡ್ ಟೇಬಲ್ ಹರಟೆಯ ಫೋಟೋ ಎಲ್ಲೆಡೆ ವೈರಲ್ ಆಗ್ತಿದ್ದಂತೆ, ಜೈಲು ಅಧಿಕಾರಿಗಳ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ.

 

ಕುತೂಹಲದ ವಿಷ್ಯ ಅಂದ್ರೆ, ದರ್ಶನ್ ಜೈಲನ್ನೇ ರೆಸಾರ್ಟ್​ ಆಗಿ ಮಾಡಿಕೊಂಡ್ರಾ ಅನ್ನೋ ಪ್ರಶ್ನೆಯೂ ಉದ್ಭವವಾಗಿದೆ. ಯಾಕಂದ್ರೆ, ಜೈಲಿನಲ್ಲಿ ದರ್ಶನ್ ಮನೆಯಂತೆ ಆರಾಮಾಗಿದ್ದಾರೆ. ಅಲ್ಲದೇ, ಕೈಯಲ್ಲಿ ಬಂಗಾರ ಕಡಗ ಬೇರೇ ಹಾಕಿದ್ದಾರೆ. ಜೈಲಿನಲ್ಲಿರುವ ಆರೋಪಿಗಳು, ಚಿನ್ನದ ಆಭರಣಗಳನ್ನು ಹಾಕುವಂತಲ್ಲ. ಮಹಿಳಾ ಖೈದಿಗಳು ಮಾತ್ರ ಧಾರ್ಮಿಕವಾಗಿ ಹಾಕಬಹುದಾದಂತಹ ಒಡವೆಗಳನ್ನು ಮಾತ್ರ ಧರಿಸಬಹುದು. ಆದ್ರೆ, ದರ್ಶನ್​ ವಿಚಾರದಲ್ಲಿ ಈ ನಿಯಮ ಉಲ್ಲಂಘನೆ ಆಗಿದೆ. ಒಂದು ವೇಳೆ ಜೈಲಿನಲ್ಲಿ ಬಂಗಾರದ ವಸ್ತುಗಳನ್ನು ತೆಗೆದುಕೊಂಡು ಹೋದ್ರು, ಜೈಲಾಧಿಕಾರಿಗಳಿಗೆ ಡೆಪಾಸಿಟ್ ಮಾಡ್ಬೇಕು ಅನ್ನೋ ನಿಯಮವಿದೆ. ಆದ್ರೆ, ದಾಸನಿಗೆ ಚಿನ್ನದ ಒಡವೆ ಹಾಕುವ ಅವಕಾಶ ಕೊಟ್ಟಿದ್ಯಾರು? ಅನ್ನೋ ಪ್ರಶ್ನೆ ಕಾಡ್ತಿದೆ.

ಮತ್ತೊಂದು ವಿಚಾರ ಅಂದ್ರೆ, ಜೈಲಿನಲ್ಲಿ ಚೇರ್ ಪಡೆಯಬೇಕು ಅಂದ್ರೆ, ಮೆಡಿಕಲ್ ಆಫೀಸರ್ ಪರ್ಮಿಷನ್ ಬೇಕಾಗುತ್ತದೆ. ಆದ್ರೆ, ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಅವರು ಪ್ಲಾಸ್ಟಿಕ್ ಚೇರ್ ಮೇಲೆ ಆರಾಮಾಗಿ ಕುಳಿತುಕೊಂಡು, ಕಾಫಿ ಸವಿದಿದ್ದಾರೆ. ಜೈಲಿನ ರೂಲ್ಸ್ ಪ್ರಕಾರ, ಕಾಲಿಗೆ ಗುಂಡೇಟು ಬಿದ್ದವರಿಗೆ, ಕೈ-ಕಾಲು ಮುರಿದವರಿಗೆ, ಆರೋಗ್ಯ ಸರಿಯಿಲ್ಲದವರಿಗೆ, ವೃದ್ಧ ಆರೋಪಿಗಳಿಗೆ ಮಾತ್ರ ಚೇರ್ ಕೊಡಲಾಗುತ್ತದೆ. ಆದ್ರೆ, ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ರೂ, ಆರಾಮಾಗಿ ನಗುನಗುತ್ತಾ ಸಿಗರೇಟ್ ಸೇದುತ್ತಾ ಲೈಫ್ ಎಂಜಾಯ್ ಮಾಡ್ತಿರೋರಿಗೆ ಯಾಕೆ ಚೇರ್ ಕೊಡಲಾಯ್ತು? ಅಲ್ಲದೇ ಇತರೆ ಕೈದಿಗಳಿಗೆ ಸ್ಟೀಲ್ ಲೋಟ ಕೊಟ್ರೆ ದರ್ಶನ್​ಗೆ ಮಾತ್ರ ಕಾಫಿ ಮಗ್ ಕೊಟ್ಟಿರೋದು ಯಾರು ಎನ್ನುವುದಕ್ಕೆ ಅಲ್ಲಿನ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.

- Advertisement -

Latest Posts

Don't Miss