- Advertisement -
Hubli News: ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬ ಹಿನ್ನೆಲೆ, ಅಭಿಮಾನಿಯೋರ್ವ ವಿಶೇಷವಾಗಿ ಶುಭಾಶಯ ಕೋರಿದ್ದಾನೆ.
ಸಚಿವ ಸಂತೋಷ ಲಾಡ್ ಹುಟ್ಟುಹಬ್ಬಕ್ಕೆ, ಈ ವ್ಯಕ್ತಿ ಪಾದಯಾತ್ರೆ ಮೂಲಕ ಶುಭಾಶಯ ಕೋರಿದ್ದಾನೆ. ಹುಬ್ಬಳ್ಳಿ ತಾಲೂಕಿನ ಅಲ್ಲಾಪುರ ಗ್ರಾಮದ ಯುವಕ ಮಲ್ಲಿಕಾರ್ಜುವ ರಡ್ಡೇರ್ ಎಂಬಾತ, ಸಂತೋಷ್ ಲಾಾಡ್ ಅಭಿಮಾನಿಯಾಗಿದ್ದು, ಬರಿಗಾಲಿನಿಂದ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಮಾಡುವ ಮೂಲಕ ಲಾಡ್ ಗೆ ಶುಭಾಶಯ ಕೋರಿದ್ದಾನೆ.
ಅಲ್ಲಾಪುರ ಗ್ರಾಮದಿಂದ ಸಿದ್ಧಾರೂಢ ಮಠಕ್ಕೆ, ಸುಮಾರು 20 ಕಿ.ಮೀ ಪಾದಯಾತ್ರೆ ಕ್ರಮಿಸಿ, ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ, ಸಂತೋಷ್ ಲಾಡ್ ಅವರಿಗೆ ಒಳ್ಳೆಯದಾಗಲಿ ಎಂದು ಮಲ್ಲಿಕಾರ್ಜುನ್ ಪ್ರಾರ್ಥಿಸಿದ್ದಾರೆ. ಈ ಮೂಲಕ ನೆಚ್ಚಿನ ನಾಯಕನಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ.
- Advertisement -