Thursday, December 4, 2025

Latest Posts

ಹೆಲ್ಮೆಟ್ ಬಗ್ಗೆ ಜಾಗೃತೆ ಮೂಡಿಸಲು ಜಮ್ಮುಗೆ ಬೈಕ್ ಮೇಲೆ ಹೊರಟ ಯುವತಿ

- Advertisement -

Dharwad News: ಧಾರವಾಡ: ಬೈಕ್ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸುವುದು ಹಾಗೂ ಸಂಚಾರ ನಿಯಮ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದ ಯುವತಿಯೊಬ್ಬರು ಧಾರವಾಡದಿಂದ ಜಮ್ಮು- ಕಾಶ್ಮೀರದ ಶ್ರೀನಗರದವರೆಗೆ ಬೈಕ್ ರೈಡಿಂಗ್ ಹೋಗುತ್ತಿದ್ದಾರೆ.

ಧಾರವಾಡ ಆ‌ರ್.ಎನ್.ಶೆಟ್ಟಿ ಕ್ರೀಡಾಂಗಣ ಹತ್ತಿರದ ನಿವಾಸಿಯಾದ ಪ್ರತೀಕ್ಷಾ ಶಿವಯೋಗಿ ಹರವಿಶೆಟ್ಟರ್ ಎಂಬುವರೇ ಫೆ.13ರಂದು ಹೊರಟವರು. ‘ಇತ್ತೀಚಿನ ದಿನಗಳಲ್ಲಿ ಅಪಘಾತದಲ್ಲಿ ಸಾವು- ನೋವುಗಳು ಹೆಚ್ಚು ಸಂಭವಿಸುತ್ತಿವೆ. ಹೀಗಾಗಿ ಜನರಲ್ಲಿ ಇನ್ನಷ್ಟು ಸಂಚಾರ ನಿಯಮಗಳ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಈ ರೈಡಿಂಗ್ ಹಮ್ಮಿಕೊಳ್ಳಲಾಗಿದೆ.

ಹೋಗುವುದು ಮತ್ತು ವಾಪಸ್ ಬರುವುದು ಸೇರಿ ಸುಮಾರು 6,500 ಕಿಮೀ ದೂರ ಕ್ರಮಿಸಬೇಕಾಗುತ್ತದೆ. ದಾರಿ ಮಧ್ಯೆ ಬರುವ ನಗರದಲ್ಲಿ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಸಂಚಾರ ನಿಯಮ ಜಾಗೃತಿ ಮೂಡಿಸಲಾಗುವುದು ಎಂದು ಪ್ರತೀಕ್ಷಾ ತಿಳಿಸಿದ್ದಾರೆ.

ರಾಕ್ ಲೈನ್ ವಿರುದ್ಧ “ದೊಡ್ಡ” ಷಡ್ಯಂತ್ರ..?

ಬಡವರು ಬಡವರಾಗಿ ಉಳಿಯುವುದಕ್ಕೆ ಕಾರಣಕರ್ತರೇ ಕಾಂಗ್ರೆಸ್‌ನವರು: ಬಿ.ವೈ.ವಿಜಯೇಂದ್ರ

ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಸತ್ಯವನ್ನು ಹುದುಗಿಸಿಡಲು ಯತ್ನಿಸುತ್ತದೆ: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss