Friday, September 20, 2024

Latest Posts

ಸರ್ಕಾರಿ ಸಿಬ್ಬಂದಿ ದರ್ಶನಕ್ಕೆ ವಿಐಪಿ ಸಾಲಲ್ಲಿ ಬಂದಿದ್ದಕ್ಕೆ ಅಧಿಕಾರಿಯಿಂದ ಹಲ್ಲೆ..

- Advertisement -

ಹಾಸನ: ಹಾಸನಾಂಬೆಯ ದರ್ಶನ ಪಡೆಯಲು ಹಲವಾರು ಭಕ್ತರು ದೂರದೂರಿನಿಂದ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ದೇವಿ ದರ್ಶನಕ್ಕೆ ಬಂದಿದ್ದ ಸರ್ಕಾರಿ ನೌಕರನಿಗೆ ಎ.ಸಿ. ಜಗದೀಶ್, ಕಪಾಳಮೋಕ್ಷ ಮಾಡುವ ಮೂಲಕ ದರ್ಪ ಮೆರೆದಿದ್ದಾರೆ. ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಕಳೆದ ರಾತ್ರಿ ಘಟನೆ ನಡೆದಿದ್ದು, ಸಣ್ಣ ಕಾರಣಕ್ಕೆ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳ‌ ಸಮ್ಮುಖದಲ್ಲೇ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ.

‘ಇಡೀ ದೇಶದಲ್ಲಿ ಬೂದುಗಾಜು ಇಟ್ಕಂಡು ಹುಡುಕಬೇಕು ಕಾಂಗ್ರೆಸ್ ಎಲ್ಲಿದೆ ಅಂತ’

ಹಾಸನದ ಉಪವಿಭಾಗಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡರಿಗೆ ಎಂಬುವವರಿಗೆ ಕಾಪಾಳಮೋಕ್ಷ ಮಾಡಿದ್ದಾರೆ. ಶಿವೇಗೌಡ ಕುಟುಂಬದೊಂದಿಗೆ ಹಾಸನಾಂಬೆಯ ದರ್ಶನಕ್ಕೆ ಬಂದಿದ್ದರು. ಕ್ಯೂನಲ್ಲಿ ಹೋಗುವುದನ್ನು ಬಿಟ್ಟು, ಮುಖ್ಯದ್ವಾರದ ಮೂಲಕ ಹೋಗಿದ್ದಕ್ಕೆ ಸಿಟ್ಟಾದ ಜಗದೀಶ್, ಕ್ಯೂನಲ್ಲಿ ಹೋಗುವಂತೆ ಹೇಳಿದ್ದಾರೆ.

ಈ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ಕೋಪಗೊಂಡ ಜಗದೀಶ್ ಎಲ್ಲರೆದುರು ಶಿವೇಗೌಡರಿಗೆ ಹೊಡೆದಿದ್ದಾರೆ. ಎಸಿ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest Posts

Don't Miss