Saturday, October 19, 2024

Latest Posts

Kannada Bigg Boss Season 11: ನಡತೆ ಬಗ್ಗೆ ಮಾತನಾಡಿದ ಗೋಲ್ಡ್ ಸುರೇಶ್: ಕಣ್ಣೀರಿಟ್ಟ ಐಶ್ವರ್ಯ

- Advertisement -

Kannada Bigg Boss News: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಮೊದಲ ದಿನದಿಂದಲೇ ಜಗಳದ ಮೂಲಕ, ಶೋ ಸದ್ದು ಮಾಡಿತ್ತು. ಚೈತ್ರಾ ಕುಂದಾಪುರ, ಜಗದೀಶ್, ಉಗ್ರಂ ಮಂಜು ಇವರೆಲ್ಲ ಜಗಳ ಮಾಡಿಯೇ ಹೆಚ್ಚು ಸದ್ದು ಮಾಡಿದ್ದರು. ಇದೀಗ ಗೋಲ್ಡ್ ಸಂತೋಷ್ ಆಡಿರುವ ಮಾತಿಗೆ, ನಟಿ ಐಶ್ವರ್ಯ ಬೇಸರಗೊಂಡಿದ್ದು, ಕಣ್ಣೀರು ಹಾಕಿದ್ದಾರೆ.

ರಾಶಿ ರಾಶಿ ಚಿನ್ನಾಭರಣ ಧರಿಸುವ ಮೂಲಕ ಸದ್ದು ಮಾಡಿದ್ದ ಗೋಲ್ಡ್ ಸುರೇಶ್, ಈಗ ಬಿಗ್‌ಬಾಸ್ ಸ್ಪರ್ಧಿ. ಈ ಬಾರಿ ಬಿಗ್‌ಬಾಸ್‌ನಲ್ಲಿ ಸ್ವರ್ಗ- ನರಕವೆಂಬ ಕಾನ್ಸೆಪ್ಟ್ ಶುರುವಾಗಿದ್ದು, ನರಕದಲ್ಲಿ ಸುರೇಶ್‌ ಇದ್ದು, ಸ್ವರ್ಗದಲ್ಲಿ ಐಶ್ವರ್ಯಾ ಇದ್ದಾರೆ. ನರಕದಲ್ಲಿ ಇರುವವರು ಸ್ವರ್ಗಕ್ಕೆ ಬರಲು ಕೆಲ ಕಿತಾಾಪತಿಗಳನ್ನು ಮಾಡಿ, ಸ್ವರ್ಗವಾಸಿಗಳ, ಕೆಲವು ಅವಶ್ಯಕತೆಗಳು ಪೂರೈಕೆಯಾಗದಂತೆ ಮಾಡಿದ್ದರು. ಆ ಕೆಲಸ ಮುಂದುವರಿದಿದೆ.

ಇನ್ನೊಂದೆಡೆ ಗೋಲ್ಡ್ ಸುರೇಶ್, ಐಶ್ವರ್ಯಾಗೆ ನನಗೆ ನಿಮ್ಮ ನಡತೆ ಇಷ್ಟವಾಗಿಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇದರಿಂದ ಬೇಸರಗೊಂಡಿರುವ ಐಶ್ವರ್ಯ, ನನಗೆ ಇಲ್ಲಿಯವರೆಗೂ ಯಾರೂ ಹೀಗೆ ಹೇಳಿ, ಮನಸ್ಸಿಗೆ ನೋವುಂಟು ಮಾಡಿರಲಿಲ್ಲವೆಂದು ಕಣ್ಣೀರಿಟ್ಟಿದ್ದಾರೆ. ಮೊದಲ ದಿನದಿಂದ ನಾನು ನಿಮಗೆ ಅಣ್ಣ ಎಂದೇ ಭಾವಿಸಿದ್ದೆ. ಈಗಲೂ ಅಣ್ಣನಂತೆ ಕಾಣುತ್ತೇನೆ. ಆದರೆ ನೀವು ಅದನ್ನು ಅರ್ಥ ಮಾಿಕೊಂಡಿಲ್ಲವೆಂದು ಹೇಳಿದ್ದಾರೆ. ಅದಕ್ಕೆ ಸುರೇಶ್, ಹೌದು ಯಾಕಂದ್ರೆ ನನಗೆ ನಿಮ್ಮ ನಡತೆ ಇಷ್ಟವಾಗಲಿಲ್ಲವೆಂದು ಹೇಳಿದ್ದಾರೆ.

ಇನ್ನು ಐಶ್ವರ್ಯರನ್ನು ಗೌತಮಿ, ಧನರಾಾಜ್ ಎಲ್ಲರೂ ಸೇರಿ ಸಮಾಧಾನ ಮಾಡಿದ್ದಾರೆ. ನರಕವಾಸಿಗಳಲ್ಲಿ ಕೆಲವರಿಗೆ ನರಕ ಕಿರಿಕಿರಿಯಾಗುತ್ತಿದ್ದರೆ, ಇನ್ನು ಕೆಲವರು ಇದೊಂದು ನರಕವಾ ಎನ್ನುವಷ್ಟು ಕೂಲ್ ಆಗಿದ್ದಾರೆ. ಚೈತ್ರಾ ಕುಂದಾಪುರ, ನನಗೆ ಇದೊಂದು ಲೆಕ್ಕವೇ ಅಲ್ಲವೆಂದು ಹೇಳಿದರೆ, ಅನುಷಾ, ನನಗೆ ಮೊಸರನ್ನ, ಗಂಜಿ ಸೇವಿಸಿ ಅಭ್ಯಾಸವಿಲ್ಲ. ಕಾಫಿ ಕುಡಿಯದೇ ಇರಲಾಗುವುದಿಲ್ಲವೆಂದು ಕಣ್ಣೀರಿಟ್ಟಿದ್ದಾರೆ. ತುಕಾಲಿ ಸಂತೋಷ್ ಪತ್ನಿ ಮಾನಸ, ಬಿಗ್‌ಬಾಸ್ ನರಕವಾಸಿಗಳು ಇದ್ದಾರೆ ಅನ್ನೋದನ್ನ ಮರೆತ ಹಾಗಿದೆ. ಅವರ ಬಾಯಲ್ಲಿ ನಮ್ಮ ಹೆಸರೇ ಬರುವುದಿಲ್ಲ. ನನಗೆ ಹಸಿವು ಸಹಿಸಲು ಸಾಧ್ಯವಿಲ್ಲ. ಹೀಗೆ ಆದ್ರೆ ನಾನು ಸೋಪಿನ ಪೌಡರ್ ತಿಂದು ಬಿಡುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss