ಹಾಸನ: ಮನೆಯಲ್ಲಿ ಮಕ್ಕಳು ಆಟವಾಡುವ ಆಟಿಕೆ ವಸ್ತುಗಳು ಸೇರಿದಂತೆ ಇತರೆ ಎಲ್ಲಾ ವಸ್ತುಗಳನ್ನು ಉಪಯೋಗಿಸಿ ಬೇಡವಾದಗ ಮೂಲೆಗೆ ಎಸೆಯುವ ಬದಲು ನಮಗೆ ನೀಡಿದರೇ ಅದನ್ನು ಮತ್ತೊಬ್ಬರಿಗೆ ಉಪಯೋಗಕ್ಕೆ ಇಲ್ಲವೇ ಯಾರಿಗೂ ಉಪಯೋಗವಲ್ಲದ ವಸ್ತುಗಳನ್ನು ಕೂಡ ನಮಗೆ ಕೊಡಬಹುದು. ಹಾಸನ ನಗರವನ್ನು ಸ್ವಚ್ಛ ನಗರವನ್ನಾಗಿ ಕೊಂಡೂಯ್ಯಲು ಎಲ್ಲರೂ ಕೈಜೋಡಿಸುವಂತೆ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಕರೆ ನೀಡಿದರು.
ನಗರದ ರಿಂಗ್ ರಸ್ತೆ, ತನ್ವಿತ್ರಿಶ ಕಲ್ಯಾಣ ಮಂಟಪದ ಹಿಂಬಾಗ ಮೇ.೨೫ ರಿಂದ ಜೂನ್ ೫ರ ವರೆಗೂ ಮೇರಿ ಲೈಫ್ಟ್ ಸ್ಟೈಲ್ ಫಾರ್ ಎನವರ್ನಮೆಂಟ್ ಲೈಫ್, ಮೇರ ಸ್ವಚ್ಛ ಶೇಹರ್ ಯೋಜನೆಯ ನನ್ನ ಜೀವನ, ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ನಗರಸಭೆಯಿಂದ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಆರು ವಿವಿಧ ಬಗೆಯ ತ್ಯಾಜ್ಯವನ್ನು ಗುರಿತಿಸಿ ನಿರ್ವಹಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಮನೆಯಲ್ಲಿ ತಾವು ಬಳಕೆ ಮಾಡಿ ನಂತರ ಮೂಲೆಯಲ್ಲಿಟ್ಟುರುವ ವಸ್ತುಗಳನ್ನು ನಮಗೆ ತಂದು ಕೊಟ್ಟರೆ ನಾವು ಮರುಬಳಕೆ ಮಾಡಲು ಯೋಗ್ಯವಾಗಿದ್ದರೇ ಉಪಯೋಗಿಸಲಾಗುವುದು. ಇಲ್ಲವೇ ವಿಲೇವಾರಿ ಮಾಡಲಾಗುವುದು. ನಿಮ್ಮ ಮನೆ ಮತ್ತು ನಗರವನ್ನು ಈ ಮೂಲಕ ಸ್ವಚ್ಛ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಮನೆಯಲ್ಲಿರುವ ತ್ಯಾಜ್ಯವನ್ನು ಕಡಿಮೆ ಮಾಡಬೇಕು ಎಂದರು. ಮನೆಯಲ್ಲಿ ಮಕ್ಕಳು ಆಟವಾಡುವ ಆಟಿಕೆ ವಸ್ತುಗಳ ಆಡಿ ಬೇಡವಾದಗ ಅದನ್ನು ಮೂಲೆಯಲ್ಲಿ ಎಸೆಯುವ ಬದಲು ನಾವು ಅದನ್ನ ಬೇರೆಯವರಿಗೆ ತಲುಪಿಸಿ ಸಂತೋಷ ಪಡಬಹುದು. ಆಟಿಕೆ ವಸ್ತುಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಹಳೆಯ ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಫ್ಲಾಸ್ಟಿಕ್ ಚೀಲಗಳು ಆಗಿ ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದರು.
ಚಂದ್ರಶೇಖರ್ ಮಾತನಾಡಿ, ಕ್ಲಿಯರಿಂಗ್ ಕಂಪೋಸ್ಟಿಂಗ್ ಘಟಕ ಹೆಸರಿನಲ್ಲಿ ಕಸ ಮುಕ್ತ ಹಾಸನದ ಗುರಿಯೊಂದಿಗೆ ಸ್ವಚ್ಛ ಹಾಸನ ಕನಸಿನೊಂದಿಗೆ ಕಂಪನಿ ಪ್ರಾರಂಭಿಸಲಾಗಿದ್ದು, ಜೂನ್ ೫ರ ವಿಶ್ವ ಪರಿಸರ ದಿನಾಚರಣೆಯಲ್ಲಿ ಅಧಿಕೃತವಾಗಿ ಚಾಲನೆ ಕೊಡಲಾಗುವುದು. ಅದಕ್ಕೆ ಪೂರ್ವಕವಾಗಿ ಹಾಸನದ ನಗರಸಭೆ ಕಮಿಷನರ್ ಅವರು ನಮ್ಮನ್ನು ಸಂಪರ್ಕಿಸಿ ಮೇರಾ ಸ್ವಚ್ಛ ಶೇಹರ್ ಯೋಜನೆ ನನ್ನ ಜೀವನ, ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಕೇಂದ್ರಗಳ ಆಯ್ಕೆ ಮಾಡಿ ೬ ವಿವಿಧ ಬಗೆಯ ತ್ಯಾಜ್ಯಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಿದ್ದಾರೆ ಎಂದರು. ೧೫ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು ವರ್ಷವಿಡಿ ನಡೆಸಿದರೇ ಉತ್ತಮ ಎಂದು ಕಿವಿಮಾತು ಹೇಳಿದರು. ಜೀರೋ ವೇಸ್ಟ್ ತ್ಯಾಜ್ಯ ಮಾಡಲು ಮುಂದಾಗಬೇಕು. ಕಸವನ್ನು ನಾವೆ ಉಪಯೋಗಿಸುವ ಕೆಲಸ ಆಗಬೇಕಿದೆ. ಇದರಿಂದ ನಗರಸಭೆಯ ಕಸ ವಿಲೇವಾರಿ ವಾಹನ ಕಾಯುವುದೇ ಬೇಡ. ನಾವು ನಗರಸಭೆಗೆ ದೊಡ್ಡ ಶಕ್ತಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಭಾರತದಲ್ಲಿ ಮಾಡಲಾಗಿರುವ ನಂಬರ್ ಒನ್ ಸಿಟಿಯನ್ನು ಹಾಸನದಲ್ಲಿ ಮಾಡಲು ಎಲ್ಲರೂ ಕೈಜೋಡಿಸಲು ಮನವಿ ಮಾಡಿದರು.
ನಗರಸಭೆ ಆಯುಕ್ತ ಸತೀಶ್ ಕುಮಾರ್ ಮಾತನಾಡಿ, ಹಸಿರುಭೂಮಿ ಪ್ರತಿಷ್ಠಾನದ ಮೂಲಕ ಆರ್.ಪಿ. ವೆಂಕಟೇಶ್ ಮೂರ್ತಿ ಅವರು ಉತ್ತಮ ಪರಿಸರಕ್ಕಾಗಿ ಕೈಜೋಡಿಸಿದ್ದು, ಅದರಂತೆ ಕ್ಲೀನ್ ಸಿಟಿಯಲ್ಲಿ ಹೆಚ್.ಎಸ್. ಚಂದ್ರಶೇಖರ್ ಕೆಲಸ ನಿರ್ವಹಿಸುತ್ತಿದ್ದು, ಹಲವಾರು ಅಂಗ ಸಂಸ್ಥೆಗಳು ಇಂತಹ ಸೇವಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಬಾರತ ಸರಕಾರ ಹೊರಟಿರುವ ಕ್ಲೀನ್ ಸಿಟಿಗೆ ನಾವುಗಳು ಎಲ್ಲಾರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಹಸಿರುಭೂಮಿ ಪ್ರತಿಷ್ಠಾನದ ಮುಖ್ಯಸ್ಥರಾದ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ತ್ಯಾಜ್ಯ ವಸ್ತುಗಳನ್ನು ನಿರ್ವಹಣೆ ಮಾಡಲು ಮುಂದಾಗಿರುವ ಸಂಸ್ಥೆ ಕಾರ್ಯ ಉತ್ತಮವಾಗಿದೆ. ಮನೆ ಮನೆಗೆ ಹೋಗಿ ತ್ಯಾಜ್ಯ ವಸ್ತುಗಳ ಸಂಗ್ರಹ ಮಾಡಲು ನಗರಸಭೆಯು ಅಫೆ ವಾಹನ ಕೊಟ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಹಾಸನ ಸಿಟಿಯನ್ನು ಮಧ್ಯಪ್ರದೇಶದಂತೆ ಮೊದಲ ಸ್ಥಾನಕ್ಕೆ ಕೊಂಡೂಯ್ಯಬೇಕು. ಮುಂದಿನ ವರ್ಷದ ವಿಶ್ವ ಪರಿಸರ ದಿನಾಚರಣೆ ಒಳಗೆ ನಮ್ಮ ಹಾಸನ ನಗರವನ್ನು ಅತ್ಯುತ್ತಮವಾದ ಸ್ವಚ್ಛ ನಗರವನ್ನಾಗಿ ತೆಗೆದುಕೊಂಡು ಹೋಗಬೇಕು ಎಂಬುದಾಗಿ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ಪ್ರಾಯೋಗಿಕವಾಗಿ ಸ್ಥಳದಲ್ಲಿ ಇಡಲಾಗಿದ್ದ ಆರು ಬಗೆಯ ಕಸ ವಿಲೆವಾರಿಯ ಡಬ್ಬಿಯಲ್ಲಿ ಕಸವನ್ನು ಹಾಕುವ ಮೂಲಕ ಚಾಲನೆ ನೀಡಿದರು. ಇದೆ ವೇಳೆ ಕಸದಿಂದ ಮಾಡಲಾದ ಗೊಬ್ಬರವನ್ನು ನೀಡಿದರು. ಇದೆ ವೇಳೆ ಸ್ವಚ್ಛ ನಗರಕ್ಕೆ ಸಹಿ ಹಾಕಲಾಯಿತು. ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸೆಲ್ಫಿಯು ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಇಂಜಿನಿಯರ್ ರಂಗಸ್ವಾಮಿ, ಅನಂತ ಪ್ರಭು, ಗೋಪಾಲಕೃಷ್ಣ, ಪ್ರೇಮಕುಮಾರ್, ವೆಂಕಟೇಶ್, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ್ ಆದ ನಾನು…: ಮೊದಲ ಬಾರಿ ಡಿಸಿಎಂ ಪಟ್ಟಕ್ಕೇರಿದ ಕನಕಪುರ ಬಂಡೆ..
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆ 8 ಸಚಿವರ ಪ್ರಮಾಣವಚನ ಸ್ವೀಕಾರ




